ದಿ ಡೆವಿಲ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ದರ್ಶನ್ ನಟನೆಯ 'ದಿ ಡೆವಿಲ್' ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಸದ್ಯಕ್ಕೆ ನಂ.1

ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಗೀತರಚನೆಕಾರ ಅನಿರುದ್ಧ್ ಶಾಸ್ತ್ರಿ ಅವರ ಸಾಹಿತ್ಯವಿದೆ. ಹಾಡಿಗೆ ದೀಪಕ್ ಬ್ಲೂ ಧ್ವನಿ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಮುಂಬರುವ ಆ್ಯಕ್ಷನ್ ಡ್ರಾಮಾ 'ದಿ ಡೆವಿಲ್' ಈಗಾಗಲೇ ಮ್ಯೂಸಿಕ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಇದೀಗ ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. YouTube ನಲ್ಲಿ 13 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ಟ್ರ್ಯಾಕ್ ಇದೀಗ ಪ್ಲಾಟ್‌ಫಾರ್ಮ್‌ನ ಟ್ರೆಂಡಿಂಗ್ ಮ್ಯೂಸಿಕ್ ವಿಡಿಯೋಗಳ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿದೆ.

ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಗೀತರಚನೆಕಾರ ಅನಿರುದ್ಧ್ ಶಾಸ್ತ್ರಿ ಅವರ ಸಾಹಿತ್ಯವಿದೆ. ಹಾಡಿಗೆ ದೀಪಕ್ ಬ್ಲೂ ಧ್ವನಿ ನೀಡಿದ್ದಾರೆ. ಸದ್ಯ ಈ ಹಾಡು ಎಲ್ಲ ವೇದಿಕೆಗಳಲ್ಲಿ ಪ್ಲೇಲಿಸ್ಟ್‌ಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಅಮೆಜಾನ್ ಮ್ಯೂಸಿಕ್‌ನಲ್ಲಿ, ಈ ಹಾಡು ಫ್ರೆಶ್ ಕನ್ನಡ, ನ್ಯೂ ಇನ್ ಡ್ಯಾನ್ಸ್, ಸ್ಯಾಂಡಲ್‌ವುಡ್ ಡ್ಯಾನ್ಸ್ ಪಾರ್ಟಿ, ವರ್ಕೌಟ್ ಮಿಕ್ಸ್ ಮತ್ತು ಲಾಂಗ್ ಡ್ರೈವ್ ವಿತ್ ಸ್ಯಾಂಡಲ್‌ವುಡ್‌ನಂತಹ ಹಲವು ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪೋಟಿಫೈನಲ್ಲಿ, ಲೋಕಲ್ ಪಲ್ಸ್ ಬೆಂಗಳೂರು ವಿಭಾಗದಲ್ಲಿ 4ನೇ ಸ್ಥಾನದಲ್ಲಿದೆ.

ಶ್ರೀ ಜೈಮಾತಾ ಕಂಬೈನ್ಸ್ ಬೆಂಬಲದೊಂದಿಗೆ, ದಿ ಡೆವಿಲ್ ಚಿತ್ರವನ್ನು ಪ್ರಕಾಶ್ ವೀರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರಿಗೆ ರಚನಾ ರೈ ಜೋಡಿಯಾಗಿದ್ದಾರೆ. ಡೆವಿಲ್ ಚಿತ್ರದಲ್ಲಿ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ, ತುಳಸಿ, ಶ್ರೀನಿವಾಸ್ ಪ್ರಭು ಮತ್ತು ಶೋಭರಾಜ್ ಸೇರಿದಂತೆ ಇತರರು ನಟಿಸಿದ್ದಾರೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದ್ದು, ಈ ಹಿಂದೆ ದರ್ಶನ್ ಅವರೊಂದಿಗೆ ರಾಬರ್ಟ್ ಮತ್ತು ಕಾಟೇರಾದಲ್ಲಿ ಕೆಲಸ ಮಾಡಿದ್ದರು.

ಡಿಸೆಂಬರ್ 12 ರಂದು ಡೆವಿಲ್ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂದು ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ 12 ಸಂಸದರು ದೂರ; NDA ಅಭ್ಯರ್ಥಿ C.P ರಾಧಾಕೃಷ್ಣನ್‌ ಗೆಲುವು ಬಹತೇಕ ಖಚಿತ!

'ಹಿಂದೂ ವಿರೋಧಿ' ನಡೆ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ಪಾಳಯ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ

ತೇಜಸ್ವಿ ಯಾದವ್ ಪತ್ನಿ 'ಜೆರ್ಸಿ ಹಸು': ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ RJD ಮಾಜಿ ಶಾಸಕನ ಹೇಳಿಕೆ

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು; ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಡಬಲ್ ಎಂಜಿನ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ: ಪಕ್ಷದ ಬಲವರ್ಧನೆಗೆ 'ಸಂಘಟನ್ ಶ್ರೀ ಜನ್ ಅಭಿಯಾನ್; ಡಿ.ಕೆ.ಸುರೇಶ್

SCROLL FOR NEXT