ಅಭಿಶನ್ ಜೀವಿಂತ್ ಜೊತೆ ಶಿವರಾಜ್‌ಕುಮಾರ್ - ಪಿಕಾಸೊ ಫಸ್ಟ್ ಲುಕ್ 
ಸಿನಿಮಾ ಸುದ್ದಿ

ಶಿವರಾಜಕುಮಾರ್- ತಮಿಳಿನ ಅಭಿಶನ್ ಜೀವಿಂತ್ ನಟನೆಯ ಚಿತ್ರಕ್ಕೆ 'ಪಿಕಾಸೊ' ಎಂದು ಹೆಸರಿಟ್ಟ ಚಿತ್ರತಂಡ: ಫಸ್ಟ್ ಲುಕ್ ರೀಲೀಸ್!

ನಟ ಶಿವರಾಜಕುಮಾರ್ ಕೊನೆಯದಾಗಿ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ರಜನಿಕಾಂತ್ ನಟನೆಯ ಜೈಲರ್ 2 ಚಿತ್ರದಲ್ಲಿಯೂ ನಟಿಸಿದ್ದಾರೆ.

ನಟ ಶಿವರಾಜ್‌ಕುಮಾರ್ ಮತ್ತು ತಮಿಳಿನ ಅಭಿಶನ್ ಜೀವಿಂತ್ ಅವರ ಮುಂಬರುವ ಚಿತ್ರಕ್ಕೆ 'ಪಿಕಾಸೊ' ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. ಮುಂಬರುವ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸಿದ್ದು, ಇದು ಅವರಿಗೆ ಚೊಚ್ಚಲ ಚಿತ್ರ. ನಟ-ನಿರ್ಮಾಪಕ ರಿಷಬ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

'ಟೂರಿಸ್ಟ್ ಫ್ಯಾಮಿಲಿ' (2025) ನಂತರ 'ಪಿಕಾಸೊ' ಚಿತ್ರದ ಮೂಲಕ ಅಭಿಶನ್ ಮತ್ತು ಯೋಗಲಕ್ಷ್ಮಿ ಮತ್ತೆ ಒಂದಾಗುತ್ತಿದ್ದಾರೆ. ಟೂರಿಸ್ಟ್ ಫ್ಯಾಮಿಲಿ ಚಿತ್ರಕ್ಕೆ ಅಭಿಶನ್ ಆ್ಯಕ್ಷಟ್ ಕಟ್ ಹೇಳಿದ್ದರು. ಅಭಿಶನ್ ಈ ವರ್ಷದ 'ವಿತ್ ಲವ್' ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದರು. 'ಲಿಟಲ್ ಹಾರ್ಟ್ಸ್' ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾದ ಶಿವಾನಿ ನಗರಂ ಮತ್ತು ಗಾನ ವಿನೋದ್ ಕೂಡ ಪಿಕಾಸೊದಲ್ಲಿ ನಟಿಸಿದ್ದಾರೆ.

ನಟ ಶಿವರಾಜಕುಮಾರ್ ಕೊನೆಯದಾಗಿ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ರಜನಿಕಾಂತ್ ನಟನೆಯ ಜೈಲರ್ 2 ಚಿತ್ರದಲ್ಲಿಯೂ ನಟಿಸಿದ್ದಾರೆ. ನಟಿ ಯೋಗಲಕ್ಷ್ಮಿ, ಈ ಮಧ್ಯೆ, ವೆಟ್ರಿ ಮಾರನ್-ಸಿಲಂಬರಸನ್ ಟಿಆರ್ ಅವರ ಅರಸನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಡ್ರಾಮಾ ಕಂಪನಿ ಬ್ಯಾನರ್ ಅಡಿಯಲ್ಲಿ ಎ ಬಾಲಮುರುಗನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಪ್ರಗದೀಶ್ ಪ್ರಭು ಎಸ್, ಸಂಗೀತ ಸಂಯೋಜಕ ಲಿಯಾನ್ ಜೇಮ್ಸ್, ಸಂಪಾದಕ ಸುರೇಶ್‌ಕುಮಾರ್ ಕೆ ಮತ್ತು ಕಲಾ ನಿರ್ದೇಶಕ ವಿಜು ವಿಜಯನ್ ಅವರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್‌ ನೋವು ಹಂಚಿಕೊಂಡ ʻಪ್ರೇಮಕಾವ್ಯʼ ನಟಿ ವೈಷ್ಣವಿ!

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಸಿಎಂ ಜೋಸೆಫ್ ವಿಜಯ್ ಆರೋಪಕ್ಕೆ DMK ಆಕ್ರೋಶ, ಸದನದಿಂದ ಶಾಸಕರು ಹೊರಕ್ಕೆ..!

ಇಂಡೋನೇಷ್ಯಾದಲ್ಲಿ ಮತ್ತೆ ಸ್ಫೋಟಿಸಿದ Anak Krakatau ಜ್ವಾಲಾಮುಖಿ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ, ವಿಮಾನ ಸಂಚಾರ ಬಂದ್! Video

ಯಶವಂತಪುರ APMCಗೆ ಸಿಎಂ ದಿಢೀರ್ ಭೇಟಿ: ರೈತರ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, Video