ಪತ್ನಿ ಪ್ರಗತಿ ಶೆಟ್ಟಿಯೊಂದಿಗೆ ರಿಷಭ್ ಶೆಟ್ಟಿ 
ಸಿನಿಮಾ ಸುದ್ದಿ

Kantara: Chapter 1 ಬಿಡುಗಡೆಗೆ ದಿನಗಣನೆ; ನಿರ್ದೇಶಕ, ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಟೆಂಪಲ್ ರನ್

ಚಿತ್ರದ ಪ್ರಚಾರ ಕಾರ್ಯಗಳು ಚುರುಕಾಗಿ ಸಾಗುತ್ತಿವೆ. ಬೆಂಗಳೂರು ಮತ್ತು ಕೊಚ್ಚಿ ನಂತರ, ತಂಡವು ಚೆನ್ನೈ, ಹೈದರಾಬಾದ್ ಮತ್ತು ಮುಂಬೈಗೆ ತೆರಳುತ್ತಿದೆ.

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಕಾಂತಾರ: ಚಾಪ್ಟರ್ 1 ಬಿಡುಗಡೆಗೆ 5 ದಿನಗಳಷ್ಟೇ ಬಾಕಿ ಉಳಿದಿವೆ. ಮೂರು ವರ್ಷಗಳ ಅವಿರತ ಶ್ರಮದ ನಂತರ, 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಕ್ಟೋಬರ್ 2 ರಂದು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ: ಚಾಪ್ಟರ್ 1 ಬಿಡುಗಡೆಗೆ ಸಿದ್ಧರಾಗಿದ್ದಾರೆ. ಚಿತ್ರವು ವಿಶ್ವದಾದ್ಯಂತ ಸುಮಾರು 7,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ರಿಷಭ್ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ. ರಿಷಬ್ ಆಗಾಗ್ಗೆ ದೇಗುಲ ದರ್ಶನ ಮಾಡುತ್ತಿರುತ್ತಾರೆ. ಆದರೆ, ಈ ಭೇಟಿಯು ಕುತೂಹಲ ಮೂಡಿಸಿದೆ.

ಚಿತ್ರದ ಪ್ರಚಾರ ಕಾರ್ಯಗಳು ಚುರುಕಾಗಿ ಸಾಗುತ್ತಿವೆ. ಬೆಂಗಳೂರು ಮತ್ತು ಕೊಚ್ಚಿ ನಂತರ, ತಂಡವು ಚೆನ್ನೈ, ಹೈದರಾಬಾದ್ ಮತ್ತು ಮುಂಬೈಗೆ ತೆರಳುತ್ತಿದೆ. ಸೆಪ್ಟೆಂಬರ್ 28 ರಂದು, ಹೈದರಾಬಾದ್‌ನಲ್ಲಿ ಅದ್ಧೂರಿ ಪ್ರೀ-ರಿಲೀಸ್ ಈವೆಂಟ್ ನಡೆಯಲಿದ್ದು, ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ರಿಷಭ್ ಜೊತೆ ವೇದಿಕೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಕಾಂತಾರ: ಚಾಪ್ಟರ್ 1 ಈಗಾಗಲೇ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೊದಲ ಚಿತ್ರದಲ್ಲಿ ರಿಷಬ್ ತಾನು ಸೃಷ್ಟಿಸಿದ ಕಥೆಯನ್ನು ಹೇಗೆ ವಿಸ್ತರಿಸಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿರುವ ಪ್ರಗತಿ ಶೆಟ್ಟಿ, ಪ್ರತಿ ಫ್ರೇಮ್ ಸಂಪ್ರದಾಯದಲ್ಲಿ ಬೇರೂರಿರುವ ಸತ್ಯಾಸತ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಲ್ಯಾಣ ಕರ್ನಾಟಕದಲ್ಲಿ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ, ಗೋಡೆ ಕುಸಿದು ಬಾಲಕ ಸಾವು! Priyank Kharge ಭೇಟಿ

ಭೂಮಿಯ ಮೇಲ್ಮೈನ ಮೊದಲ ಚಿತ್ರವನ್ನು ಕಳುಹಿಸಿದ ISRO-NASAದ NISAR ಉಪಗ್ರಹ, ಈಗ ಭೂಮಿಯ ಮೇಲೆ ನಿಗಾ ಇಡಲಿದೆ!

"ಬಾಬ್ರಿ ಮಸೀದಿ ನಿರ್ಮಾಣವೇ ಅಪವಿತ್ರ ಕೃತ್ಯ"!; ತಾವೇ ನೀಡಿದ್ದ ತೀರ್ಪಿಗೆ ನಿವೃತ್ತ CJI ಚಂದ್ರಚೂಡ್ ವ್ಯತಿರಿಕ್ತ ಹೇಳಿಕೆ!

ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ; 8 ಜಿಲ್ಲೆಗಳಲ್ಲಿ Yellow alert, ಭೀಮಾನದಿ ಅಬ್ಬರಕ್ಕೆ 'ಉತ್ತರ' ತತ್ತರ!

ಕಲಬುರಗಿಯಲ್ಲಿ ಕುಂಭದ್ರೋಣ ಮಳೆ: ಹಲವು ಸೇತುವೆ ಜಲಾವೃತ; 2 ದಿನ ಶಾಲೆಗಳಿಗೆ ರಜೆ ಘೋಷಣೆ

SCROLL FOR NEXT