ಅಖಿಲಾ ಪಜಿಮಣ್ಣು 
ಸಿನಿಮಾ ಸುದ್ದಿ

ಕೊನೆಗೂ ಮೌನ ಮುರಿದ ಅಖಿಲಾ ಪಜಿಮಣ್ಣು: ಅನುಭವಿಸಿದ ನೋವು ನಮಗೆ ಮಾತ್ರ ಗೊತ್ತು; ಡಿವೋರ್ಸ್ ಕಾರಣ ಬಿಚ್ಚಿಟ್ಟ ಗಾಯಕಿ!

ಕೊರೊನಾ ಸಮಯದಲ್ಲಿ ನಾನು ಮದುವೆ ಆದೆ. ಆ ಬಳಿಕ ಅಮೆರಿಕ ಹೋದೆ. ನಾನು ಅಲ್ಲಿ ಮ್ಯೂಸಿಕ್ ಕ್ಲಾಸ್ ಮಾಡುತ್ತಿದ್ದೆ. ಅಲ್ಲಿ ಗೆಳೆಯರನ್ನು ಮಾಡಿಕೊಳ್ಳಲು ಆರಂಭಿಸಿದೆ. ನಾನು ಖುಷಿಯಾಗಿದ್ದೆ ಎಂದು ಹೇಳಿದ್ದಾರೆ.

ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ವಿವಾಹ ಆಗಿ ಕೆಲವು ವರ್ಷ ಒಟ್ಟಿಗೆ ಇದ್ದರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದರು. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಈ ವರೆಗೆ ಅವರು ಈ ಬಗ್ಗೆ ಮಾತನಾಡಿಯೇ ಇರಲಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈಗ ಅಖಿಲಾ ಅವರು ಈ ಬಗ್ಗೆ ಮಾತನಾಡಿದ್ದಾರೆ.

ದಿ ಪವರ್​ ಹೌಸ್​ ವೈನ್ಸ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೊನಾ ಸಮಯದಲ್ಲಿ ನಾನು ಮದುವೆ ಆದೆ. ಆ ಬಳಿಕ ಅಮೆರಿಕ ಹೋದೆ. ನಾನು ಅಲ್ಲಿ ಮ್ಯೂಸಿಕ್ ಕ್ಲಾಸ್ ಮಾಡುತ್ತಿದ್ದೆ. ಅಲ್ಲಿ ಗೆಳೆಯರನ್ನು ಮಾಡಿಕೊಳ್ಳಲು ಆರಂಭಿಸಿದೆ. ನಾನು ಖುಷಿಯಾಗಿದ್ದೆ ಎಂದು ಹೇಳಿದ್ದಾರೆ.

ನನಗೆ ವಿಚ್ಛೇದನ ವಿಷಯವು ಲೀಕ್ ಆಗುವುದು ಇಷ್ಟವೇ ಇರಲಿಲ್ಲ. ನನ್ನ ತಂದೆ ನನ್ನನ್ನು ಪ್ರಿಪ್ಯಾರ್ ಮಾಡಿದ್ರು. ಸೆಲೆಬ್ರಿಟಿಗಳ ವಿಚ್ಛೇದನ ವಿಷಯ ಲೀಕ್ ಆಗುತ್ತದೆ ಎಂದು ನನ್ನ ತಂದೆಗೆ ಗೊತ್ತಿತ್ತು. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರ ಅಲ್ಲವೇ ಅಲ್ಲ.

ರಾತ್ರಿ ನಾವು ಡಿವೋರ್ಸ್ ಆಗೋಣ ಎಂದು ನಿರ್ಧರಿಸಿ, ಮರುದಿನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರು ನಾವಲ್ಲ. ನಾವಿಬ್ಬರೂ ಒಂದೂವರೆ ವರ್ಷ ಸಂಬಂಧ ಸರಿದೂಗಿಸಲು ಪ್ರಯತ್ನ ಮಾಡಿದೆವು. ವರ್ಕ್ ಆಗುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಭಾರತಕ್ಕೆ ಮರಳಿದೆ ಎಂದು ಅವರು ಹೇಳಿದರು.

ನಾವಿಬ್ಬರೂ ಒಂದೂವರೆ ವರ್ಷ ಪ್ರಯತ್ನಿಸಿದೆವು, ಆದರೆ ಅದು ವರ್ಕ್‌ ಆಗಲಿಲ್ಲ. ಮತ್ತೆೇ ನಾವು ಮೂರು ತಿಂಗಳು ಕೂಡ ಪ್ರಯತ್ನಿಸಿದೆವು. ಅದು ಸ್ಪಷ್ಟವಾಗಿ ಕೆಲಸ ಮಾಡದಿದ್ದರೆ, ಯಾರ ಮಾನಸಿಕ ಶಾಂತಿಗೂ ತೊಂದರೆಯಾಗಬಾರದು. ನನ್ನ ಮಾನಸಿಕ ಶಾಂತಿ ಬಹಳ ಮುಖ್ಯ. ಅವರ ಮಾನಸಿಕ ಶಾಂತಿ ಮುಖ್ಯ. ನನ್ನ ಕುಟುಂಬದ ಶಾಂತಿಯೂ ಮುಖ್ಯ. ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡೆವು.

ನಾವು ಸಾಕಷ್ಟು ಸಮಯ ತೆಗೆದುಕೊಂಡೆವು. ಆಗಲೇ, ನಾವು ಸಿದ್ಧರಾಗಿದ್ದೆವು. ಈ ರೀತಿಯ ಸುದ್ದಿ ಹೊರಬಂದರೆ, ಅದನ್ನು ನಮ್ಮ ವೈಯಕ್ತಿಕ ವಿಷಯವೆಂದು ಪರಿಗಣಿಸುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸಬಾರದು ಎಂದು. ನಾವು ಅನುಭವಿಸಿದ ನೋವು, ನಮಗೆ ಮಾತ್ರ ತಿಳಿದಿದೆ. ಅದು ಎಲ್ಲಕ್ಕಿಂತ ಮುಖ್ಯ. ಹೊರಬರುವ ಸುದ್ದಿ, ಅದು ತುಂಬಾ ಚಿಕ್ಕದು. ಅದು ಏನೂ ಅಲ್ಲ ಎಂದು ನಾನು ಭಾವಿಸಿದೆ.

ನನಗೆ, ಮತ್ತು ಇಡೀ ಕುಟುಂಬಕ್ಕೆ - ತಂದೆ, ತಾಯಿ, ಎಲ್ಲರಿಗೂ ಅದೇ ಅನಿಸಿತು. ಅದು ಏನೂ ಅಲ್ಲ, ಅವರು ಮಾತನಾಡಲಿ, ಬಿಡಲಿ. ನಾವು ಅನುಭವಿಸಿದ ನೋವು ನಮಗೆ ಮಾತ್ರ ತಿಳಿದಿದೆ. ನಾವು ಅನುಭವಿಸಿದ ನೋವು ಹಾಗೆಯೇ ಇತ್ತು ಎಂದಿದ್ದಾರೆ ಅಖಿಲಾ ಪಜಿಮಣ್ಣು.

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT