ಸಂತೋಷ್ ಬಾಲರಾಜ್ ನಟನೆಯ ರತ್ನಗರ್ಭ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಸಂತೋಷ್ ಬಾಲರಾಜ್ ನಟನೆಯ ಕೊನೇ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಜ್ಜು; ನಟನ ಪುಣ್ಯತಿಥಿಯಂದು 'ಫಸ್ಟ್ ಲುಕ್' ಪೋಸ್ಟರ್ ರಿಲೀಸ್!

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ, ಆಗಸ್ಟ್ 5ರ ಸಂಜೆ 7 ಗಂಟೆಗೆ ಚಿತ್ರದ 'ಫಸ್ಟ್-ಲುಕ್' ಪೋಸ್ಟರ್ ಮತ್ತು 'ಮೋಷನ್ ಪೋಸ್ಟರ್' ಅನ್ನು ಅನಾವರಣಗೊಳಿಸಲಾಗುವುದು.

ನಟ ಸಂತೋಷ್ ಬಲರಾಜ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗವನ್ನು ಆಘಾತಕ್ಕೀಡುಮಾಡಿ ಸುಮಾರು ಒಂದು ವರ್ಷ ಕಳೆದಿದೆ; ಇದೀಗ ಪ್ರೇಕ್ಷಕರು ಅವರನ್ನು ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಬಹುದಾಗಿದೆ. 'ಗಣಪ' ಮತ್ತು 'ಕರಿಯ 2' ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದ ನಟ ಸಂತೋಷ್ ಬಾಲರಾಜ್ ನಟಿಸಿರುವ ಕೊನೆಯ ಚಿತ್ರ 'ರತ್ನಗರ್ಭ' ಬಿಡುಗಡೆಯ ಹಂತದಲ್ಲಿದ್ದು, ಅವರ ಮೊದಲ ಪುಣ್ಯತಿಥಿಯಾದ ಆಗಸ್ಟ್ 5 ರಂದು ಚಿತ್ರದ 'ಫಸ್ಟ್-ಲುಕ್' ಮತ್ತು 'ಮೋಷನ್ ಪೋಸ್ಟರ್‌'ಗಳನ್ನು ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಅನಿರೀಕ್ಷಿತವಾಗಿ ನಿಧನರಾದರು.

ಅಶೋಕ್ ಕಡಬ ನಿರ್ದೇಶನದಲ್ಲಿ ಹಾಗೂ 'ಶ್ರೀ ಮಾತಾ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ಮಹಾಂತೇಶ್ ವಿಕೆ ನಿರ್ಮಿಸಿರುವ 'ರತ್ನಗರ್ಭ' ಚಿತ್ರದಲ್ಲಿ, ಸಂತೋಷ್ ಅವರು ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರ ನಿಧನದ ನಂತರವೂ, ಚಿತ್ರವನ್ನು ಮೂಲತಃ ಯೋಜಿಸಿದಂತೆಯೇ ಪೂರ್ಣಗೊಳಿಸುವ ಉದ್ದೇಶದಿಂದ ಚಿತ್ರತಂಡ ಉಳಿದಿರುವ ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣ (ಪ್ಯಾಚ್‌ವರ್ಕ್), VFX ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದೆ. ಸದ್ಯ ಈ ಚಿತ್ರವು ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ, ಆಗಸ್ಟ್ 5ರ ಸಂಜೆ 7 ಗಂಟೆಗೆ ಚಿತ್ರದ 'ಫಸ್ಟ್-ಲುಕ್' ಪೋಸ್ಟರ್ ಮತ್ತು 'ಮೋಷನ್ ಪೋಸ್ಟರ್' ಅನ್ನು ಅನಾವರಣಗೊಳಿಸಲಾಗುವುದು. ಈ ಕಾರ್ಯಕ್ರಮವು ಸಂತೋಷ್ ಅವರಿಗೆ ಗೌರವ ಸಲ್ಲಿಸುವ ವೇದಿಕೆಯಾಗಿಯೂ ಇರಲಿದ್ದು, ಅವರ ಅಂತಿಮ ಚಿತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಮುನ್ನ ಚಿತ್ರತಂಡದ ಸದಸ್ಯರು, ಕುಟುಂಬಸ್ಥರು ಮತ್ತು ಹಿತೈಷಿಗಳು ಒಗ್ಗೂಡಿ ಅವರನ್ನು ಸ್ಮರಿಸಲಿದ್ದಾರೆ.

'ರತ್ನಗರ್ಭ' ಚಿತ್ರದಲ್ಲಿ ಸಂತೋಷ್ ಬಾಲರಾಜ್ ಅವರಿಗೆ ಜೋಡಿಯಾಗಿ ಕಿರುತೆರೆ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ; ಜೊತೆಗೆ ಸುಮನ್, ವಿನಯಾ ಪ್ರಸಾದ್, ಸಯಾಜಿ ಶಿಂಧೆ, ಅವಿನಾಶ್, ಪವಿತ್ರಾ ಲೋಕೇಶ್, ಮುಖ್ಯಮಂತ್ರಿ ಚಂದ್ರು ಮತ್ತು ಎಂಎಸ್ ಉಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕಥೆಯನ್ನು ಜನಾರ್ದನ್ ಪಿ. ಜಾನಿ ಬರೆದಿದ್ದು, ಅವರು ಚಿತ್ರದ ಸೃಜನಶೀಲ ನಿರ್ದೇಶಕ (creative director) ಮತ್ತು ವಿಎಫ್‌ಎಕ್ಸ್ (VFX) ಮೇಲ್ವಿಚಾರಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರವಿ ಬಸ್ರೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರೆ, ಗೋಪಾಲ್ ವೆಂಕಟೇಶ್ ಮತ್ತು ಎಟಿ ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣವನ್ನು ನಿರ್ವಹಿಸಿದ್ದು, ಸುರೇಶ್ ಅರಸ್ ಮತ್ತು ಕುಮಾರ್ ಹೆಚ್. ಸಂಕಲನಕಾರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ: ಪೊಲೀಸರಿಗೆ ಸುಪ್ರೀಂ ಕೋರ್ಟ್ ಪಾಠ

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!