ಚಿತ್ರದ ಸ್ಟಿಲ್ - ಪ್ರಿಯಾಂಕಾ ಚೋಪ್ರಾ 
ಸಿನಿಮಾ ಸುದ್ದಿ

ಎಸ್ಎಸ್ ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ 'ಮಂದಾಕಿನಿ' ಆದ ಪ್ರಿಯಾಂಕಾ ಚೋಪ್ರಾ; ಪೋಸ್ಟರ್ ರಿಲೀಸ್

SSMB29 ನೊಂದಿಗೆ ಪ್ರಿಯಾಂಕಾ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಎಸ್ಎಸ್ ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಚಿತ್ರದಲ್ಲಿ ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ಚಿತ್ರದಲ್ಲಿ ಪ್ರಿಯಾಂಕಾ ಮಂದಾಕಿನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.

ಗುಂಡಿನ ಕಾಳಗದ ನಡುವೆ ಹಳದಿ ಸೀರೆಯುಟ್ಟ ಪ್ರಿಯಾಂಕಾ ಗನ್ ಹಿಡಿದು ಶೂಟ್ ಮಾಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವು ಆ್ಯಕ್ಷನ್ ಚಿತ್ರವಾಗುತ್ತದೆಯೇ ಅಥವಾ ಸೈನ್ಸ್ ಪಿಕ್ಷನ್ ಚಿತ್ರವೇ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರದ ಪೋಸ್ಟರ್‌ನಲ್ಲಿ, ನಟನನ್ನು ಸೈಬರ್ನೆಟಿಕ್ ಕೈಗಳನ್ನು ಹೊಂದಿರುವ ವ್ಹೀಲ್‌ಚೇರ್‌ನಲ್ಲಿ ಕುಳಿತಿರುವಂತೆ ತೋರಿಸಲಾಗಿದೆ. SSMB29 ನಲ್ಲಿ ಪೃಥ್ವಿರಾಜ್ ಕುಂಭನ ಪಾತ್ರವನ್ನು ನಿರ್ವಹಿಸಲಿದ್ದಾರೆ.

2019ರ 'ದಿ ಸ್ಕೈ ಈಸ್ ಪಿಂಕ್' ನಂತರ ಪ್ರಿಯಾಂಕಾ 'SSMB29' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 'ದಿ ಸ್ಕೈ ಈಸ್ ಪಿಂಕ್' ನಲ್ಲಿ, ನಟಿ ಅದಿತಿ ಚೌಧರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಚೌಧರಿ ಅವರ ಮಗಳು ಆಯಿಷಾ ತೀವ್ರ ಸಂಯೋಜಿತ ಇಮ್ಯುನೊ ಡಿಫಿಷಿಯನ್ಸಿ ಮತ್ತು ಪಲ್ಮನರಿ ಫೈಬ್ರೋಸಿಸ್‌ನಿಂದ ಬಳಲುತ್ತಿರುತ್ತಾರೆ. ಈ ಚಿತ್ರವು ಅದಿತಿ ಮತ್ತು ಅವರ ಪತಿ ನಿರೇನ್ ನಡುವಿನ ಮದುವೆಯನ್ನು ಆಯಿಷಾ ಅವರ ಕಣ್ಣುಗಳ ಮೂಲಕ ತೋರಿಸುತ್ತದೆ. ಫರಾನ್ ಅಕ್ತರ್ ಅವರು ನಿರೇನ್ ಮತ್ತು ಜೈರಾ ವಾಸಿಮ್ ಅವರು ಆಯಿಷಾ ಪಾತ್ರದಲ್ಲಿ ನಟಿಸಿದ್ದಾರೆ.

SSMB29 ನೊಂದಿಗೆ ಪ್ರಿಯಾಂಕಾ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಮಧ್ಯೆ, ಎಂಎಂ ಕೀರವಾಣಿ ಸಂಯೋಜಿಸಿದ ಮತ್ತು ಶ್ರುತಿ ಹಾಸನ್ ಅವರು ಹಾಡಿರುವ 'ಗ್ಲೋಬ್‌ಟ್ರೋಟರ್' ಎಂಬ ಶೀರ್ಷಿಕೆಯ ಹಾಡು ಬಿಡುಗಡೆಯಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಂಡೆ ಬ್ಲಾಸ್ಟ್ ಗೆ ಗರ್ಭಿಣಿ ಚಿರತೆ, 3 ಮರಿಗಳ ಸಾವು: ತನಿಖೆಗೆ ಆದೇಶ, 'ತಪ್ಪು ಮಾಡಿದವರ ಬಿಡೋ ಮಾತೇ ಇಲ್ಲ'!

ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳ ದಾಳಿ; CCTV Video Viral

SCROLL FOR NEXT