ಬಿಗ್ ಬಾಸ್ ಮಲಯಾಳಂ 7ನಲ್ಲಿ ಮೋಹನ್‌ಲಾಲ್ 
ಸಿನಿಮಾ ಸುದ್ದಿ

TVR ಪಟ್ಟಿ; ಹಿಂದಿ, ತೆಲುಗು, ತಮಿಳು, ಕನ್ನಡ ಆವೃತ್ತಿಗಳನ್ನು ಹಿಂದಿಕ್ಕಿದ ಮೋಹನ್ ಲಾಲ್ ನಡೆಸಿಕೊಡುವ ಬಿಗ್ ಬಾಸ್ ಮಲಯಾಳಂ

ಸೆಪ್ಟೆಂಬರ್‌ನಲ್ಲಿ, ಮನೆಯೊಳಗೆ ಬಹಿರಂಗವಾಗಿ ಸಲಿಂಗಕಾಮಿಗಳ ವಿರುದ್ಧ ನೀಡಿದ ಹೇಳಿಕೆಗಳ ಕುರಿತು ಮೋಹನ್ ಲಾಲ್ ವೈಲ್ಡ್‌ಕಾರ್ಡ್ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ವೈರಲ್ ಆಗಿತ್ತು.

ಮೋಹನ್ ಲಾಲ್ ಅವರು ಆರಂಭದಿಂದಲೂ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಮಲಯಾಳಂನ ಏಳನೇ ಸೀಸನ್, ಇತ್ತೀಚಿನ ಟೆಲಿವಿಷನ್ ವೀಕ್ಷಕರ ರೇಟಿಂಗ್‌ಗಳ (TVR) ಪ್ರಕಾರ, ಫ್ರಾಂಚೈಸಿಯ ಎಲ್ಲ ಭಾರತೀಯ ಆವೃತ್ತಿಗಳ ಬಿಗ್ ಬಾಸ್‌ಗಿಂತ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮವು 12.1 ಟಿವಿಆರ್ ದಾಖಲಿಸಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಆವೃತ್ತಿಗಳನ್ನು ಹಿಂದಿಕ್ಕಿದೆ.

ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ತೆಲುಗು ಸೀಸನ್ 9 ಸದ್ಯ 11.1 ರೇಟಿಂಗ್ ಹೊಂದಿದೆ. ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 12, ವಾರದ ದಿನಗಳಲ್ಲಿ 7.4 ಮತ್ತು ವಾರಾಂತ್ಯದಲ್ಲಿ 10.9 ರೇಟಿಂಗ್ ಹೊಂದಿದೆ. ಈಗ 9ನೇ ಸೀಸನ್‌ನಲ್ಲಿ ವಿಜಯ್ ಸೇತುಪತಿ ನೇತೃತ್ವದ ಬಿಗ್ ಬಾಸ್ ತಮಿಳು 5.61 ರೇಟಿಂಗ್ ಹೊಂದಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ ಸೀಸನ್ 19, ಸದ್ಯ ವಾರಾಂತ್ಯದಲ್ಲಿ 1.3 ರಿಂದ ಸ್ವಲ್ಪ ಏರಿಕೆಯ ನಂತರ 1.8 ರೇಟಿಂಗ್‌ನೊಂದಿಗೆ ಅತ್ಯಂತ ಕಡಿಮೆ ರೇಟಿಂಗ್ ಹೊಂದಿದೆ.

ಎಲ್ಲ ಭಾಷೆಗಳಲ್ಲಿ, ಬಿಗ್ ಬಾಸ್ ಮಲಯಾಳಂ ಅನ್ನು ಹೆಚ್ಚು ಜನ ವೀಕ್ಷಿಸಿದ್ದಾರೆ. ಸದ್ಯಕ್ಕೆ, ಮೋಹನ್ ಲಾಲ್ ನಿರೂಪಣೆ ಮಾಡಿರುವ ಮಲಯಾಳಂ ಆವೃತ್ತಿಯು ದೇಶದಲ್ಲಿ ಅತ್ಯಂತ ಬಲಿಷ್ಠ ಪ್ರದರ್ಶನ ನೀಡುವ ಕಾರ್ಯಕ್ರಮವಾಗಿದೆ.

ಮೋಹನ್ ಲಾಲ್ ಮಲಯಾಳಂನಲ್ಲಿ L2: ಎಂಪುರಾನ್ ಮತ್ತು ತುಡರುಮ್ ಚಿತ್ರಗಳೊಂದಿಗೆ ಸತತ ಯಶಸ್ಸನ್ನು ಕಂಡಿದ್ದಾರೆ. ಚೋಟಾ ಮುಂಬೈ ಮತ್ತು ರಾವಣಪ್ರಭು ಚಿತ್ರಗಳ ಮರುಬಿಡುಗಡೆಗಳು ಸಹ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ವರ್ಷದ ಆರಂಭದಲ್ಲಿ, ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರೇಟಿಂಗ್‌ಗಳನ್ನು ಮೀರಿ ಬಿಗ್ ಬಾಸ್‌ನ ಮಲಯಾಳಂ ಆವೃತ್ತಿಯು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸೆಪ್ಟೆಂಬರ್‌ನಲ್ಲಿ, ಮನೆಯೊಳಗೆ ಬಹಿರಂಗವಾಗಿ ಸಲಿಂಗಕಾಮಿಗಳ ವಿರುದ್ಧ ನೀಡಿದ ಹೇಳಿಕೆಗಳ ಕುರಿತು ಮೋಹನ್ ಲಾಲ್ ವೈಲ್ಡ್‌ಕಾರ್ಡ್ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ವೈರಲ್ ಆಗಿತ್ತು. ಮಲಯಾಳಂ ಆವೃತ್ತಿಯಲ್ಲಿ ಮೊದಲ ಬಹಿರಂಗ LGBTQ+ ದಂಪತಿಗಳಾದ ಅಧಿಲಾ ನಸರಿನ್ ಮತ್ತು ಫಾತಿಮಾ ನೂರಾ ಅವರನ್ನು ಬೆಂಬಲಿಸಿದ್ದರು. ಈ ದಂಪತಿ ಯಾರಿಗೂ ಯಾವುದೇ ಸಮರ್ಥನೆಯನ್ನು ನೀಡಬೇಕಾಗಿಲ್ಲ ಮತ್ತು ಅಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು ಮತ್ತು ನಿರೂಪಕರು ಈ ಬಗ್ಗೆ ಸ್ಪಷ್ಟವಾದ ಸಾರ್ವಜನಿಕ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

ಬಿಜೆಪಿಯಿಂದಲೇ ಹಣ ಕಲೆಕ್ಷನ್: ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಆರೋಪಕ್ಕೆ ಸಿಎಂ ತಿರುಗೇಟು

KL Rahulರನ್ನು ಹೀಗೆ ನಡೆಸಿಕೊಂಡಿದ್ದು ನಿಜಕ್ಕೂ ಹಾಸ್ಯಾಸ್ಪದ: ಮೂರ್ಖತನದ ನಿರ್ಧಾರ ಎಂದು ಟೀಕಿಸಿದ ಮಾಜಿ ನಾಯಕ

ಕಾಂಗ್ರೆಸ್-ಆರ್‌ಜೆಡಿಯಿಂದ 'ಪಿತೂರಿ'; ಬಿಹಾರ ಚುನಾವಣೆಯಿಂದ ಹಿಂದೆ ಸರಿದ ಜೆಎಂಎಂ

News headlines 20-10-2025| ದಕ್ಷಿಣ ಕನ್ನಡ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಣೆ, ಸುಳ್ಳು ಸುದ್ದಿ ಹರಡಿದರೆ ಕೇಸ್- ಸಿದ್ದರಾಮಯ್ಯ; ವೇತನ ನೀಡದೇ ಕಿರುಕುಳ: ಇಂಜಿನಿಯರ್ ಆತ್ಮಹತ್ಯೆ; ಅತಿವೃಷ್ಟಿ: ರಾಜ್ಯಕ್ಕೆ 300 ಕೋಟಿ, ಮಹಾರಾಷ್ಟ್ರಕ್ಕೆ 1,500 ಕೋಟಿ ರೂ ಕೇಂದ್ರ ಪರಿಹಾರ

SCROLL FOR NEXT