ಯಶ್ - ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋಆಫ್' ಹೇಳಿಕೆ ಬಗ್ಗೆ ನಟ ಯಶ್ ಪ್ರತಿಕ್ರಿಯೆ: 'ಹಲವು ನಿರ್ದೇಶಕರು ಬೇಸರಗೊಂಡಿದ್ದರು, ಆದರೆ...'

ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಲವು 'ಬಕ್ವಾಸ್' ಟಿವಿ ಕಾರ್ಯಕ್ರಮಗಳು ಅತಿಥಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅತಿಥಿಗಳು ಆ ಬಲೆಗೆ ಬೀಳುತ್ತಾರೆ ಎಂದು ಯಶ್ ತಿಳಿಸಿದ್ದಾರೆ.

ಹಳೆಯ ಸಂದರ್ಶನವೊಂದರಲ್ಲಿ, ಚಿತ್ರರಂಗದಲ್ಲಿ 'ಮಿಸ್ಟರ್ ಶೋಆಫ್' ಎಂಬ ವಿವರಣೆಗೆ ಯಾರು ಹೊಂದಿಕೆಯಾಗುತ್ತಾರೆ ಎಂದು ನಟಿ ರಶ್ಮಿಕಾ ಮಂದಣ್ಣ ಅವರನ್ನು ಕೇಳಿದಾಗ, ಆರಂಭದಲ್ಲಿ ಈ ಪ್ರಶ್ನೆಗೆ ಉತ್ತರಿಸಲು ಹಿಂಜರಿದ ಅವರು, ಉತ್ತರ ಹೇಳುವುದರಿಂದ ತಮಗೆ ತೊಂದರೆಯಾಗಬಹುದು ಎಂದು ಹೇಳಿದರು. ನಂತರ, ಅವರು ನಟ ಯಶ್ ಹೆಸರನ್ನು ಪ್ರಸ್ತಾಪಿಸಿದರು. ಅವರ ಈ ಹೇಳಿಕೆ ನಂತರ ಉಂಟಾದ ವಿವಾದಕ್ಕೆ 'ಕೆಜಿಎಫ್' (KGF) ತಾರೆ ಆಗಲೇ ಪ್ರತಿಕ್ರಿಯಿಸಿದ್ದರು.

ಇದೀಗ 'ಆಪ್ ಕಿ ಅದಾಲತ್' ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯೊಂದರಲ್ಲಿ, ರಶ್ಮಿಕಾ ಅವರ ಹೇಳಿಕೆ ಕುರಿತಾದ ತಮ್ಮ ಅಭಿಪ್ರಾಯದ ಬಗ್ಗೆ ನಟ ಯಶ್ ಸ್ಪಷ್ಟನೆ ನೀಡಿದ್ದಾರೆ. 'ಅವರು ಯಾವ ಅರ್ಥದಲ್ಲಿ ಹಾಗೆ ಮಾತನಾಡಿದರೋ ನನಗೆ ಗೊತ್ತಿಲ್ಲ. ಆಗ ಅವರು ಚಿತ್ರರಂಗಕ್ಕೆ ಹೊಸಬರಾಗಿದ್ದರು. ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಲವು 'ಬಕ್ವಾಸ್' ಟಿವಿ ಕಾರ್ಯಕ್ರಮಗಳು ಅತಿಥಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅತಿಥಿಗಳು ಆ ಬಲೆಗೆ ಬೀಳುತ್ತಾರೆ ಎಂದಿದ್ದಾರೆ.

'ಅವರಿಗೆ ಯಾವುದಾದರೂ ಒಂದು ತಪ್ಪು ವಿಷಯವನ್ನು ಹೇಳಿ, ಅದನ್ನು ಕೇಳಿದಾಗ ಯಾರ ನೆನಪು ಬರುತ್ತದೆ ಎಂದು ಕೇಳಲಾಗುತ್ತಿತ್ತು ಮತ್ತು ಮೂರ್ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತಿತ್ತು. ಬಹುಶಃ ಆ ಆಯ್ಕೆ (ಯಶ್ ಹೆಸರು) ಸೂಕ್ತವೆಂದು ಅವರಿಗೆ ಅನ್ನಿಸಿರಬಹುದು' ಎಂದು ನಟ ವಿವರಿಸಿದರು. ತಮ್ಮ ಕುರಿತಾದ ರಶ್ಮಿಕಾ ಅವರ ಹೇಳಿಕೆಯು ತಮಗೆ ಬೇಸರ ತರದಿದ್ದರೂ, 'ಹಲವು ನಿರ್ದೇಶಕರಿಗೆ ಅದು ಮುಜುಗರವನ್ನುಂಟುಮಾಡಿತ್ತು' ಎಂದು ಅವರು ತಿಳಿಸಿದರು.

'ವೈಯಕ್ತಿಕವಾಗಿ ನನಗೆ ಅದರಲ್ಲಿ ತಪ್ಪೇನೂ ಕಾಣುವುದಿಲ್ಲ. ಅದು ಅವರ ಅಭಿಪ್ರಾಯವಷ್ಟೇ. ಆಗ ನನ್ನ ಸುತ್ತಲೂ ಕೂಡ ಹಾಗೆಯೇ ಇತ್ತು. ಜನರು ತಮ್ಮ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದರೂ, ಅದು ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಯಾರದ್ದೋ ದೃಷ್ಟಿಕೋನಕ್ಕೆ ಅನುಗುಣವಾಗಿ ನಾನು ಯಾರೆಂಬುದು ಬದಲಾಗುವುದಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ' ಎಂದು ನಟ ಹೇಳಿದರು.

ತಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯದ ಕಾರಣಕ್ಕಾಗಿಯೇ ಇತರರನ್ನು ಅವಮಾನಿಸುವ ಅಥವಾ ನಿಂದಿಸುವ ವ್ಯಕ್ತಿಗಳು ತಮ್ಮ ನಿಜವಾದ ಅಭಿಮಾನಿಗಳಲ್ಲ ಎಂದೂ ಯಶ್ ಸ್ಪಷ್ಟಪಡಿಸಿದರು. 'ನೀವು ಇನ್ನೊಬ್ಬ ನಟನನ್ನು ಗೌರವಿಸದಿದ್ದರೆ, ನೀವು ನನ್ನ ಅಭಿಮಾನಿಯಲ್ಲ' ಎಂದು ಅವರು ಹೇಳಿದರು.

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರ ಆಗಸ್ಟ್ 26ರಂದು ಬಿಡುಗಡೆಗೆ ಸಜ್ಜಾಗಿದ್ದು, ನಟ ಯಶ್ ಇದೀಗ ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'Sheikh Hasinaರನ್ನು ಹಸ್ತಾಂತರಿಸಿ'; ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

ಕಾಂಗ್ರೆಸ್‌ಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಬಗ್ಗೆ ತೀವ್ರ ಅಸಹನೆ, ಅಗೌರವ: Manoj Tiwari

ನನ್ನನ್ನು ಕಾಫಿರ್ ಅಂತೀರಾ?.. ದ್ವೇಷ ಬೆಳಸಿಕೊಂಡು ಅಲ್ಲಾನ ಹುಡುಕಿದರೇ ಸಿಗಲ್ಲ: ಮತಾಂದರರ ವಿರುದ್ಧ ನಟಿ ಫರಿಯಾ ಅಬ್ದುಲ್ಲಾ ಕಿಡಿ, Video

Shocking: ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಆಕಸ್ಮಿಕ ಗುಂಡಿನ 'ದಾಳಿ': ಭದ್ರತಾ ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ

ಬೆಂಗಳೂರು: 'ಎಮ್ಮೆ ತರ ಇದ್ದೀಯಾ' ಎಂದು ಹೀಯಾಳಿಸಿ ಮಹಿಳಾ PSI ಮೇಲೆ ಹಲ್ಲೆ; ನಾಲ್ವರ ವಿರುದ್ಧ FIR!