ಕೋಲ್ಕತಾ: ಭಾರಿ ಮಳೆಯಿಂದಾಗಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಇಂದು ಸಂಜೆ 7.30ಕ್ಕೆ ಆರಂಭವಾಗಬೇಕಿದ್ದ ಭಾರತ-ಪಾಕಿಸ್ತಾನ ಹೈ ವೋಲ್ಟೋಜ್ ಪಂದ್ಯ ವಿಳಂಭವಾಗಿ ಆರಂಭವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂದು ಸಂಜೆ ಕೋಲ್ಕತಾದಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಪಂದ್ಯವನ್ನು 18 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಅಭಿಮಾನಿಗಳು ಯುದ್ಧದ ಮಹತ್ವ ಕೊಡುತ್ತಾರೆ. ಆ ನಿಟ್ಟಿನಲ್ಲಿ ಇದು ಹೈವೋಲ್ಟೇಜ್ ಪಂದ್ಯವಾಗಿದೆ.
ಪಂದ್ಯ ಆರಂಭಕ್ಕೂ ಮುನ್ನ ಭಾರತ-ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಶುಭಾಶಯ ಕೋರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಸೆವ್ಹಾಗ್, ಅಮಿತಾಬ್ ಬಚ್ಚನ್, ವಾಸಿಂ ಅಕ್ರಮ್ ವಾಕರ್ ಯೂನಿಸ್, ಇಮ್ರಾನ್ ಖಾನ್ ಸೇರಿದಂತೆ ಹಲವು ಭಾರತ-ಪಾಕ್ ಕ್ರಿಕೆಟ್ ಲೆಜೆಂಡ್ ಳನ್ನು ಸನ್ಮಾನಿಸಲಾಯಿತು.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ(ನಾಯಕ/ವಿ.ಕೀ.), ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಬೂಮ್ರಾ, ನೆಹ್ರಾ.
ಪಾಕಿಸ್ತಾನ ತಂಡ: ಶರ್ಜಿಲ್ ಖಾನ್, ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಉಮರ್ ಅಕ್ಮಲ್, ಶೊಯಬ್ ಮಲಿಕ್, ಶಾಹಿದ್ ಅಫ್ರಿದಿ(ನಾಯಕ), ಸರ್ಫ್ರಾಜ್ ಅಹ್ಮದ್(ವಿ.ಕೀ), ಇಮಾದ್ ವಾಸಿಂ, ವಹಾಬ್ ರಿಯಾಜ್, ಮೊಹಮದ್ ಆಮಿರ್, ಮೊಹಮದ್ ಇರ್ಫಾನ್.