ಸಿನಿಮಾ ಸುದ್ದಿ

ಗಿಲ್ಲಿಯಿಂದ ಲಿಯೋವರೆಗೆ: ತೆರೆ ಮೇಲೆ ಮೋಡಿ ಮಾಡಿದ ತ್ರಿಶಾ ಕೃಷ್ಣನ್-ದಳಪತಿ ವಿಜಯ್ ಚಿತ್ರಗಳು...

ಈ ಜೋಡಿ ಗಿಲ್ಲಿಯಿಂದ ಲಿಯೋವರೆಗೆ, ಆಕ್ಷನ್, ಪ್ರೇಮ ಮತ್ತು ಡ್ರಾಮಾ ಚಿತ್ರಗಳಲ್ಲಿ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.

‘ಗಿಲ್ಲಿ’ಯಿಂದ ‘ಲಿಯೋ’ವರೆಗೆ: ತ್ರಿಶಾ ಕೃಷ್ಣನ್ ಮತ್ತು ವಿಜಯ್ ದಳಪತಿ ಅವರ ಅತ್ಯುತ್ತಮ ಆನ್-ಸ್ಕ್ರೀನ್ ಕ್ಷಣಗಳ ಪುನರ್‌ ಅವಲೋಕನ ಇಲ್ಲಿದೆ

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವಿನ ಕೆಮಿಸ್ಟ್ರಿ ಕಾಲಿವುಡ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದೆ, ಇದೀಗ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಗೆಲುವಿನ ನಂತರ ಅವರ ಆಫ್ ಲೈನ್ ಕೆಮೆಸ್ಟ್ರಿ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಜೋಡಿ ಗಿಲ್ಲಿಯಿಂದ ಲಿಯೋವರೆಗೆ, ಆಕ್ಷನ್, ಪ್ರೇಮ ಮತ್ತು ಡ್ರಾಮಾ ಚಿತ್ರಗಳಲ್ಲಿ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.

‘ಲಿಯೋ’

ಲೋಕೇಶ್ ಕನಗರಾಜ್ ನಿರ್ದೇಶನದ ‘ಲಿಯೋ’ ದಳಪತಿ ವಿಜಯ್ ಅವರ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ. ಈ ಆಕ್ಷನ್ ಥ್ರಿಲ್ಲರ್ 2023 ಅಕ್ಟೋಬರ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ವಿಮರ್ಶಕರಿಂದಲೂ ಹಾಗೂ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿತು. ನಂತರ ಇದು ಇತಿಹಾಸದಲ್ಲೇ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿತು.

ಕಥೆಯು ಹಿಮಾಚಲ ಪ್ರದೇಶದಲ್ಲಿ ಕೆಫೆ ಮಾಲೀಕರಾಗಿಯೂ ಪ್ರಾಣಿಗಳ ರಕ್ಷಕರಾಗಿಯೂ ಇರುವ ಪಾರ್ಥಿಬನ್ (ವಿಜಯ್) ಅವರ ಸುತ್ತ ಸುತ್ತುತ್ತದೆ. ಆತ್ಮರಕ್ಷಣೆಯ ಸಂದರ್ಭದಲ್ಲಿನ ದಾಳಿಕೋರರನ್ನು ಕೊಂದ ನಂತರ ಅವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ತ್ರಿಶಾ ಕೃಷ್ಣನ್ ‘ಸತ್ಯ’ ಪಾತ್ರದಲ್ಲಿ ಕಾಣಿಸಿಕೊಂಡು, ಪತಿಯನ್ನು ಬೆಂಬಲಿಸುವ ಪತ್ನಿ ಹಾಗೂ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಚಿತ್ರ OTT ಯಲ್ಲಿ ಸ್ಟ್ರೀಮಿಂಗ್‌ ಆಗಿದ್ದು, ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

‘ಗಿಲ್ಲಿ’

‘ಗಿಲ್ಲಿ’ ಒಂದು ಕ್ರೀಡಾ ಡ್ರಾಮಾ ಚಿತ್ರವಾಗಿದ್ದು, ಮಹೇಶ್ ಬಾಬು ಅಭಿನಯದ ತೆಲುಗು ಹಿಟ್ ಚಿತ್ರ ‘ಒಕ್ಕಡು’ಯ ತಮಿಳು ರಿಮೇಕ್ ಆಗಿದೆ. ಈ ಚಿತ್ರವು ಮೊದಲಿಗೆ 2004ರಲ್ಲಿ ಬಿಡುಗಡೆಯಾಗಿ, 2024ರಲ್ಲಿ ಮರುಬಿಡುಗಡೆಯಾಗಿ ವಿಶೇಷವಾಗಿ ದಳಪತಿ ವಿಜಯ್ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಪಡೆದಿತು.

ಈ ಚಿತ್ರವು ಕಬಡ್ಡಿ ಆಟಗಾರ ವೇಲು (ವಿಜಯ್) ಕಥೆಯನ್ನು ಹೇಳುತ್ತದೆ. ಲೋಕಲ್ ರೌಡಿ ಮುತ್ತುಪಾಂಡಿ (ಪ್ರಕಾಶ್ ರಾಜ್)ಯಿಂದ ಧನಲಕ್ಷ್ಮಿ (ತ್ರಿಶಾ) ಅವರನ್ನು ರಕ್ಷಿಸಲು ವೇಲು ಮುಂದಾಗುತ್ತಾನೆ. ಈ ಚಿತ್ರವು ಪ್ರಸ್ತುತ OTTನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.

‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’

‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಒಂದು ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, 2024 ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಚಿತ್ರವು ಆ ವರ್ಷದ ಅತ್ಯಧಿಕ ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿತು.

ಚಿತ್ರದ ಕಥೆ ವಿಶೇಷ ಭಯೋತ್ಪಾದನೆ ವಿರೋಧಿ ದಳದ ಅಧಿಕಾರಿ ಗಾಂಧಿ (ವಿಜಯ್) ಸುತ್ತ ಸುತ್ತುತ್ತದೆ. ಅವರು ತಮ್ಮ ತಂಡದ ಸದಸ್ಯರಾದ ಅಜಯ್, ಕಲ್ಯಾಣ್ ಮತ್ತು ಸುನಿಲ್ ಜೊತೆಗೂಡಿ ಯುರೇನಿಯಂ ಕಳವು ಮಾಡಿ ದೇಶದೊಂದಿಗೆ ದ್ರೋಹ ಮಾಡಿದ ಮಾಜಿ ಮುಖ್ಯಸ್ಥನನ್ನು ಪತ್ತೆಹಚ್ಚುವ ಮಿಷನ್‌ಗೆ ತೆರಳುತ್ತಾರೆ. ತಂಡವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಗಾಂಧಿ ನಿವೃತ್ತಿ ಪಡೆಯಲು ನಿರ್ಧರಿಸುತ್ತಾರೆ, ಆದರೆ ಅವರ ಹಿಂದಿನ ಮಿಷನ್‌ಗಳು ಮತ್ತೆ ಅವರನ್ನು ಕಾಡಲು ಆರಂಭಿಸುತ್ತವೆ.

ಈ ಚಿತ್ರದಲ್ಲಿ ತ್ರಿಶಾ ಕೃಷ್ಣನ್ ವಿಶೇಷ ಪಾತ್ರದಲ್ಲಿ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

‘ಆದಿ’

ಆಕ್ಷನ್ ಚಿತ್ರವಾದ ‘ಆದಿ’ಯಲ್ಲಿ ವಿಜಯ್ ಆಥಿಕೇಶವನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತ್ರಿಷಾ ಅವರು ಅಂಜಲಿ ಕೃಷ್ಣಂಕುಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದು 2005ರ ತೆಲುಗು ಚಿತ್ರ ‘ಅತನೊಕ್ಕಡೆ’ಯ ತಮಿಳು ರಿಮೇಕ್ ಆಗಿದೆ.

ಈ ಕಥೆ ವಿಜಯ್ ಅವರ ಪಾತ್ರದ ಸುತ್ತ ಸುತ್ತುತ್ತದೆ, ತಮ್ಮ ತಂದೆ-ತಾಯಿಯನ್ನು ಹತ್ಯೆ ಮಾಡಿದ ಗ್ಯಾಂಗ್ಸ್ಟರ್‌ನ್ನು ಹುಡುಕಲು ಗುಪ್ತ ಮಿಷನ್‌ಗೆ ಹೊರಡುವ ಯುವಕನ ಕಥೆಯಾಗಿದೆ. ಅದೇ ಸಮಯದಲ್ಲಿ, ತ್ರಿಷಾ ಅವರು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡ ನಂತರ ಪ್ರತೀಕಾರಕ್ಕಾಗಿ ಪ್ರಯತ್ನಿಸುವ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ.

‘ತಿರುಪಾಚಿ’

2005ರಲ್ಲಿ ಬಿಡುಗಡೆಯಾದ ‘ತಿರುಪಾಚಿ’ ವಿಜಯ್ ಮತ್ತು ತ್ರಿಷಾ ಅವರ ಮತ್ತೊಂದು ಯಶಸ್ವಿ ಚಿತ್ರವಾಗಿದೆ. ಈ ಚಿತ್ರವು ಸರಳ ಗ್ರಾಮೀಣ ರೈತನಾದ ಶಿವಗಿರಿ (ವಿಜಯ್) ತನ್ನ ತಂಗಿ ಹಾಗೂ ಆಕೆಯ ಕುಟುಂಬವನ್ನು ರಕ್ಷಿಸಲು ಗುಂಡಾಗಳ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿದೆ.

ತ್ರಿಶಾ ‘ಸುಭಾ’ ಪಾತ್ರದಲ್ಲಿ ಚುರುಕು ಮತ್ತು ಉತ್ಸಾಹಭರಿತ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್​ ಟ್ವಿಸ್ಟ್: TVK ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ; DMK ಮೈತ್ರಿಗೆ ಭಾರಿ ಶಾಕ್, ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ..!

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದರಾಮಯ್ಯ ಸಿದ್ದ: ಹೈಕಮಾಂಡ್ ಆದೇಶಕ್ಕೆ ಪರಮೇಶ್ವರ್ ಬದ್ಧ; ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದಿದ್ದೇಕೆ ಖರ್ಗೆ?

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

ಹೈಕಮಾಂಡ್ ಕರೆದ ತಕ್ಷಣ ದೆಹಲಿಗೆ ಪ್ರಯಾಣ: 2028 ರಲ್ಲೂ ನಮ್ಮದೇ ಸರ್ಕಾರ ಫಿಕ್ಸ್; ಸಿಎಂ ಸಿದ್ದರಾಮಯ್ಯ

SCROLL FOR NEXT