ಸಿನಿಮಾ ಸುದ್ದಿ

ಮತ್ತೆ ಒಂದಾದ ನಿರ್ದೇಶಕ ಮಹೇಂದರ್, ಸಂಗೀತ ನಿರ್ದೇಶಕ ಹಂಸಲೇಖ; ಹೊಸ ಚಿತ್ರ ಪ್ರಕಟ

ಮುಂಬರುವ ಈ ಯೋಜನೆಯನ್ನು ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆಸಿ ವಿಜಯ್‌ಕುಮಾರ್ ನಿರ್ಮಿಸಿದ್ದಾರೆ.

ಕನ್ನಡ ಚಿತ್ರೋದ್ಯಮದ ದಿಗ್ಗಜರಾದ ನಿರ್ದೇಶಕ ಎಸ್ ಮಹೇಂದರ್ ಮತ್ತು ಸಂಗೀತ ಮಾಂತ್ರಿಕ ಹಂಸಲೇಖ, ಕಳೆದ 33 ವರ್ಷಗಳಲ್ಲಿ 20 ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಆ ಯಶಸ್ವಿ ಸರಣಿಯನ್ನು ಮುಂದುವರೆಸುವ ಪ್ರಯತ್ನದಲ್ಲಿ 21ನೇ ಬಾರಿಗೆ ಒಂದಾಗುತ್ತಿದ್ದಾರೆ. ಮಹೇಂದರ್ ಯಾವಾಗಲೂ ಗ್ರಾಮೀಣ ಭಾಗದ ಕಥೆಯನ್ನು ತೆರೆ ಮೇಲೆ ತರಲು ಹೆಸರುವಾಸಿಯಾಗಿದ್ದಾರೆ. 'ನಾದಬ್ರಹ್ಮ' ಎಂದೇ ಖ್ಯಾತಿ ಪಡೆದಿರುವ ಹಂಸಲೇಖ, ಕನ್ನಡ ಚಿತ್ರರಂಗದಲ್ಲಿ ಕೆಲವು ಸ್ಮರಣೀಯ ಮತ್ತು ಎವರ್‌ಗ್ರೀನ್ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇದೀಗ ಇವರಿಬ್ಬರ ಸಹಯೋಗವು ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದೆ.

ಮುಂಬರುವ ಈ ಯೋಜನೆಯನ್ನು ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆಸಿ ವಿಜಯ್‌ಕುಮಾರ್ ನಿರ್ಮಿಸಿದ್ದಾರೆ. ಈ ಜೋಡಿಯ ಸಿಗ್ನೇಚರ್ ಶೈಲಿಯನ್ನು ಇಂದಿನ ಪ್ರೇಕ್ಷಕರಿಗೆ ತೋರಿಸಿ ಹೊಸ ಸಿನಿಮೀಯ ಅನುಭವವನ್ನು ನೀಡುವ ಗುರಿಯನ್ನು ಈ ಚಿತ್ರ ಹೊಂದಿದೆ.

ಶೃಂಗಾರ ಕಾವ್ಯ, ಸ್ನೇಹಲೋಕ, ಗಟ್ಟಿ ಮೇಳ, ಗೌಡ್ರು, ಕರ್ಪೂರದ ಗೊಂಬೆ, ಕೊಡಗಿನ ಕಾವೇರಿ, ತಾಯಿ ಇಲ್ಲದ ತವರು, ಕೌರವ, ಹೆತ್ತವರು ಮತ್ತು ಚಂದ್ರೋದಯದಂತಹ ಹಿಟ್‌ ಚಿತ್ರಗಳು ಈಗಾಗಲೇ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆದಿರುವುದರಿಂದ, ಅವರ ಹೊಸ ಯೋಜನೆಗಾಗಿ ನಿರೀಕ್ಷೆಗಳು ಗಗನಕ್ಕೇರಿವೆ.

ಜನವರಿ 16 ರಂದು ಸಂಕ್ರಾಂತಿ ಹಬ್ಬದಂದು ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲು ಮತ್ತು ತಾರಾಗಣವನ್ನು ಪರಿಚಯಿಸಲು ತಂಡವು ಸಜ್ಜಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ಒಂದರ ನಂತರ ಒಂದರಂತೆ ಮೂರು ದಶಕಗಳ ಕಾಲ ಹಿಟ್‌ಗಳನ್ನು ನೀಡಿದ ನಂತರ, ಮಹೇಂದರ್ ಮತ್ತು ಹಂಸಲೇಖ ಅದೇ ಶಕ್ತಿ, ಶಿಸ್ತು ಮತ್ತು ಉತ್ಸಾಹದೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ದೃಶ್ಯ ಮತ್ತು ಸಂಗೀತ ಪ್ರಯಾಣವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ