ಮಿಸ್ಟರ್ ರಾಣಿ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಮಿಸ್ಟರ್ ರಾಣಿ' ಚಿತ್ರದಲ್ಲಿ ನಾಯಕಿಯಾಗಿ ಬದಲಾದ ಸೈಕೋ ಜಯಂತ್; ಮಧುಚಂದ್ರ ಆ್ಯಕ್ಷನ್ ಕಟ್

ಚಿತ್ರದಲ್ಲಿ ಪಾರ್ವತಿ ನಾಯರ್ ಕೂಡ ನಟಿಸಿದ್ದಾರೆ. ಅವರ ಪಾತ್ರವು ರೋಚಕ ತಿರುವನ್ನು ನೀಡುತ್ತದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ಸೈಕೋ ಜಯಂತ್ ಇದೀಗ 'ಮಿಸ್ಟರ್ ರಾಣಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಸೈಕೋ ಜಯಂತ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಹಿಂದೆಂದೂ ನೋಡಿರದ ಪಾತ್ರದಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಜಯಂತ್ ನಾಯಕಿಯಾಗಿ ಗಮನ ಸೆಳೆಯಲಿದ್ದಾರೆ. ನಾಯಕನಾಗಿ ಗುರುತಿಸಿಕೊಳ್ಳಲು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಂತ್ ಅವರಿಗೆ ಇದೀಗ ನಾಯಕಿಯಾಗುವ ಅವಕಾಶ ಸಿಕ್ಕಿದೆ.

ನಿರ್ಮಾಪಕರ ಪ್ರಕಾರ, ಚಿತ್ರವು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ. ದೀಪಕ್ ಗೊಂದಲವನ್ನು ಸೃಷ್ಟಿಸುವ ಮತ್ತು ತನ್ನ ಸುತ್ತಲಿನ ಎಲ್ಲರನ್ನು ಗೊಂದಲಕ್ಕೀಡುಮಾಡುವ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಕಥೆಯು ಹೇಗೆ ತೆರೆದುಕೊಳ್ಳುತ್ತದೆ ಎಂದು ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ, ನಗುವುದು, ಏದುಸಿರು ಬಿಡುವುದು ಮತ್ತು ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುವಂತೆ ಮಾಡುತ್ತದೆ.

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ಮಧುಚಂದ್ರ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಈ ಚಿತ್ರವು ಆಶ್ಚರ್ಯ ಮತ್ತು ಹಾಸ್ಯದಿಂದ ತುಂಬಿದೆ. ಅದು ಪ್ರೇಕ್ಷಕರನ್ನು ಊಹಿಸುವಂತೆ ಮಾಡುತ್ತದೆ' ಎಂದು ಅವರು ಹೇಳುತ್ತಾರೆ. ಚಿತ್ರದ ಟ್ರೈಲರ್, ಈಗಾಗಲೇ 3.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮಿಸ್ಟರ್ ರಾಣಿ ಚಿತ್ರದ ಸ್ಟಿಲ್

ಚಿತ್ರದಲ್ಲಿ ಪಾರ್ವತಿ ನಾಯರ್ ಕೂಡ ನಟಿಸಿದ್ದಾರೆ. ಅವರ ಪಾತ್ರವು ರೋಚಕ ತಿರುವನ್ನು ನೀಡುತ್ತದೆ. ಇದು ಬಾಹುಬಲಿಯಲ್ಲಿ ಕೆಲಸ ಮಾಡಿದ ರವೀಂದ್ರ ನಾಥ್ ಅವರ ಛಾಯಾಗ್ರಹಣವಿದೆ. ನಾಯಕ ಜಯಂತ್ ಅವರನ್ನು ನಾಯಕಿಯಾಗಿ ಪರಿವರ್ತಿಸುವ ಕೆಲಸವನ್ನು ಚಂದನಾ ಅವರು ಮಾಡಿದ್ದಾರೆ. ನಾಯಕಿಯಾಗಿಯೇ ಕಾಣುವಂತೆ ಮೇಕಪ್ ಮಾಡಿದ್ದಾರೆ. ಮಿಸ್ಟರ್ ರಾಣಿ ಫೆಬ್ರುವರಿ 7 ರಂದು ಬಿಡುಗಡೆಯಾಗಲಿದೆ. ಬೆಲೆ 99 ರೂಪಾಯಿಗೆ ಟಿಕೆಟ್‌ ಲಭ್ಯವಿರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

SCROLL FOR NEXT