ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

'ಕೆಜಿಎಫ್‌ಗೂ ಮುನ್ನ ಯಶ್ ಯಾರೆಂಬುದು ಗೊತ್ತಿರಲಿಲ್ಲ'; ಅಲ್ಲು ಅರವಿಂದ್ ಹೇಳಿಕೆ ಸಮರ್ಥಿಸಿಕೊಂಡ ರಾಮ್ ಗೋಪಾಲ್ ವರ್ಮಾ!

ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ ಟಾಕ್ಸಿಕ್ ಚಿತ್ರ ಆಗಸ್ಟ್ 26 ರಂದು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಕೆಜಿಎಫ್‌ಗೂ ಮುನ್ನ ಯಶ್ ಅವರ ತಾರಾಪಟ್ಟದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೇರಿಕೊಂಡಿದ್ದಾರೆ. ಅಲ್ಲು ಅರವಿಂದ್ ಅವರ ಹಳೆಯ ಹೇಳಿಕೆ ಕುರಿತಾದ ಚರ್ಚೆಯನ್ನು 'ಹಾಸ್ಯಾಸ್ಪದ ಮತ್ತು ನಗೆಪಾಟಲು' ಎಂದು ಕರೆದಿದ್ದಾರೆ.

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಯಾದ ನಂತರ 2023ರಲ್ಲಿ ನಟ ಯಶ್ ಬಗ್ಗೆ ಅಲ್ಲು ಅರವಿಂದ್ ನೀಡಿದ್ದ ಹೇಳಿಕೆ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡ ನಂತರ ಈ ಚರ್ಚೆ ಪ್ರಾರಂಭವಾಯಿತು. ಕೆಜಿಎಫ್ ಚಿತ್ರಗಳಿಗೂ ಮೊದಲು ಯಶ್ ಯಾರು ಎಂದು ತೆಲುಗಿನ ನಿರ್ಮಾಪಕ ಅಲ್ಲು ಅರವಿಂದ್ ಪ್ರಶ್ನಿಸಿದ್ದರು. ಈ ಹೇಳಿಕೆ ಆಗ ನಟ ಯಶ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಚರ್ಚೆಗೆ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ವರ್ಮಾ, ಅಲ್ಲು ಅರವಿಂದ್ ಅವರ ಮಾತನ್ನು ಸಮರ್ಥಿಸಿಕೊಂಡರು. 'ಯಶ್ ಬಗ್ಗೆ ಅಲ್ಲು ಅರವಿಂದ್ ಅವರ ಹೇಳಿಕೆಗೆ ಸಂಬಂಧಿಸಿದ ವಿವಾದವು ಹಾಸ್ಯಾಸ್ಪದ ಮತ್ತು ನಗೆಪಾಟಲಿಗೆ ಈಡಾಗುವಂತಹದ್ದು. ಏಕೆಂದರೆ, ಅಪರಿಚಿತ ನಟರಿರುವ ದೊಡ್ಡ ಚಿತ್ರಗಳ ಬಗ್ಗೆ ಮಾತನಾಡುವಾಗ ಮತ್ತು ಕೆಜಿಎಫ್‌ಗಿಂತ ಮೊದಲು ನಟ ಯಶ್ ಬಗ್ಗೆ ತನಗೆ ತಿಳಿದಿರಲಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎಂಬುದನ್ನು ಎಂತಹ ಮೂರ್ಖರೂ ಸಹ ಅರ್ಥಮಾಡಿಕೊಳ್ಳಬಹುದು' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

'ಬಾಹುಬಲಿ ಚಿತ್ರಕ್ಕಿಂತ ಮೊದಲು ಹಿಂದಿ ಪ್ರೇಕ್ಷಕರಿಗೆ ಪ್ರಭಾಸ್‌ ಬಗ್ಗೆ ತಿಳಿದಿರಲಿಲ್ಲ, ಕಾಂತಾರಕ್ಕಿಂತ ಮೊದಲು ರಿಷಭ್ ಬಗ್ಗೆ ತಿಳಿದಿರಲಿಲ್ಲ, ಗಾಡ್‌ಫಾದರ್‌ಗಿಂತ ಮೊದಲು ನನಗೆ ಬ್ರಾಂಡೊ ಬಗ್ಗೆ ತಿಳಿದಿರಲಿಲ್ಲ.. ಬಹುಶಃ ಅವರು ತಮ್ಮ 'A street car named desire', 'On the Waterfront' ಇತ್ಯಾದಿ ಚಿತ್ರಗಳಲ್ಲಿ ಮೊದಲು ಸ್ಟಾರ್ ಆಗಿದ್ದಿರಬಹುದು.. ಅವು ಭಾರತದಲ್ಲಿಯೂ ಬಿಡುಗಡೆಯಾದವೋ ಇಲ್ಲವೋ ಗೊತ್ತಿಲ್ಲ.. ಏಕೆಂದರೆ ಆ ಚಿತ್ರಗಳು ಅವರನ್ನು ದೊಡ್ಡ ತಾರೆಗಳನ್ನಾಗಿ ಮಾಡಿದ್ದವು. ಹಾಲಿವುಡ್ ಯಾವಾಗಲೂ ಕಾನ್ಸೆಪ್ಟ್ ಚಿತ್ರಗಳಿಗೆ ಹೆಚ್ಚು ಖರ್ಚು ಮಾಡುತ್ತದೆ ಮತ್ತು ತಾರೆಯರ ಮೇಲೆ ಅಲ್ಲ.. ನೋಲನ್‌ನಂತಹ ನಿರ್ದೇಶಕರು ಸಹ ತಮ್ಮ ನಟನಾ ಕೌಶಲ್ಯಕ್ಕಾಗಿ ಮಾತ್ರ ಹೆಸರುಗಳನ್ನು ಬಳಸುತ್ತಾರೆ ಮತ್ತು ಅವರ ತಾರಾಪಟ್ಟದಿಂದ ಅಲ್ಲ.. ಅದು ಓಪನ್‌ಹೈಮರ್ ಆಗಿರಲಿ ಅಥವಾ ಒಡಿಸ್ಸಿ ಆಗಿರಲಿ, ಅದರಲ್ಲಿ ಯಾರಿದ್ದರೂ ಅವರು ಅಷ್ಟೇ ಕೆಲಸ ಮಾಡುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಲ್ಲು ಅರವಿಂದ್ ವಿಷಯ ಹೇಳುವುದಾದರೆ, ಅವರ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವವರು ತುಂಬಾ ಅಹಂಕಾರಿ ಜನರು ಮಾತ್ರ.. ವಾಸ್ತವವಾಗಿ ಈ ರೀತಿಯ ಪ್ರತಿಕ್ರಿಯೆಯು ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುತ್ತದೆ' ಎಂದಿದ್ದಾರೆ.

ಯಶ್ 'ಟಾಕ್ಸಿಕ್' ಚಿತ್ರದ ಮೂಲಕ ಮತ್ತೆ ಗಮನ ಸೆಳೆದಿರುವ ಈ ಸಮಯದಲ್ಲಿ ಅಲ್ಲು ಅರವಿಂದ್ ಅವರ ಹೇಳಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರ ಆಗಸ್ಟ್ 26 ರಂದು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಗ್ಯಾಂಗ್‌ಸ್ಟರ್ ಡ್ರಾಮಾ ಹಲವಾರು ವೀಕ್ಷಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದ್ದರೂ, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ.

ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!