ಯಶಸ್ವಿನಿಯವರು ಗಾಯಗೊಂಡಿರುವುದು. 
ಸಿನಿಮಾ ಸುದ್ದಿ

ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರು ಬಿದ್ದು ಆಕಸ್ಮಿಕ: ಮಾಸ್ಟರ್ ಆನಂದ್ ಪತ್ನಿ ಕಾಲಿಗೆ ಗಾಯ, ಫೋಟೋ ವೈರಲ್

ಯಶಸ್ವಿನಿ ಅವರು ಹಾಟ್‌ ವಾಟರ್‌ ಸ್ಟೀಮ್‌ ತೆಗೆದುಕೊಳ್ಳುತ್ತಿದ್ದ ವೇಳೆ, ಮಿಸ್ಸಾಗಿ ಕಾಲಿಗೆ ಬಿಸಿ ನೀರು ಬಿದ್ದಿದೆ. ಬಳಿಕ ಉರಿ ತಾಳಲಾರದೆ ಯಶಸ್ವಿನಿಯವರು ಆಸ್ಪತ್ರೆಗೆ ಹೋಗಿದ್ದಾರೆ.

ಬೆಂಗಳೂರು: ಸ್ಟೀಮ್‌ ತೆಗೆದುಕೊಳ್ಳುವಾಗ ಬಿಸಿ ನೀರು ಬಿದ್ದು ನಟ, ನಿರೂಪಕ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಅವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯಶಸ್ವಿನಿಯವರು, ಕಳೆದ ಶನಿವಾರ ಎಲ್ಲರಿಗೂ ನಾರ್ಮಲ್‌ ಡೇ ಆದರೆ, ನನಗೆ ಮಾತ್ರ ಬ್ಯಾಡ್‌ ಡೇ ಆಗಿತ್ತು ಎಂದು ಹೇಳಿದ್ದಾರೆ.

ಯಶಸ್ವಿನಿ ಅವರು ಹಾಟ್‌ ವಾಟರ್‌ ಸ್ಟೀಮ್‌ ತೆಗೆದುಕೊಳ್ಳುತ್ತಿದ್ದ ವೇಳೆ, ಮಿಸ್ಸಾಗಿ ಕಾಲಿಗೆ ಬಿಸಿ ನೀರು ಬಿದ್ದಿದೆ. ಬಳಿಕ ಉರಿ ತಾಳಲಾರದೆ ಯಶಸ್ವಿನಿಯವರು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ವೈದ್ಯರು ಬ್ಯಾಂಡೇಜ್ ಮಾಡಿದ್ದು, ಮನೆಗೆ ಕಳುಹಿಸಿದ್ದಾರೆ. ಬಳಿಕ ಕಾಲುಗಳಲ್ಲಿ ದೊಡ್ಡ ದೊಡ್ಡ ಬೊಬ್ಬೆಗಳಾಗಿದ್ದು, ಪರಿಣಾಮ ಮತ್ತೆ ಆಸ್ಪತ್ರೆಗೆ ಹೋಗಿದ್ದಾರೆ. ಬಳಿಕ ಬಬಲ್ ಒಡೆದು ಸ್ಕಿನ್ ಔಟ್ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆ

ಘಟನೆ ವೇಳೆ ಮಾಸ್ಟರ್ ಆನಂದ್ ಅವರು ಮನೆಯಲ್ಲಿರಲಿಲ್ಲ. ಹಂಪಿ ಉತ್ಸವದಲ್ಲಿ ನಿರತರಾಗಿದ್ದರು. ಕಾರ್ಯಕ್ರಮದ ಬಳಿಕ ಮನೆಗೆ ಬಂದ ಮೇಲೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದರು. ಪತಿ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಾನಿನ್ನೂ ಚೇತರಿಸಿಕೊಂಡಿಲ್ಲ. ಬಹಳ ಹಿಂಸೆಯಾಗುತ್ತಿದೆ. ನನ್ನ ಗಂಡ ನನ್ನ ಜೊತೆ ಇರ್ತಾರೆ ಎಂದು ಖುಷಿಯೂ ಆಗುತ್ತಿದೆ ಎಂದು ಯಶಸ್ವಿನಿಯವರು ತಿಳಿಸಿದ್ದಾರೆ. ಇದೇ ವೇಳೆ ಕಾಲಿಗೆ ಗಾಯವಾಗಿರುವುದು ಹಾಗೂ ಬ್ಯಾಂಡೇಜ್ ಸುತ್ತಿರುವ ಫೋಟೋಗಳನ್ನು ಯಶಸ್ವಿನಿಯವರು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT