ಸೋನಲ್ ಮೊಂತೆರೋ- ಕೃಷ್ಣ ಅಜಯ್ ರಾವ್ 
ಸಿನಿಮಾ ಸುದ್ದಿ

ಅಜಯ್ ರಾವ್-ಸೋನಲ್ ಮೊಂತೆರೋ ನಟನೆಯ 'ರಾಧೇಯ' ಬಿಡುಗಡೆಗೆ ದಿನಾಂಕ ನಿಗದಿ

ಈ ಚಿತ್ರವನ್ನು ಕಾಂತರಾಜು ವಿತರಿಸಿದ್ದಾರೆ. ರಾಧೇಯಾ ಚಿತ್ರಕ್ಕೆ ವಿಯಾನ್ ಎಸ್‌ಎ (ಸ್ಯಾಂಡಿ ಅಡ್ಡಂಕಿ) ಸಂಗೀತ, ರಮ್ಮಿ ಅವರ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ.

ಬಹುಮುಖ ಪ್ರತಿಭೆ ನಟ ಕೃಷ್ಣ ಅಜಯ್ ರಾವ್ ಇಧೀಗ ರಾಧೇಯ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಬ್ಯಾನರ್ ಅಡಿಯಲ್ಲಿ ವೇದಗುರು ಅವರೇ ನಿರ್ದೇಶನ ಮತ್ತು ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ಜೊತೆಗೆ ಸೋನಲ್ ಮೊಂತೆರೋ ನಟಿಸಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದ್ದು, ತೀವ್ರ ನಿರೀಕ್ಷೆ ಮೂಡಿಸಿದೆ.

'ರಾಧೇಯ ಎಂಬ ಹೆಸರು ಮಹಾಭಾರತದ ಕರ್ಣನಿಂದ ಬಂದಿದೆ. ಅವನ ತಾಯಿಯ ಹೆಸರು ರಾಧಾ. ಈ ಚಿತ್ರವು ಕರ್ಣನ ಕಥೆಗೆ ನೇರವಾಗಿ ಸಂಬಂಧಿಸಿಲ್ಲವಾದರೂ, ಅವನ ತ್ಯಾಗದ ಸಾರದಿಂದ ಸ್ಫೂರ್ತಿ ಪಡೆಯುತ್ತದೆ. ಈ ಕಥೆಯನ್ನು ಮೊದಲು ಕೇಳಿದಾಗ, ಅಜಯ್ ರಾವ್ ಒಬ್ಬ ನಿರ್ದೇಶಕನಾಗಿ ನನ್ನಂತೆಯೇ ಆಕರ್ಷಿತರಾದರು. ಇದು ಪ್ರೇಮಕಥೆಯಾಗಿದ್ದರೂ, ನಾನು ಅದನ್ನು ವಿಭಿನ್ನವಾಗಿ ಹೇಳಲು ಬಯಸಿದ್ದೆ' ಎನ್ನುತ್ತಾರೆ ವೇದಗುರು.

ಅಜಯ್ ರಾವ್ ಅವರ ಪ್ರಯಾಣದಲ್ಲಿ ಈ ಚಿತ್ರವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅವರು ಜೈಲಿನಲ್ಲಿರುವ ಅಪರಾಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ವೇದಗುರು ಈ ಕಥೆಯನ್ನು ತುಂಬಾ ಎಚ್ಚರಿಕೆಯಿಂದ ಹೆಣೆದಿದ್ದಾರೆ ಮತ್ತು ಅದು ಜೀವಂತವಾಗುವುದನ್ನು ನೋಡುವುದು ಪ್ರತಿಫಲದಾಯಕವಾಗಿದೆ. ಒಬ್ಬ ನಿರ್ಮಾಪಕನಾಗಿ, ಚಿತ್ರವು ಈ ಹಂತವನ್ನು ತಲುಪುವ ಹಿಂದಿನ ಹೋರಾಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ' ಎಂದು ಅಜಯ್ ರಾವ್ ತಿಳಿಸಿದರು.

'ರಾಧೇಯ ನನಗೆ ಹೊಸ ಅನುಭವ ನೀಡಿದೆ. ಪ್ರಮುಖ ಪ್ರಕರಣವೊಂದನ್ನು ಅಧ್ಯಯನ ಮಾಡಿದ ನಂತರ ದೊಡ್ಡ ಚಾನೆಲ್‌ಗೆ ಹೋಗುವ ಕನಸು ಕಾಣುವ ಅಪರಾಧ ವರದಿಗಾರ್ತಿ ಅಮೃತಾಳ ಪಾತ್ರವನ್ನು ನಾನು ನಿರ್ವಹಿಸುತ್ತೇನೆ. ಈ ತಂಡದೊಂದಿಗೆ ಕೆಲಸ ಮಾಡುವುದು ಸಂತೋಷ ತಂದಿದೆ' ಎಂದು ಸೋನಲ್ ಹೇಳಿದರು.

ನವೆಂಬರ್ 21 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕಾಂತರಾಜು ವಿತರಿಸಿದ್ದಾರೆ. ರಾಧೇಯಾ ಚಿತ್ರಕ್ಕೆ ವಿಯಾನ್ ಎಸ್‌ಎ (ಸ್ಯಾಂಡಿ ಅಡ್ಡಂಕಿ) ಸಂಗೀತ, ರಮ್ಮಿ ಅವರ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

PSL ನಲ್ಲಿ ಮತ್ತೊಂದು ಹೈಡ್ರಾಮಾ: ಇದ್ಯಾವ್ ಸೀಮೆ ಬೌಲಿಂಗ್?.. ಮೈದಾನದಲ್ಲೇ Daryl Mitchell vs Usman Tariq ಜಟಾಪಟಿ, ಇಷ್ಟಕ್ಕೂ ಆಗಿದ್ದೇನು?

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

SCROLL FOR NEXT