ಸದ್ಯ ಮಾರ್ಕ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಮತ್ತು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸಜ್ಜಾಗುತ್ತಿರುವ ನಟ ಕಿಚ್ಚ ಸುದೀಪ್, ಪುನೀತ್ ರಂಗಸ್ವಾಮಿ ಅವರ ಚೊಚ್ಚಲ ನಿರ್ದೇಶನದ ಎಳುಮಲೆ ಚಿತ್ರವನ್ನು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದಾರೆ. ತರುಣ್ ಸುಧೀರ್ ಮತ್ತು ಅಟ್ಲಾಂಟಾ ನಾಗೇಂದ್ರ ನಿರ್ಮಿಸಿರುವ ಈ ಚಿತ್ರದಲ್ಲಿ ರಾಣಾ ಮತ್ತು ಹೊಸಬರಾದ ಪ್ರಿಯಾಂಕಾ ಆಚಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸುದೀಪ್, 'ನೋಡಲು ಯೋಗ್ಯವಾಗಿದೆ. ಅದ್ಭುತ ನಿರೂಪಣೆ, ಸ್ಪಷ್ಟವಾದ ಬರವಣಿಗೆ ಮತ್ತು ಅತ್ಯುತ್ತಮ ಚಿತ್ರಕಥೆಯ ಸಂಯೋಜನೆಯು ಎಳುಮಲೆ ನೋಡುವಂತೆ ಮಾಡುತ್ತದೆ. ನಿರ್ದೇಶಕ ಪುನೀತ್ ರಂಗಸ್ವಾಮಿ ಮೊದಲ ಫ್ರೇಮ್ನಿಂದ ಕೊನೆಯವರೆಗೂ ಚಿತ್ರದ ಆವೇಗವನ್ನು ಕಾಯ್ದುಕೊಳ್ಳುತ್ತಾರೆ. ಚಿತ್ರವು ನಿರೂಪಣೆ ಅಥವಾ ಅದರ ತೀವ್ರತೆಯ ಮೇಲಿನ ಹಿಡಿತವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಡಿ ಇಮ್ಮನ್ ಅವರ ಸಂಗೀತ ಕೂಡ 'ಸ್ವತಃ ಒಂದು ಪಾತ್ರವಾಗುತ್ತದೆ' ಎಂದು ಹೇಳಿದರು.
'ರಾಣಾ ತಾನು ನಿರ್ವಹಿಸಿರುವ ಹರೀಶ್ ಪಾತ್ರದಲ್ಲಿ ಸಂಪೂರ್ಣವಾಗಿ ಜೀವಿಸಿದ್ದಾರೆ ಮತ್ತು ದೋಷರಹಿತ ಅಭಿನಯ ನೀಡಿದ್ದಾರೆ. ಪ್ರಿಯಾಂಕಾ ಆಚಾರ್ ಕೂಡ ಚಿನ್ನಿ ಪಾತ್ರದಲ್ಲಿ ಸೂಕ್ಷ್ಮ ಮತ್ತು ಪ್ರಭಾವ ಬೀರುತ್ತಾರೆ' ಎಂದ ಅವರು, ನಿರ್ಮಾಪಕರಾಗಿರುವ ತರುಣ್ ಕಿಶೋರ್ ಸುಧೀರ್ ಅವರನ್ನು ಅಭಿನಂದಿಸಿದರು.
ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ಎಳುಮಲೆ' ಚಿತ್ರವು ಆಕರ್ಷಕ ಕಥೆ ಹೇಳುವಿಕೆಯೊಂದಿಗೆ ಬಲವಾದ ಪಾತ್ರಗಳನ್ನು ಸಂಯೋಜಿಸುತ್ತದೆ. ರಾಣಾ ಮತ್ತು ಪ್ರಿಯಾಂಕಾ ಅವರಲ್ಲದೆ, ಚಿತ್ರದಲ್ಲಿ ಕಿಶೋರ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕೇಶ್ ಮೈಯಾ ಮತ್ತು ಜಗ್ಗಪ್ಪ ಸೇರಿದಂತೆ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ಸಕಾರಾತ್ಮಕ ಮಾತುಗಳು ಮತ್ತು ಉದ್ಯಮದ ಒಳಗಿನವರಿಂದ ಬಲವಾದ ಮೆಚ್ಚುಗೆಯೊಂದಿಗೆ, 'ಎಳುಮಲೆ' ಚಿತ್ರವು ಶೀಘ್ರದಲ್ಲೇ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ದೃಢಪಡಿಸಿದೆ. ಶೀಘ್ರದಲ್ಲೇ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರ್ಮಾಣ ಸಂಸ್ಥೆ ನೀಡಲಿದೆ.