ಸೋನಲ್ ಮೊಂಥೆರೋ 
ಸಿನಿಮಾ ಸುದ್ದಿ

'ರಾಕ್ಷಸ' ಬಿಡುಗಡೆಗೆ ದಿನಾಂಕ ನಿಗದಿ; ನನ್ನ ಪಾತ್ರ ತುಂಬಾ ಪ್ರಭಾವಶಾಲಿಯಾಗಿದೆ ಎಂದ ಸೋನಲ್

ಸೋನಲ್ ಮದುವೆ ನಂತರದ ಮೊದಲ ಚಿತ್ರ 'ರಾಕ್ಷಸ' ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಎಚ್.ಲೋಹಿತ್ ನಿರ್ದೇಶನದ 'ಟೈಮ್ ಲೂಪ್' ಕಾನ್ಸೆಪ್ಟ್ ನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಅವರನ್ನು ಇತ್ತೀಚಿಗೆ ವಿವಾಹವಾದ ನಟಿ ಸೋನಾಲ್ ಮೊಂಥೆರೋ, ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಸಮಾನವಾಗಿ ಮುಂದುವರೆಸಿದ್ದಾರೆ. ಅವರು ಅಭಿನಯಿಸಿರುವ ಹಲವು ಚಿತ್ರಗಳು ರಿಲೀಸ್ ಅಥವಾ ನಿರ್ಮಾಣದ ಹಂತದಲ್ಲಿದ್ದು, ನಟನಾ ವೃತ್ತಿಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಸೋನಲ್ ಮದುವೆ ನಂತರದ ಮೊದಲ ಚಿತ್ರ 'ರಾಕ್ಷಸ' ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಎಚ್. ಲೋಹಿತ್ ನಿರ್ದೇಶನದ 'ಟೈಮ್ ಲೂಪ್' ಕಾನ್ಸೆಪ್ಟ್ ನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

ರಾಕ್ಷಸದಲ್ಲಿನ ತನ್ನ ಪಾತ್ರ ಕುರಿತು ಅನುಭವ ಹಂಚಿಕೊಂಡ ಸೋನಲ್, ಪಾತ್ರನನ್ನು ನನ್ನನ್ನು ಸೆಳೆಯಿತು. ಲೋಹಿತ್ ಅವರ ಹಿಂದಿನ ಚಿತ್ರಗಳಲ್ಲಿ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಬಲವಾದ ಸ್ತ್ರೀ ಪಾತ್ರ ತೋರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ರಾಕ್ಷಸ ಕಮರ್ಷಿಯಲ್ ಅಂಶಗಳಿರುವ ಹಾರರ್ ಚಿತ್ರವಾಗಿದೆ.

ಲೋಹಿತ್ ಅವರ ಟೈಮ್-ಲೂಪ್ ಪರಿಕಲ್ಪನೆ ಆಕರ್ಷಕವಾಗಿದ್ದು, ಪ್ರಜ್ವಲ್ ದೇವರಾಜ್ ಜೊತೆಗೆ ಕೆಲವು ಅದ್ಭುತವಾದ ಆಕ್ಷನ್ ಸೀಕ್ವೆನ್ಸ್‌ಗಳಿವೆ. ನನ್ನ ಪಾತ್ರ ಪ್ರಭಾವಶಾಲಿಯಾಗಿದೆ. ನನ್ನ ಪಾತ್ರವು ನೆರೆ ಮನೆಯ ವಿವಾಹಿತ ಮಹಿಳೆಗೆ ಹೋಲುತ್ತದೆ. 10 ಮಹಿಳೆಯರಲ್ಲಿ ಆರು ಮಂದಿ ಈ ಪಾತ್ರದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಇದೊಂದು ಅದ್ಬುತವಾದ ಪಾತ್ರವಾಗಿದೆ. ಮದುವೆಯ ನಂತರ ಆ ಭಾಗಗಳನ್ನು ಚಿತ್ರೀಕರಿಸುವುದು ಎಕ್ಸೈಟ್ ಆಗಿದೆ ಎಂದರು.

ಪಾತ್ರದ ಆಯ್ಕೆಯಲ್ಲಿ ತನ್ನ ಪತಿಯ ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸಿದ ಸೋನಲ್, ಮದುವೆಗೂ ಮುನ್ನ ಸ್ಕ್ರೀಪ್ಟ್ ಆಯ್ಕೆಯಲ್ಲಿ ಇಂಡಸ್ತ್ರಿಯಲ್ಲಿ ನನಗೆ ಯಾರು ಮಾರ್ಗದರ್ಶಕರು ಇರಲಿಲ್ಲ. ಈಗ ತರುಣ್ ಪಾತ್ರಗಳ ಆಯ್ಕೆಯಲ್ಲಿ ಸೂಕ್ತ ಬೆಂಬಲ ನೀಡುತ್ತಾರೆ. ಮದುವೆಗೂ ಮುನ್ನ ಸಹಿ ಮಾಡಲಾದ ಚಿತ್ರಗಳನ್ನು ಪೂರ್ಣಗೊಳಿಸಿದ್ದೇನೆ. ಸ್ವಲ್ಪ ವಿರಾಮ ಪಡೆದುಕೊಂಡಿದ್ದೆ. ಆದರೆ ಈ ಮತ್ತೆ ಹೊಸ ಉತ್ಸಾಹದೊಂದಿಗೆ ಕಂಬ್ಯಾಕ್ ಆಗಿರುವುದಾಗಿ ತಿಳಿಸಿದರು.

ವಿನೋದ್ ಪ್ರಭಾಕರ್ ಜೊತೆಗಿನ 'ಮಾದೇವ' ಬಿಡುಗಡೆಗೆ ಕಾಯುತ್ತಿದ್ದೇನೆ. ರಾಕ್ಷಸ ನಂತರ ತಳವಾರಪೇಟೆಯ ಶೂಟಿಂಗ್ ಮುಕ್ತಾಯಗೊಳಿಸಿದ್ದೇನೆ. ಅಲ್ಲದೇ ಸರೋಜಿನಿ ನಾಯ್ಡು ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಇತರ ಚಿತ್ರಗಳ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಸೋನಲ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT