ರಿಕ್ಕಿ ಪಾಂಟಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ) 
ಕ್ರಿಕೆಟ್

ಆಸಿಸ್ ದೈತ್ಯ ಪಾಟಿಂಗ್ ದಾಖಲೆ ಸರಿಗಟ್ಟಲಿರುವ ಮಾಹಿ!

ಭಾರತ ಕ್ರಿಕೆಟ್ ಕಂಡ ಅದೃಷ್ಟಶಾಲಿ ಮತ್ತು ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಮೂರು ಅಂತಾರಾಷ್ಟ್ರೀಯ ದಾಖಲೆಗಳನ್ನು ಸರಿಗಟ್ಟಲಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ಕಂಡ ಅದೃಷ್ಟಶಾಲಿ ಮತ್ತು ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ  ಶೀಘ್ರದಲ್ಲೇ ಮೂರು ಅಂತಾರಾಷ್ಟ್ರೀಯ ದಾಖಲೆಗಳನ್ನು ಸರಿಗಟ್ಟಲಿದ್ದಾರೆ.

ಮುಂಬರುವ ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಪಂದ್ಯದ ಸರಣಿಯಲ್ಲಿ ಮಹೇಂದ್ರ ಸಿಂಗ್ ಬರೋಬ್ಬರಿ ಮೂರು ದಾಖಲೆ ನಿರ್ವಿುಸಲಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ  ಪಾಂಟಿಂಗ್ ಹೆಸರಲ್ಲಿರುವ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆಯನ್ನು ಧೋನಿ ಮೀರಿ ನಿಲ್ಲಲಿದ್ದಾರೆ, ಪ್ರಸ್ತುತ ಧೋನಿ ಹಾಗೂ ರಿಕ್ಕಿ ಪಾಂಟಿಂಗ್ ಇಬ್ಬರೂ 324  ಪಂದ್ಯಗಳನ್ನು ಆಡಿದ್ದಾರೆ. ಆದರೆ ಪಾಂಟಿಂಗ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಧೋನಿ ಇನ್ನೊಂದು ಪಂದ್ಯದಲ್ಲಿ ಆಡಿದರೂ ಅವರ ದಾಖಲೆಯನ್ನು ಧೋನಿ  ಮುರಿಯುತ್ತಾರೆ. ಧೋನಿ ಹೆಸರಿಗೆ ನಾಯಕನಾಗಿ ಅಧಿಕ ಪಂದ್ಯವಾಡಿದ ದಾಖಲೆ ನಿರ್ಮಾಣವಾಗುತ್ತದೆ.

ಇದೇ ವೇಳೆ ಪಾಂಟಿಂಗ್ ಆಸಿಸ್ ತಂಡದ ನಾಯಕರಾಗಿ 165 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದು, ಧೋನಿ 107 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇದೇ ಅಕ್ಟೋಬರ್​ನಲ್ಲಿ  ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಧೋನಿ ಪಾಟಿಂಗ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಆಗ ಧೋನಿ ಪಟ್ಟಿಯಲ್ಲಿ ಎರಡನೇ  ಸ್ಥಾನಕ್ಕೆ ಏರಲಿದ್ದು, ಅಲನ್ ಬಾರ್ಡರ್ ರೊಂದಿಗೆ ಸ್ಥಾನ ಹಂಚಿಕೊಳ್ಳಲ್ಲಿದ್ದಾರೆ.

ಧೋನಿ ಪಾಲಿಗೆ ಮೂರನೇ ದಾಖಲೆಯಾಗಿ ಸಿಕ್ಸರ್ ಗಳಿದ್ದು, ಆಸಿಸ್ ತಂಡದ ನಾಯಕನಾಗಿ ರಿಕಿ ಪಾಂಟಿಂಗ್ 123 ಸಿಕ್ಸ್ ಸಿಡಿಸಿದ್ದಾರೆ. ಧೋನಿ ಈಗಾಗಲೇ 121 ಸಿಕ್ಸ್ ಸಿಡಿಸಿದ್ದು, ಪಾಂಟಿಂಗ್  ಅವರ ಈ ದಾಖಲೆಯನ್ನು ಮುರಿಯಲು ಧೋನಿಗೆ ಇನ್ನು ಕೇವಲ ಮೂರು ಸಿಕ್ಸರ್ ಗಳ ಅಗತ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT