ರಣವೀರ್ ಸಿಂಗ್ ಮತ್ತು ರಜನಿಕಾಂತ್ 
ಸಿನಿಮಾ ಸುದ್ದಿ

ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ: ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್ ;'ಧುರಂಧರ್' ಹೊಗಳಿದ ರಜನಿಕಾಂತ್

ಎಂಥ ಚಿತ್ರ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣ್​​ವೀರ್ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್" ಎಂದು ರಜನಿ ಟ್ವೀಟ್ ಮಾಡಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾವನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಶ್ಲಾಘಿಸಿದ್ದು, "ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ" ಎಂದು ತಿಳಿಸಿದ್ದಾರೆ.

ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ, ಬಾಲಿವುಡ್ ನಟ ರಣ್​​ವೀರ್ ಸಿಂಗ್ ಮತ್ತು ಚಿತ್ರದ ಹಿಂದಿರುವ ತಂಡವನ್ನು ಅಭಿನಂದಿಸಿದ ಹಿರಿಯ ನಟ, ಬಾಕ್ಸ್ ಆಫೀಸ್‌ನಲ್ಲಿನ ಚಿತ್ರದ ಓಟವನ್ನೂ ಶ್ಲಾಘಿಸಿದರು.

ಎಂಥ ಚಿತ್ರ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣ್​​ವೀರ್ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್" ಎಂದು ರಜನಿ ಟ್ವೀಟ್ ಮಾಡಿದ್ದಾರೆ.

2025ರ ಬ್ಲಾಕ್​ಬಸ್ಟರ್ ಸಿನಿಮಾವಾದ ಧುರಂಧರ್ ಚಿತ್ರದ ಸೀಕ್ವೆಲ್​​​ ಆಗಿರುವ 'ಧುರಂಧರ್: ದಿ ರಿವೇಂಜ್' ಸಿನಿಮಾ, ಅದ್ಭುತ ಅಭಿನಯ ಮತ್ತು ದೇಶಭಕ್ತಿಯ ವಿಷಯಗಳಿಂದ ಹೆಚ್ಚಿನ ಗಮನ ಸೆಳೆಯುತ್ತಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ರಜನಿಕಾಂತ್​ ಅಭಿಪ್ರಾಯ ಹೊರಬಿದ್ದಿದ್ದು, ಫಿಲ್ಮ್​​​ಮೇಕರ್​ ಅದಿತ್ಯ ಧರ್​​​ ಮನದುಂಬಿ ಧನ್ಯವಾದ ಅರ್ಪಿಸಿದ್ದಾರೆ.

'ಸರ್, ನಾವೆಲ್ಲರೂ 'ಮನರಂಜನೆ'ಯನ್ನು ಒಂದೇ ಮಾನದಂಡದಿಂದ ಅಳೆಯುತ್ತಾ ಬೆಳೆದಿದ್ದೇವೆ, ಅದು ನೀವು. ದಶಕಗಳಿಂದ ನಾವು ಶಿಳ್ಳೆ ಹೊಡೆಯುವುದು, ನಗುವುದು ಮತ್ತು ಅಳುವಂತೆ ಮಾಡಿದ್ದೀರಿ. ಅದೇ ಸ್ವಾಗ್​ನೊಂದಿಗೆ ನಿಮ್ಮ ಕೆಲಸವನ್ನು ಮುಂದುವರಿಸಿದ್ದೀರಿ. ಅದು ಪ್ಯೂರ್ ಮ್ಯಾಜಿಕ್. ನೀವು ಧುರಂಧರ್ 2 ಅನ್ನು ನೋಡಲೇಬೇಕಾದ ಚಿತ್ರ ಎಂದು ಕರೆದಿರುವುದು ನನ್ನ ಜೀವನದ ಬಿಗ್ಗೆಸ್ಟ್ ಸೂಪರ್‌ಸ್ಟಾರ್ ಕ್ಷಣದಂತೆ ಭಾಸವಾಗುತ್ತಿದೆ. ನಮಗೆಲ್ಲರಿಗೂ ದೊಡ್ಡ ಕನಸು ಕಾಣಲು ಕಲಿಸಿದ ವ್ಯಕ್ತಿಯ ಆಶೀರ್ವಾದದಂತೆ ಭಾಸವಾಗುತ್ತಿದೆ. ಪದಗಳಿಗೂ ಮೀರಿದ ಕೃತಜ್ಞತಾ ಭಾವ. ಇದು ನೇರವಾಗಿ ಹೃದಯಕ್ಕೆ ತಲುಪಿದೆ. ಜೈ ಹಿಂದ್'' ಎಂದು ನಿರ್ದೇಶಕ ಆದಿತ್ಯ ಧರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮಿಲಿಟರಿ ಕಾರ್ಯಾಚರಣೆ ಮಾಡೋಣ ಎಂದಿದ್ದು ನೀವು': ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ, ರಕ್ಷಣಾ ಕಾರ್ಯದರ್ಶಿ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಅಮೆರಿಕಾ ಅಧ್ಯಕ್ಷ..!

West Asia war: ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ; ಶತ್ರು ರಾಷ್ಟ್ರಕ್ಕೆ ಹೆಚ್ಚಿದ ಜಾಗತಿಕ ಪ್ರಾಮುಖ್ಯತೆ, ಭಾರತಕ್ಕೆ ತೀವ್ರ ಹಿನ್ನಡೆ..?

ಕೊಲಂಬಿಯಾ ಸೇನಾ ವಿಮಾನ ಪತನ: ಕನಿಷ್ಠ 66 ಮಂದಿ ಸಾವು, ಹಲವರಿಗೆ ಗಾಯ-Video

ವಾಯುದಾಳಿ: ಇರಾನ್ ಇಂಧನ ಮೂಲಸೌಕರ್ಯಕ್ಕೆ ಭಾರೀ ಹಾನಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ಅಮೆರಿಕಾದ ವ್ಯಾಲೆರೋ ರಿಫೈನರಿಯಲ್ಲಿ ಭೀಕರ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆ, ಹೆಚ್ಚಿದ ಆತಂಕ

SCROLL FOR NEXT