ಚಿಕ್ಕಣ್ಣ ಮತ್ತು ಅಮೃತಾ ಅಯ್ಯರ್ 
ಸಿನಿಮಾ ಸುದ್ದಿ

ಚಿಕ್ಕಣ್ಣನ 'ಜೋಡೆತ್ತು'ಗೆ ಅಮೃತಾ ಅಯ್ಯರ್ ಜೋಡಿ!

ಚೌಕ, ಕಾಟೇರಾ, ರಾಬರ್ಟ್ ಮತ್ತು ದಿ ಡೆವಿಲ್ ಚಿತ್ರಗಳಿಗೆ ಹೆಸರುವಾಸಿಯಾದ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಸಿನಿಮಾ ಚಿತ್ರೀಕರಣ ಜನವರಿ 5 ರಿಂದ ಆರಂಭವಾಗಿದೆ.

ಹನುಮಾನ್ ಖಾತಿಯ ನಟಿ ಅಮೃತಾ ಅಯ್ಯರ್ ಚಿಕ್ಕಣ್ಣ ಅಭಿನಯದ, ಗ್ರಾಮೀಣ ಹಿನ್ನೆಲೆಯ 'ಜೋಡೆತ್ತು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ.

ಚೌಕ, ಕಾಟೇರಾ, ರಾಬರ್ಟ್ ಮತ್ತು ದಿ ಡೆವಿಲ್ ಚಿತ್ರಗಳಿಗೆ ಹೆಸರುವಾಸಿಯಾದ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಸಿನಿಮಾ ಚಿತ್ರೀಕರಣ ಜನವರಿ 5 ರಿಂದ ಆರಂಭವಾಗಿದೆ.

ಅಮೃತಾ ಅಯ್ಯರ್ ಈಗಾಗಲೇ ತಮ್ಮ ಪಾತ್ರದ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದಾರೆ. ಪ್ಲಾನ್ ಪ್ರಕಾರ ಈ ಚಿತ್ರವು ಮುಂದುವರಿಯುತ್ತಿದ್ದು, ಈ ಹಿಂದೆ ಘೋಷಿಸಲಾದ ಯೋಜನೆಗಳಿಗಿಂತ ಮುಂಚಿತವಾಗಿ ಥಿಯೇಟರ್‌ ನಲ್ಲಿ ಬಿಡುಗಡೆಯಾದರೆ, ಜೋಡೆಟ್ಟು ಅಮೃತಾ ಅಯ್ಯರ್ ನಟನೆಯ ಕನ್ನಡ ಚೊಚ್ಚಲ ಚಿತ್ರವಾಗುವ ಸಾಧ್ಯತೆಯಿದೆ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾದಲ್ಲಿ ಅಮೃತಾ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಈ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಗ್ರಾಮೀಣ ಹಿನ್ನೆಲೆಯಯಿರುವ ಸಿನಿಮಾದಲ್ಲಿ ಜೋಡೆತ್ತು ಹಳ್ಳಿಯ ಜೀವನದಲ್ಲಿ ಬೇರೂರಿರುವ ಕಥೆಯ ಬಗ್ಗೆ ತಿಳಿಸುತ್ತದೆ. ಹಾಸ್ಯ ಮತ್ತು ಭಾವನೆಯೊಂದಿಗೆ ಕಮರ್ಷಿಯಲ್ ಅಂಶಗಳ ಮಿಶ್ರಣವಿದೆ ಎಂದು ಹೇಳಲಾಗುತ್ತದೆ. ಸದ್ಯ ಒಳಾಂಗಣ ಸ್ಥಳಗಳಲ್ಲಿ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ.

ಕೆ ಸೋಮಶೇಖರ್ ತಮ್ಮ ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ವಿ ಹರಿಕೃಷ್ಣ ಸೇರಿದ್ದಾರೆ, ಚಿತ್ರಕ್ಕೆ ಮಾಸ್ತಿ, ರಾಜಶೇಖರ್ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ, ಮೋಹನ್ ಬಿ ಕೆರೆ ನಿರ್ಮಾಣ ವಿನ್ಯಾಸವನ್ನು ನಿರ್ವಹಿಸಲಿದ್ದಾರೆ.

ಅಮೃತ ಅಯ್ಯರ್ ಮತ್ತು ಚಿಕ್ಕಣ್ಣ ಅವರ ಜೊತೆಗೆ, ಈ ಚಿತ್ರದಲ್ಲಿ ತೆಲುಗು ನಟ ಸುನಿಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಮತ್ತು ಪಾತ್ರ-ಆಧಾರಿತ ಅಭಿನಯದಲ್ಲಿ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಸುನಿಲ್, ಶೀಘ್ರದಲ್ಲೇ ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಲು ಸೆಟ್‌ಗೆ ಸೇರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅವಿಶ್ವಾಸ ನಿರ್ಣಯ ಚರ್ಚೆಯಾಗೋವರೆಗೂ ನಾನು ಸದನವನ್ನು ಪ್ರವೇಶಿಸಲ್ಲ, ಸ್ಪೀಕರ್ ಸ್ಥಾನದಲ್ಲಿ ಕೂರಲ್ಲ: ಓಂ ಬಿರ್ಲಾ ಪ್ರತಿಜ್ಞೆ

ನನ್ನ ಆತ್ಮಚರಿತ್ರೆ ಇನ್ನೂ ಪ್ರಕಟವಾಗಿಲ್ಲ: ಪ್ರಕಾಶಕರ ಬೆಂಬಲಕ್ಕೆ ನಿಂತ ಮಾಜಿ ಸೇನಾ ಮುಖ್ಯಸ್ಥ ನರವಾಣೆ

ಮದುವೆ, ಬ್ಲಾಕ್ ಮೇಲ್: ತಾಯಿ-ದೊಡ್ಡಮ್ಮ ಬೆ*ಲೆ ಫೋಟೋ ಕೇಸ್ ಗೆ ಟ್ವಿಸ್ಟ್

ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ. ರಾಮಯ್ಯ ಇನ್ನಿಲ್ಲ

ಟಿ20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ

SCROLL FOR NEXT