ಯಶ್, ಶಿವಣ್ಣ 
ಸಿನಿಮಾ ಸುದ್ದಿ

ಪ್ರೇಕ್ಷಕರ ನಡುವೆ ಕುಳಿತು 'ಟಾಕ್ಸಿಕ್' ಸಿನಿಮಾ ವೀಕ್ಷಿಸಿದ ಶಿವಣ್ಣ! ಯಶ್ ಬಗ್ಗೆ ಹೇಳಿದ್ದೇನು?

ನಟನಾಗಿ ಅಥವಾ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡುವುದಕ್ಕಿಂತ ಈ ರೀತಿಯಾಗಿ ಪ್ರೇಕ್ಷಕರೊಂದಿಗೆ ಸಿನಿಮಾ ನೋಡುವುದು ನನಗೆ ವಿಭಿನ್ನ ದೃಷ್ಟಿಕೋನ ನೀಡುತ್ತದೆ ಎಂದು ಶಿವಣ್ಣ ಹೇಳಿದರು.

ಶಿವಣ್ಣನ ಪಾಲಿಗೆ ಯಶ್ ಸಿನಿಮಾ ವೀಕ್ಷಿಸುವುದು ಎಂದಿಗೂ ಕೇವಲ ಒಂದು ಸಾಮಾನ್ಯ 'ಸೆಲೆಬ್ರಿಟಿ ಸ್ಕ್ರೀನಿಂಗ್' (ವಿಶೇಷ ಪ್ರದರ್ಶನ) ಆಗಿರಲಿಲ್ಲ. ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಚಿತ್ರಕ್ಕಾಗಿ ಸ್ವತಃ ಟಿಕೆಟ್ ಕಾಯ್ದಿರಿಸಿಕೊಂಡು ಪ್ರೇಕ್ಷಕರ ನಡುವೆ ಕುಳಿತು ಸಿನಿಮಾ ವೀಕ್ಷಿಸಿದರು.

ನಟನಾಗಿ ಅಥವಾ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡುವುದಕ್ಕಿಂತ ಈ ರೀತಿಯಾಗಿ ಪ್ರೇಕ್ಷಕರೊಂದಿಗೆ ಸಿನಿಮಾ ನೋಡುವುದು ನನಗೆ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪ್ರದರ್ಶನದ ನಂತರ, ಶಿವಣ್ಣ ಚಿತ್ರದ ಅದ್ದೂರಿತನ ಹಾಗೂ ನಿರ್ಮಾಣದ ಗುಣಮಟ್ಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅದರಲ್ಲೂ ವಿಶೇಷವಾಗಿ ಚಿತ್ರದ ದ್ವಿತೀಯಾರ್ಧ ಮತ್ತು ಅಂತಿಮ 20 ನಿಮಿಷಗಳನ್ನು ಅವರು ಪ್ರಮುಖವಾಗಿ ಹೈಲೆಟ್ ಮಾಡಿದರು.

"ಯಶ್ ನಮ್ಮ ಹುಡುಗ: ಟಾಕ್ಸಿಕ್ ಒಂದು ಅತ್ಯುತ್ತಮ ಪ್ರಯತ್ನ. ಚಿತ್ರದ ನಿರ್ಮಾಣದಲ್ಲಿ ಅದ್ದೂರಿತನ ಮತ್ತು ಶ್ರೀಮಂತಿಕೆ ಎದ್ದು ಕಾಣುತ್ತದೆ. ದ್ವಿತೀಯಾರ್ಧದ ಕುತೂಹಲಕಾರಿ ಅಂಶಗಳು ಮತ್ತು ಕೊನೆಯ 20 ನಿಮಿಷಗಳನ್ನು ಅತ್ಯುತ್ತಮವಾಗಿ ನಿರೂಪಿಸಲಾಗಿದೆ ಎಂದು ಅವರು ಹೇಳಿದರು. ಯಶ್ ಅವರ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಅವರನ್ನು ಅತ್ಯಂತ ಆತ್ಮೀಯ ಎಂದು ಹೇಳಿದರು. "ಯಶ್ ನಮ್ಮ ಹುಡುಗ. ನಮ್ಮ ಹುಡುಗನ ಸಿನಿಮಾ ಆಗಿದ್ದರಿಂದಲೇ ನಾನು ಬಂದೆ. ಯಶ್ ಏನಾದರೂ ಸಾಧನೆ ಮಾಡಿದ್ರೆ, ನನ್ನ ಸ್ವಂತ ತಮ್ಮನೇ ಆ ಸಾಧನೆ ಮಾಡಿದಾಗ ಆಗುವಷ್ಟು ಹೆಮ್ಮೆ ನನಗೂ ಆಗುತ್ತದೆ ಎಂದು ಶಿವಣ್ಣ ಹೇಳಿದರು.

ಈ ಬೆಂಬಲಕ್ಕೂ ಯಶ್ ಅವರ 'ಸ್ಟಾರ್' ಸ್ಥಾನಮಾನಕ್ಕೂ ಯಾವುದೇ ಸಂಬಂಧವಿಲ್ಲ. ಒಂದೇ ಚಿತ್ರರಂಗದ ವ್ಯಕ್ತಿಯೊಬ್ಬರು ಧೈರ್ಯದಿಂದ ಹೊಸ ಪ್ರಯತ್ನಗಳನ್ನು ಮಾಡಿ ಮುನ್ನಡೆಯುವುದನ್ನು ನೋಡುವುದೇ ಮುಖ್ಯ ವಿಷಯ. "ಯಶ್ ಕೇವಲ ಪ್ರಸಿದ್ಧರಾಗಿದ್ದಾರೆ ಎಂಬ ಕಾರಣಕ್ಕೆ ನಾನು ಅವರನ್ನು ಬೆಂಬಲಿಸುತ್ತಿಲ್ಲ. ಅವರು ಮಾಡುವ ಪ್ರತಿಯೊಂದು ಹೊಸ ಪ್ರಯತ್ನಕ್ಕೂ ನಾವು ಯಾವಾಗಲೂ ಬೆಂಬಲ ನೀಡುತ್ತೇವೆಎಂದು ಅವರು ಹೇಳಿದರು. ಒಟಿಟಿ (OTT) ಬಿಡುಗಡೆಗಾಗಿ ಕಾಯುವ ಬದಲು, ಚಿತ್ರಮಂದಿರದಲ್ಲಿ ಇತರ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸುವ ಅನುಭವವನ್ನು ಯಾಕೆ ಹೆಚ್ಚು ಇಷ್ಟಪಡುತ್ತೇನೆ ಎಂಬುದನ್ನೂ ಶಿವಣ್ಣ ವಿವರಿಸಿದರು.

ವಿಶ್ವಾದ್ಯಂತ ಸುಮಾರು ₹328.45 ಕೋಟಿ ಗಳಿಕೆ: ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) ನಿರ್ಮಿಸಿರುವ ಹಾಗೂ ಅನೇಕ ಪ್ರತಿಭಾವಂತ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನು ಪಡೆಯಿತು. ಸೆಪ್ಟೆಂಬರ್ 4 ರಂದು ವರದಿಯಾದ ಕಮರ್ಷಿಯಲ್ ಅಂಕಿಅಂಶಗಳ ಪ್ರಕಾರ, 9ನೇ ದಿನದ ಅಂತ್ಯಕ್ಕೆ ಈ ಚಿತ್ರವು ಭಾರತದಲ್ಲಿ ಸುಮಾರು ₹239.30 ಕೋಟಿ (ನಿವ್ವಳ) ಮತ್ತು ವಿಶ್ವಾದ್ಯಂತ ಸುಮಾರು ₹328.45 ಕೋಟಿ ಗಳಿಸಿದೆ.

"ಸಿನಿಮಾ ಒಟಿಟಿಯಲ್ಲಿ ಬರುವವರೆಗೆ ಕಾಯುವುದಿಲ್ಲ. ನಾನೇ ಸ್ವತಃ ಟಿಕೆಟ್ ಕಾಯ್ದಿರಿಸಿಕೊಂಡು, ಪಾಪ್‌ಕಾರ್ನ್ ತಿನ್ನುತ್ತಾ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಅದರಲ್ಲಿ ಒಂದು ವಿಶಿಷ್ಟವಾದ ಸಂತೋಷವಿದೆ. ನಟನಾಗಿ ಅಲ್ಲದೆ ಒಬ್ಬ ಸಾಮಾನ್ಯ ವೀಕ್ಷಕನಾಗಿ ಸಿನಿಮಾ ನೋಡಿದಾಗ, ಅದರ ಭಾವನೆಗಳನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಚಲನಚಿತ್ರೋದ್ಯಮದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ, ಪೈರಸಿ ಮತ್ತು ಪ್ರೇಕ್ಷಕರ ಬದಲಾಗುತ್ತಿರುವ ವೀಕ್ಷಣಾ ಅಭ್ಯಾಸಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ನಟ ಶಿವಣ್ಣ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪೈರಸಿಯು ಸುಲಭ ಪರಿಹಾರವಿಲ್ಲದ ಸಮಸ್ಯೆಯಾಗಿ ಮುಂದುವರಿದಿದೆ ಎಂದು ಹೇಳಿದಅವರು, 'ಟಾಕ್ಸಿಕ್' (Toxic) ನಂತಹ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸುವಂತೆ ಪ್ರೇಕ್ಷಕರಿಗೆ ಕರೆ ನೀಡಿದರು.

ಶಿವಣ್ಣನ ಮಾತಿನ ಮುಖ್ಯ ಉದ್ದೇಶ ಕನ್ನಡ ಚಿತ್ರರಂಗವನ್ನು ಬೆಂಬಲಿಸುವುದರ ಕುರಿತಾಗಿತ್ತೇ ಹೊರತು, ಅದನ್ನು ಸ್ಟಾರ್ ಗಳ ನಡುವಿನ ಸ್ಪರ್ಧೆಯನ್ನಾಗಿ ಪರಿವರ್ತಿಸುವುದರ ಬಗ್ಗೆಯಲ್ಲ. ಚಿತ್ರರಂಗದ ಅತಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬ ಟೀಕೆಗಳನ್ನು ತಳ್ಳಿಹಾಕಿದ ಶಿವಣ್ಣ, ಜನರೇ ಮತ್ತು ತಾವು ಸೇರಿದ ಚಿತ್ರರಂಗವೇ ತಮ್ಮ ಆದ್ಯತೆ ಎಂದು ಹೇಳಿದರು.

ಶಿವಣ್ಣ ಎಲ್ಲ ಕಾರ್ಯಕ್ರಮಗಳಿಗೂ ಬರುತ್ತಾರೆ ಎಂದು ಕೆಲವರು ಟ್ರೋಲ್ ಮಾಡುತ್ತಾರೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಚಿತ್ರರಂಗ ಮತ್ತು ನಮ್ಮ ಜನ ನನಗೆ ಮುಖ್ಯ. ಯಶ್ ನಮಗೆ ತೋರಿದ ಗೌರವಕ್ಕೆ ಪ್ರತಿಯಾಗಿ ನಾವೂ ಅಷ್ಟೇ ಗೌರವವನ್ನು ನೀಡಬೇಕು. ಅದು ಬೇಸಿಕ್ ಮಾನವೀಯತೆ ಎಂದು ಅವರು ನುಡಿದರು.

ಕನ್ನಡ ಚಿತ್ರರಂಗದ ಭವಿಷ್ಯದ ವಿಷಯಕ್ಕೆ ಬಂದಾಗ, ಕೇವಲ ಪ್ರಸಿದ್ಧ ಸ್ಟಾರ್ ಗಳ ಸುತ್ತಲೇ ಚರ್ಚೆ ಸೀಮಿತವಾಗಬಾರದು ಎಂದರು. ಹೊಸಬರ ಚಿತ್ರಗಳನ್ನೂ ವೀಕ್ಷಿಸುವಂತೆ ಪ್ರೇಕ್ಷಕರಿಗೆ ಕರೆ ನೀಡಿದ ಅವರು, ಇತ್ತೀಚೆಗೆ ತಮ್ಮ ಗಮನ ಸೆಳೆದ 'ಎ ಡೇಟ್' (A Date) ಚಿತ್ರದ ಪೋಸ್ಟರ್ ಅನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದರು. ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಹೊಸ ಚಿತ್ರಗಳನ್ನು ಬೆಂಬಲಿಸಿದಾಗ ಮಾತ್ರ ಹೊಸ ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಮುಂದೆ ಬರಲು ಸಾಧ್ಯ ಎಂದರು.

ಶಿವಣ್ಣನವರ ದೃಷ್ಟಿಯಲ್ಲಿ, ಕನ್ನಡ ಚಿತ್ರರಂಗದ ಯಶಸ್ಸು ಯಾವುದೇ ಒಬ್ಬ ನಿರ್ದಿಷ್ಟ ಸ್ಟಾರ್ ನ ಯಶಸ್ಸಿಗಿಂತ ದೊಡ್ಡದು. "ಚಿತ್ರರಂಗವನ್ನು ಯಾರು ಬೆಳೆಸುತ್ತಾರೆ ಎಂಬುದು ಮುಖ್ಯವಲ್ಲ; ಚಿತ್ರರಂಗ ಬೆಳೆಯುತ್ತದೆ ಎಂಬುದು ಮುಖ್ಯ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ

ನನ್ನ ನಿರಾಯುಧ ಪತಿ ಕೊಂದ ನೀನು ಗಲ್ಲು ಶಿಕ್ಷೆಗೆ ಯೋಗ್ಯ: ವಿಧವೆಯರ ಬಗ್ಗೆ ನಿನಗೇನು ಗೊತ್ತು? ಸಂತ್ರಸ್ತನ ಸೋಗು ಹಾಕಬೇಡ; ನಿರ್ಮಲಾ ಖನ್ನಾ ಆಕ್ರೋಶ

ನಿರಂಜನ್ 'ಕನ್ನಡದ ಹೃತಿಕ್ ರೋಷನ್'ಎಂದ ಡಾರ್ಲಿಂಗ್ ಕೃಷ್ಣ!

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!