ಟೀಂ ಇಂಡಿಯಾ ನಾಯಕ ಧೋನಿ ಜೊತೆ ಫೊಟೋ ತೆಗೆಸಿಕೊಂಡ ವಿಂಡೀಸ್ ಆಟಗಾರ ಬ್ರಾವೋ (ಚಿತ್ರಕೃಪೆ: ಟ್ವಿಟರ್) 
ಕ್ರಿಕೆಟ್

"ವಿನ್, ಲಾಸ್ ಆರ್ ಡ್ರಾ, ಆಲ್ವೇಸ್ ಮಚ್ಚಾ" ಎಂದ ಡ್ವೇನ್ ಬ್ರಾವೋ

ಭಾರತ-ವಿಂಡೀಸ್ ತಂಡಗಳ ಈ ಕಾಳಗ ಕೇವಲ ಮೈದಾನದಲ್ಲಿ ಮಾತ್ರ. ಮೈದಾನದ ಹೊರಗೆ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ಆಟಗಾರರು ಆಪ್ತ ಸ್ನೇಹಿತರು..

ಮುಂಬೈ: ಐಸಿಸಿ ಟಿ20 ವಿಶ್ವಕಪ್ ನ 2ನೇ ಸೆಮಿಫೈನಲ್ ನಲ್ಲಿ ಭಾರತ ತಂಡದ ವಿರುದ್ಧ ವಿಂಡೀಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಗೇರಿತ್ತು. ಅದರೆ ಭಾರತ-ವಿಂಡೀಸ್ ತಂಡಗಳ ಈ ಕಾಳಗ ಕೇವಲ ಮೈದಾನದಲ್ಲಿ ಮಾತ್ರ. ಮೈದಾನದ ಹೊರಗೆ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ಆಟಗಾರರು ಆಪ್ತ ಸ್ನೇಹಿತರು.

ಇದಕ್ಕೆ ಪುಷ್ಠಿ ನೀಡುವಂತೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ನಿನ್ನೆ ಒಂದು ಭಾವ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕುವ ಮೂಲಕ ಇದೀಗ ಕ್ರೀಡಾ ಸ್ಫೋರ್ತಿ  ಮೆರೆದಿದ್ದಾರೆ. ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಇರುವ ಭಾವಚಿತ್ರವನ್ನು ಹಾಕಿರುವ ಬ್ರಾವೋ, "ವಿನ್, ಲಾಸ್ ಆರ್ ಡ್ರಾ ಆಲ್ವೇಸ್ ಮಚ್ಚಾ" (ಸೋಲು, ಗೆಲುವು  ಅಥವಾ ಡ್ರಾ ಏನೇ ಇರಲಿ ನಾವು ಸ್ನೇಹಿತರು) ಎಂದ ಬರೆಯುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

ಬ್ರಾವೋ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಕ್ರಿಕೆಟಿಗರೊಂದಿಗೆ ವಿಂಡೀಸ್ ಆಟಗಾರರ ಸ್ನೇಹ ಒಂದೊಂದೇ ಅನಾವರಣಗೊಳ್ಳುತ್ತಿದೆ.  ಇತ್ತೀಚೆಗಷ್ಟೇ ಐಸಿಸಿ ನಾಯಕ ಧೋನಿಯನ್ನು ವಿಂಡೀಸ್ ನಾಯಕ ಸಾಮಿ ಮೈದಾನದಲ್ಲಿ ಕಾಡಿದ ವಿಡಿಯೋ ಶೇರ್ ಮಾಡಿತ್ತು. ಈ ಚಿತ್ರಗಳು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ  ಸ್ನೇಹವನ್ನು ಜಗತ್ತಿಗೆ ಪ್ರದರ್ಶನ ಮಾಡುತ್ತಿವೆ.

ಒಂದು ಕಾಲದಲ್ಲಿ ಹಾವು ಮುಂಗುಸಿಯಂತಿದ್ದ ಕ್ರಿಕೆಟಿಗರು ಇದೀಗ ಮಾಮ-ಮಚ್ಚಾ ಎನ್ನುವಷ್ಟು ಹತ್ತಿರವಾಗಿದ್ದಾರೆ. ಇದಕ್ಕೆ ಕಾರಣ ಐಪಿಎಲ್. ಐಪಿಎಲ್ ಗಾಗಿ ದೇಶ-ವಿದೇಶಗಳಿಂದ ಬರುವ  ಆಟಗಾರರು ಭಾರತೀಯ ಕ್ರಿಕೆಟಿಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ಇಲ್ಲಿ ಕ್ರಿಕೆಟಿಗರ ನಡುವೆ ಸ್ನೇಹ-ಪ್ರೀತಿ ಸಾಮಾನ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT