ಉಪೇಂದ್ರ 
ಸಿನಿಮಾ ಸುದ್ದಿ

'ಅವರಿಗಾಗಿ' ಒಂದೇ ಒಂದು ಶಾಟ್ ಗೆ ಕರೆದರೂ ಖುಷಿಯಾಗಿ ಮಾಡುತ್ತೇನೆ; ಸ್ಕ್ರೀನ್‌ಟೈಮ್‌ ಬಗ್ಗೆ ನನಗೆ ಬೇಸರವಿಲ್ಲ: ಉಪೇಂದ್ರ

ಆಗಸ್ಟ್ ನಲ್ಲಿ ಬಿಡುಗಡೆಯಾದ ಕೂಲಿ ಚಿತ್ರದಲ್ಲಿನ ಪಾತ್ರದ ಕುರಿತು ಎದುರಾಗಿದ್ದ ಟೀಕೆಗಳಿಗೆ ಇಲ್ಲಿಯವರೆಗೂ ಮೌನವಾಗಿದ್ದ ಉಪೇಂದ್ರ, ತನ್ನ 45 ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.

ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಸೀಮಿತ ಅವಧಿಯ ಪಾತ್ರದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಈ ಕುರಿತು ಉಪೇಂದ್ರ ಸ್ಪಷ್ಟನೆ ನೀಡಿದ್ದು, ತಾನು ಬಹುಕಾಲದಿಂದ ಮೆಚ್ಚಿಕೊಂಡಿರುವ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡುವ ಅವಕಾಶದಿಂದ ಆ ಚಿತ್ರದಲ್ಲಿ ಮಾಡಲು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.

ಆಗಸ್ಟ್ ನಲ್ಲಿ ಬಿಡುಗಡೆಯಾದ ಕೂಲಿ ಚಿತ್ರದಲ್ಲಿನ ಪಾತ್ರದ ಕುರಿತು ಎದುರಾಗಿದ್ದ ಟೀಕೆಗಳಿಗೆ ಇಲ್ಲಿಯವರೆಗೂ ಮೌನವಾಗಿದ್ದ ಉಪೇಂದ್ರ, ತನ್ನ 45 ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪಾತ್ರ ಇಷ್ಟೇ ಅವಧಿ ಇರಬೇಕು ಎಂದು ಬಯಸುವುದಿಲ್ಲ. ರಜನಿಕಾಂತ್ ಅವರೊಂದಿಗೆ ಸ್ವಲ್ಪ ಸಮಯ ಕಾಣಿಸಿಕೊಂಡರೂ ಅದು ನನಗೆ ಮಹತ್ವದ ಕ್ಷಣವಾಗಿದೆ. ರಜನಿ ಸರ್‌ಗಾಗಿ ಕೂಲಿ ಚಿತ್ರದಲ್ಲಿ ಮಾಡಿದೆ ಎಂದು ಹೇಳಿದರು.

ರಜನಿ ಸರ್ ಜೊತೆ ಕೆಲಸ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆ ಸಿನಿಮಾದಿಂದ ಆ ಕನಸು ನನಸು ಆಯಿತು. ನಾನು ಅವರ ಅಭಿಮಾನಿ ಮಾತ್ರವಲ್ಲ. ನಾನು ಅವರ ಭಕ್ತ. ಅವರ ಅಭಿನಯ, ಅವರ ಪ್ರತಿಭೆ, ಅವರ ಸಿದ್ಧಾಂತ ಎಲ್ಲವೂ ಸ್ಪೂರ್ತಿಯಾಗಿದೆ. ತಲೈವಾರ್ ಅವರಿಗೆ ತಲೈವಾರ್ ಅವರೇ ಸಾಟಿ ಎಂದರು.

ಅವರಿಗಾಗಿ ಒಂದೇ ಒಂದು ಶಾಟ್ ಶಾಟ್‌ಗೆ ಕರೆದರೂ, ಖುಷಿಯಾಗಿ ಮಾಡುತ್ತೇನೆ. ಅವರ ಜೊತೆ ಸ್ಕ್ರೀನ್‌ಟೈಮ್‌ನ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಅವರ ಪಕ್ಕದಲ್ಲಿ ನಿಲ್ಲುವ ಅವಕಾಶ ಸಿಕ್ಕರೂ ನಾನು ಚೆನ್ನಾಗಿದ್ದೇನೆ. ಆರಂಭದಲ್ಲಿ ಒಂದೇ ಒಂದು ಫೈಟ್ ಸೀನ್ ಇದ್ದಾಗ ನಾನು ಚಿತ್ರಕ್ಕೆ ಸಹಿ ಹಾಕಿದ್ದೇನೆ. ನಂತರ ಅವರು ಇನ್ನೂ ಒಂದೆರಡು ದೃಶ್ಯಗಳಿಗೆ ನನ್ನ ಪಾತ್ರವನ್ನು ಹಿಗ್ಗಿಸಿದರು ಎಂದು ತಿಳಿಸಿದರು.

ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿಯಲ್ಲಿ ರಜನಿಕಾಂತ್ ಮಿತ್ರನಾದ ಕಲೀಶಾ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!