ಗೌರಿ ಕಿಶನ್  
ಸಿನಿಮಾ ಸುದ್ದಿ

ಬಾಡಿ ಶೇಮಿಂಗ್ ಪ್ರಶ್ನೆ ಕೇಳಿದ ಯೂಟ್ಯೂಬರ್ ನ್ನು ತರಾಟೆಗೆ ತೆಗೆದುಕೊಂಡ ನಟಿ ಗೌರಿ ಕಿಶನ್-Viral Video

ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆ, ಕೆಲಸದಿಂದ ಗುರುತಿಸಿಕೊಂಡಿರುವ ನಟಿ ಗೌರಿ ಅವರಿಗೆ ಅನುಚಿತ ಪ್ರಶ್ನೆ ಕೇಳಿದ ಯೂಟ್ಯೂಬರ್‌ನ ವರ್ತನೆಯನ್ನು ಚೆನ್ನೈ ಪ್ರೆಸ್ ಕ್ಲಬ್ ಖಂಡಿಸಿತು.

ಚೆನ್ನೈ: ತಮಿಳು ಚಿತ್ರ "ಅದರ್ಸ್" ಪತ್ರಿಕಾಗೋಷ್ಠಿಯಲ್ಲಿ ತಮ್ಮ ದೇಹತೂಕದ ಬಗ್ಗೆ ಅವಹೇಳನಕಾರಿ ಪ್ರಶ್ನೆ ಕೇಳಿದ ಯೂಟ್ಯೂಬರ್‌ನನ್ನು ನಟಿ ಗೌರಿ ಜಿ ಕಿಶನ್ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿದೆ. ನಟಿ ನೀಡಿದ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರಿಂದ ಮೆಚ್ಚುಗೆ, ಬೆಂಬಲ ಸಿಕ್ಕಿದೆ.

ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆ, ಕೆಲಸದಿಂದ ಗುರುತಿಸಿಕೊಂಡಿರುವ ನಟಿ ಗೌರಿ ಅವರಿಗೆ ಅನುಚಿತ ಪ್ರಶ್ನೆ ಕೇಳಿದ ಯೂಟ್ಯೂಬರ್‌ನ ವರ್ತನೆಯನ್ನು ಚೆನ್ನೈ ಪ್ರೆಸ್ ಕ್ಲಬ್ ಖಂಡಿಸಿತು.

ವೈರಲ್ ಆಗಿರುವ ವೀಡಿಯೊದಲ್ಲಿ, ಗೌರಿ ಆ ವ್ಯಕ್ತಿಗೆ, "ನನ್ನ ತೂಕದ ಬಗ್ಗೆ ನೀವು ಏಕೆ ತಲೆಕೆಡಿಸಿಕೊಳ್ಳಬೇಕು, ನಿಮಗೆ ಸಂಬಂಧಪಟ್ಟ ವಿಷಯವೇ, ಅದು ಚಿತ್ರಕ್ಕೆ ಹೇಗೆ ಸಂಬಂಧಿಸಿದೆ ಮತ್ತು ಪ್ರಸ್ತುತವಾಗಿದೆ? ನನ್ನ ತೂಕವು ನನ್ನ ಆಯ್ಕೆ ಮತ್ತು ಅದು ನನ್ನ ಪ್ರತಿಭೆಗೆ ಸಂಬಂಧಿಸಿದೆ, ನಿಮ್ಮ ಪ್ರಶ್ನೆ ದೇಹವನ್ನು ಅವಮಾನಿಸುವುದು ಮಾತ್ರವಲ್ಲ. ಮೂರ್ಖತನದ ಪ್ರಶ್ನೆ ಎಂದು ಧೈರ್ಯದಿಂದ ಉತ್ತರ ನೀಡಿದ್ದಾರೆ.

ಇಂದು ಬಿಡುಗಡೆಯಾದ ಆ ಚಿತ್ರದಲ್ಲಿ ಅವರ ಸಹನಟ ಆದಿತ್ಯ ಮಾಧವನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಾರ ಬಗ್ಗೆಯೂ ಬಾಡಿ ಶೇಮಿಂಗ್ ಮಾಡಬಾರದು ಎಂದರು.

ಇದು ನನ್ನ ಚೊಚ್ಚಲ ಚಿತ್ರ, ಒಬ್ಬರ ದೇಹ ತೂಕ ಬಗ್ಗೆ ಯಾರೂ ಈ ರೀತಿ ಮಾತನಾಡಬಾರದು, ಗೌರಿಯವರ ಬಗ್ಗೆ ಈ ರೀತಿ ಮಾತನಾಡಬಾರದಿತ್ತು. ಪ್ರತಿಯೊಬ್ಬರಿಗೂ ಆತ್ಮಗೌರವ ಎಂಬುದಿರುತ್ತದೆ. ನಾನು ಅವರಿಗೆ ಕ್ಷಮೆ ಕೇಳುತ್ತೇನೆ ಎಂದರು.

ಪತ್ರಿಕೋದ್ಯಮದ ವೇಷದಲ್ಲಿರುವ ಕೆಲವು ವಕ್ರ ವ್ಯಕ್ತಿಗಳು ಪತ್ರಿಕಾಗೋಷ್ಠಿಗಳಲ್ಲಿ ನಟಿಯರನ್ನು ಅಪಹಾಸ್ಯ ಮಾಡುವುದು ಮತ್ತು ಅವಮಾನಿಸುವುದು ಕಳವಳಕಾರಿ ಎಂದು ದಕ್ಷಿಣ ಭಾರತೀಯ ಕಲಾವಿದರ ಸಂಘವು ಖಂಡಿಸಿದೆ.

ಪ್ರತಿಯೊಬ್ಬ ಮಹಿಳೆಯೂ ವಿಭಿನ್ನ ದೇಹ ಆಕಾರವನ್ನು ಹೊಂದಿರುತ್ತಾರೆ. ನನ್ನ ಪ್ರತಿಭೆಯನ್ನು ಮಾತನಾಡಲಿ. ನಾನು ಇಲ್ಲಿಯವರೆಗೆ ಪಾತ್ರ ಆಧಾರಿತ ಚಲನಚಿತ್ರಗಳನ್ನು ಮಾಡಿದ್ದೇನೆ. ನನಗೆ ನಿಮ್ಮ ಮೌಲ್ಯಮಾಪನ ಅಗತ್ಯವಿಲ್ಲ ಎಂದರು.

ಮಹಿಳೆಯರ ಬಗ್ಗೆ ಪ್ರಶ್ನೆ ಕೇಳುವವರು ನೀವು ಪುರುಷರಲ್ಲಿ ಈ ರೀತಿ ಕೇಳುತ್ತೀರಾ ಎಂದಾಗ "ನೀವು ಮಹಿಳಾ ನಟರನ್ನು ವಸ್ತುನಿಷ್ಠವಾಗಿ ನೋಡುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ. ನೀವು ನಿಮ್ಮ ವೃತ್ತಿಗೆ ಅವಮಾನ." ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರಲ್ಲಿ ಯಾರೂ ತನಗೆ ಬೆಂಬಲ ನೀಡದಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ವೀಡಿಯೊ ವೈರಲ್ ಆಗುತ್ತಿದ್ದಂತೆ, ಗೌರಿಗೆ ಬೆಂಬಲ ವ್ಯಕ್ತಪಡಿಸಿದ ನಟಿ ಖುಷ್ಬು ಸುಂದರ್ 'ಎಕ್ಸ್' ನಲ್ಲಿ "ಪತ್ರಿಕೋದ್ಯಮವು ತನ್ನ ನೆಲೆಯನ್ನು ಕಳೆದುಕೊಂಡಿದೆ. ಪತ್ರಕರ್ತರು ಎಂದು ಕರೆಯಲ್ಪಡುವವರು ಪತ್ರಿಕೋದ್ಯಮವನ್ನು ಗಟಾರಕ್ಕೆ ಕೊಂಡೊಯ್ಯುತ್ತಾರೆ. ಮಹಿಳೆ ಎಷ್ಟು ತೂಕವಿರುವುದು ಅವರ ಕೆಲಸವಲ್ಲ. ಅದರ ಬಗ್ಗೆ ನಾಯಕನನ್ನು ಕೇಳುವುದು ಎಷ್ಟು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

ಸರಗೂರು: ಮನುಷ್ಯರ, ದನಗಳ ಕೊಂದಿದ್ದ ಹುಲಿ ಕೊನೆಗೂ ಸೆರೆ; ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

ಬೆಂಗಳೂರು ದಕ್ಷಿಣ: ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

SCROLL FOR NEXT