ಮಹೇಂದ್ರ ಸಿಂಗ್ ಧೋನಿ, ಪತ್ನಿ ಸಾಕ್ಷಿ ಮತ್ತು ಪುತ್ರಿ ಝೀವಾ (ಸಂಗ್ರಹ ಚಿತ್ರ) 
ಕ್ರಿಕೆಟ್

ಟೀಂ ಇಂಡಿಯಾ ಗೆಲುವು: ಗಾಬರಿಯಾದ ಧೋನಿ ಪತ್ನಿ ಸಾಕ್ಷಿ..!

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೊಳಗಿತ್ತು. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾತ್ರ ನಿಜಕ್ಕೂ ಗಾಬರಿ ಬಿದ್ದಿದ್ದರು.

ರಾಂಚಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೊಳಗಿತ್ತು. ಆದರೆ ಟೀಂ ಇಂಡಿಯಾ  ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾತ್ರ ನಿಜಕ್ಕೂ ಗಾಬರಿ ಬಿದ್ದಿದ್ದರು.

ಅರೆ ಟೀಂ ಇಂಡಿಯಾ ಗೆದ್ದರೆ ಸಂತೋಷಪಡಬೇಕಿದ್ದ ಸಾಕ್ಷಿ ಏಕೆ ಗಾಬರಿಯಾದರು ಆ ಎಂದು ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಅವರ  ಪುತ್ರಿಯಂತೆ. ಟೀಂ ಇಂಡಿಯಾ ಅತ್ತ ಕೋಲ್ಕತಾದಲ್ಲಿ ಪಾಕಿಸ್ತಾನದ ಬೇಟೆಯಲ್ಲಿ ತಲ್ಲೀನವಾಗಿದ್ದರೆ, ಇತ್ತ ಧೋನಿ ಪುತ್ರಿ ಝೀವಾ ಧೋನಿ ಆಗತಾನೆ ನಿದ್ರೆಗೆ ಜಾರಿದ್ದಳಂತೆ. ಇನ್ನು ಅತ್ತ ಭಾರತ  ತಂಡ ಗೆಲುವಿನ ಸನಿಹ ಸಾಗುತ್ತಿದ್ದಂತೆಯೇ ಇತ್ತ ಮಹೇಂದ್ರ ಸಿಂಗ್ ಧೋನಿ ಅವರ ರಾಂಚಿ ನಿವಾಸದ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಸಂಭ್ರಮಾಚರಣೆ  ಮಾಡುತ್ತಿದ್ದರಂತೆ. ಇದೇ ಧೋನಿ ಪತ್ನಿ ಸಾಕ್ಷಿ ಅವರು ಗಾಬರಿಗೆ ಕಾರಣವಂತೆ.

ಪಟಾಕಿ ಮತ್ತು ಘೋಷಣೆಗೆ ಬೆಚ್ಚಿ ಬಿದ್ದ ಸಾಕ್ಷಿ
ಇನ್ನು ಅತ್ತ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ದಾಖಲಿಸುತ್ತಿದ್ದಂತೆಯೇ ರಾಂಚಿಯಲ್ಲಿರುವ ಧೋನಿ ಮನೆ ಬಳಿ ಅಭಿಮಾನಿಗಳು ಪಟಾಕಿ  ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇನ್ನು ಧೋನಿ ಮನೆ ಒಳಗೆ ಮಲಗಿದ್ದ ಧೋನಿ ಪುತ್ರಿ ಝೀವಾ ಎಲ್ಲಿ ಗಾಬರಿಯಾಗುತ್ತಾಳೋ ಎಂಬ ಭಯದಿಂದ ಸಾಕ್ಷಿ ಅಭಿಮಾನಿಗಳಲ್ಲಿ ಪಟಾಕಿ  ಸಿಡಿಸದಂತೆ ಮನವಿ ಮಾಡಿದ್ದರಂತೆ. ಆದರೆ ಸಾಕ್ಷಿ ಮಾತನ್ನು ಅಲಕ್ಷಿಸಿದ ಅಭಿಮಾನಿಗಳು ತಮ್ಮ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದರಂತೆ.

ಒಟ್ಟಾರೆ ಟೀಂ ಇಂಡಿಯಾ ಗೆಲುವು ಇಡೀ ದೇಶಕ್ಕೆ ಖುಷಿ ನೀಡಿದ್ದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿಗೆ ಗಾಬರಿ ತರಿಸಿದ್ದಂತೂ ಸತ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT