ಹಾಯ್ ನಾನ್ನ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಹಾಯ್ ನಾನ್ನ' ಚಿತ್ರವನ್ನು ಕನ್ನಡದ 'ಭೀಮಸೇನ ನಳಮಹಾರಾಜ'ದಿಂದ ನಕಲು ಮಾಡಲಾಗಿದೆ: ನಿರ್ಮಾಪಕ ಆರೋಪ

ನಟ ನಾನಿ ಅವರಿಗೆ ಹಾಯ್ ನಾನ್ನ ಚಿತ್ರವು ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ಮೂಲಕ ಸೂಪರ್‌ಹಿಟ್ ಚಿತ್ರವಾಗಿ ಗುರುತಿಸಿಕೊಂಡಿದೆ.

ಅವನೇ ಶ್ರೀಮನ್ನಾರಾಯಣ ಮತ್ತು ಕಿರಿಕ್ ಪಾರ್ಟಿ ಚಿತ್ರಗಳಿಗೆ ಹೆಸರಾದ ಕನ್ನಡ ಚಿತ್ರ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ, ತೆಲುಗಿನ 'ಹಾಯ್ ನಾನ್ನ' ನಿರ್ದೇಶಕರು ರೀಮೇಕ್ ಹಕ್ಕುಗಳನ್ನು ಪಡೆಯದೆ ತಮ್ಮ 2020ರಲ್ಲಿ ತೆರೆಕಂಡ ಕನ್ನಡದ 'ಭೀಮಸೇನ ನಳಮಹಾರಾಜ' ಚಿತ್ರವನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ತೆಲುಗು ಚಿತ್ರವು ತನ್ನ ಚಿತ್ರದ ಮೂಲ ಕಥೆಯನ್ನು ಮತ್ತು ನಿರೂಪಣೆಯನ್ನು ನೇರವಾಗಿ ನನ್ನ ಚಿತ್ರದಿಂದ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಟ ನಾನಿ ಮತ್ತು ಚಿತ್ರ ನಿರ್ದೇಶಕರನ್ನು ಟೀಕಿಸಿದ ಅವರು, 'ರೀಮೇಕ್ ಹಕ್ಕುಗಳನ್ನು ಪಡೆಯದೆ, ಹಾಯ್ ನಾನ್ನ ಚಿತ್ರವನ್ನು ನಮ್ಮ ಮೂಲ ಚಿತ್ರ ಭೀಮಸೇನ ನಳಮಹಾರಾಜ ಚಿತ್ರದಿಂದ ಮಾಡಲಾಗಿದೆ. ಇಂತಹ ಕೆಲಸ ಮಾಡುವುದು ಸರಿಯಾಗಿದೆಯಾ, ನಾನಿ' ಎಂದಿದ್ದಾರೆ.

ನಟ ನಾನಿ ಅವರಿಗೆ ಹಾಯ್ ನಾನ್ನ ಚಿತ್ರವು ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ಮೂಲಕ ಸೂಪರ್‌ಹಿಟ್ ಚಿತ್ರವಾಗಿ ಗುರುತಿಸಿಕೊಂಡಿದೆ. 2023ರ ಡಿಸೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ನಾನಿ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶೌರ್ಯುವ್ ನಿರ್ದೇಶಿಸಿದ್ದು, ಫ್ಯಾಮಿಲಿ ಪ್ರೇಕ್ಷಕರನ್ನು ಆಕರ್ಷಿಸಿತು.

ಈ ಎರಡೂ ಚಿತ್ರಗಳಲ್ಲಿ ಕಥೆ ಹೇಳುವ ವಿಧಾನಕ್ಕೆ ಪ್ರಮುಖ ಸಾಮ್ಯತೆ ಇದೆ ಎಂಬುದನ್ನು ಚಿತ್ರದ ಅಭಿಮಾನಿಗಳು ಮತ್ತು ಪ್ರೇಕ್ಷಕರು ಗಮನಿಸಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ನಾಯಕನು ನಾಯಕಿಗೆ ಪ್ರೇಮಕಥೆಯನ್ನು ನಿರೂಪಿಸುತ್ತಾನೆ ಮತ್ತು ಈ ನಿರೂಪಣೆಯಲ್ಲಿ ಮಗು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಯ್ ನಾನ್ನ ಚಿತ್ರತಂಡ ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT