ಕಾಂತಾರ: ಚಾಪ್ಟರ್ 1 ಚಿತ್ರದ ಪೋಸ್ಟರ್  
ಸಿನಿಮಾ ಸುದ್ದಿ

ಕಾಂತಾರ: ಚಾಪ್ಟರ್ 1 ಬಿಡುಗಡೆಗೆ ದಿನಗಣನೆ; ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟಲ್ ಕವರ್- ಪೋಸ್ಟ್‌ಕಾರ್ಡ್ ಬಿಡುಗಡೆ!

ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, 2 ನಿಮಿಷ 56 ಸೆಕೆಂಡ್‌ಗಳ ಟ್ರೇಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಟ್ರೇಲರ್ ಬಿಡುಗಡೆಯಾದ ನಂತರ ಈ ಯೋಜನೆಯು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ರಿಷಬ್ ಶೆಟ್ಟಿ ಅವರ 2022ರ ಬ್ಲಾಕ್‌ಬಸ್ಟರ್ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದೆ. ಈಗಾಗಲೇ ಹಲವು ದಾಖಲೆ ಬರೆದಿರುವ ಚಿತ್ರವು, 24 ಗಂಟೆಗಳಲ್ಲಿ ಅತಿ ವೇಗವಾಗಿ ಟ್ರೇಲರ್ ಹಂಚಿಕೆಯಾದ ಚಿತ್ರ ಎಂದ ಖ್ಯಾತಿ ಪಡೆದಿದೆ. 'ಕಾಂತಾರ: ಚಾಪ್ಟರ್ 1' ಚಿತ್ರವು ಅಕ್ಟೋಬರ್ 2 ರಂದು ಏಳು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, 2 ನಿಮಿಷ 56 ಸೆಕೆಂಡ್‌ಗಳ ಟ್ರೇಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಟ್ರೇಲರ್ ಬಿಡುಗಡೆಯಾದ ನಂತರ ಈ ಯೋಜನೆಯು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಿಸಿರುವ ಕಾಂತಾರ: ಚಾಪ್ಟರ್ 1 ವೀಕ್ಷಕರನ್ನು 4ನೇ ಶತಮಾನಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ.

ಚಿತ್ರದ ಸಾಂಸ್ಕೃತಿಕ ಹೆಜ್ಜೆಗುರುತನ್ನು ಒತ್ತಿಹೇಳುವ ಅಪರೂಪದ ನಡೆಯಲ್ಲಿ, ಭಾರತೀಯ ಅಂಚೆ ಇಲಾಖೆಯು ಸಿನಿಮಾದ ಚಿತ್ರಗಳನ್ನು ಒಳಗೊಂಡ ವಿಶೇಷ ಸ್ಮರಣಾರ್ಥ ಅಂಚೆ ಕವರ್ ಮತ್ತು ಪೋಸ್ಟ್‌ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇಲಾಖೆಯ ಪ್ರತಿನಿಧಿಗಳಾದ ಸಂದೇಶ್ ಮಹಾದೇವ್ ಮತ್ತು ಎಚ್‌ಎಂ ಮಹೇಶ್ ಸಂಗ್ರಹಯೋಗ್ಯ ವಸ್ತುಗಳನ್ನು ಪ್ರಸ್ತುತಪಡಿಸಿದರು. ಈ ಚಿತ್ರದ ಮೂಲಕ ಸಹಯೋಗ ಮಾಡಲು ತಮಗೆ ಹೆಮ್ಮೆಯಿದೆ ಎಂದ ಅವರು, ತಂಡಕ್ಕೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ-ನಟ ರಿಷಬ್ ಶೆಟ್ಟಿ ಅವರೊಂದಿಗೆ, ಈ ಕಾರ್ಯಕ್ರಮದಲ್ಲಿ ಸ್ಟಂಟ್ ನಿರ್ದೇಶಕ ಅರ್ಜುನ್ ರಾಮು, ನೃತ್ಯ ನಿರ್ದೇಶಕ ಭೂಷಣ್ ಕುಮಾರ್, ಸಂಪಾದಕ ಸುರೇಶ್ ಮಲ್ಲಯ್ಯ, ವಸ್ತ್ರ ವಿನ್ಯಾಸಕಿ ಮತ್ತು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ, ಕಲಾ ನಿರ್ದೇಶಕ ಧನರಾಜ್, ಬರಹಗಾರರಾದ ಶನೀಲ್ ಗೌತಮ್ ಮತ್ತು ಅನಿರುದ್ಧ್ ಮಹೇಶ್ ಮತ್ತು ನಾಯಕಿ ರುಕ್ಮಿಣಿ ವಸಂತ್ ಸೇರಿದಂತೆ ಹಲವಾರು ಪ್ರಮುಖ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT