ಮಹೇಂದ್ರ ಸಿಂಗ್ ಧೋನಿ, ಪತ್ನಿ ಸಾಕ್ಷಿ ಮತ್ತು ಪುತ್ರಿ ಝೀವಾ (ಸಂಗ್ರಹ ಚಿತ್ರ) 
ಕ್ರಿಕೆಟ್

ಟೀಂ ಇಂಡಿಯಾ ಗೆಲುವು: ಗಾಬರಿಯಾದ ಧೋನಿ ಪತ್ನಿ ಸಾಕ್ಷಿ..!

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೊಳಗಿತ್ತು. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾತ್ರ ನಿಜಕ್ಕೂ ಗಾಬರಿ ಬಿದ್ದಿದ್ದರು.

ರಾಂಚಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೊಳಗಿತ್ತು. ಆದರೆ ಟೀಂ ಇಂಡಿಯಾ  ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾತ್ರ ನಿಜಕ್ಕೂ ಗಾಬರಿ ಬಿದ್ದಿದ್ದರು.

ಅರೆ ಟೀಂ ಇಂಡಿಯಾ ಗೆದ್ದರೆ ಸಂತೋಷಪಡಬೇಕಿದ್ದ ಸಾಕ್ಷಿ ಏಕೆ ಗಾಬರಿಯಾದರು ಆ ಎಂದು ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಅವರ  ಪುತ್ರಿಯಂತೆ. ಟೀಂ ಇಂಡಿಯಾ ಅತ್ತ ಕೋಲ್ಕತಾದಲ್ಲಿ ಪಾಕಿಸ್ತಾನದ ಬೇಟೆಯಲ್ಲಿ ತಲ್ಲೀನವಾಗಿದ್ದರೆ, ಇತ್ತ ಧೋನಿ ಪುತ್ರಿ ಝೀವಾ ಧೋನಿ ಆಗತಾನೆ ನಿದ್ರೆಗೆ ಜಾರಿದ್ದಳಂತೆ. ಇನ್ನು ಅತ್ತ ಭಾರತ  ತಂಡ ಗೆಲುವಿನ ಸನಿಹ ಸಾಗುತ್ತಿದ್ದಂತೆಯೇ ಇತ್ತ ಮಹೇಂದ್ರ ಸಿಂಗ್ ಧೋನಿ ಅವರ ರಾಂಚಿ ನಿವಾಸದ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಸಂಭ್ರಮಾಚರಣೆ  ಮಾಡುತ್ತಿದ್ದರಂತೆ. ಇದೇ ಧೋನಿ ಪತ್ನಿ ಸಾಕ್ಷಿ ಅವರು ಗಾಬರಿಗೆ ಕಾರಣವಂತೆ.

ಪಟಾಕಿ ಮತ್ತು ಘೋಷಣೆಗೆ ಬೆಚ್ಚಿ ಬಿದ್ದ ಸಾಕ್ಷಿ
ಇನ್ನು ಅತ್ತ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ದಾಖಲಿಸುತ್ತಿದ್ದಂತೆಯೇ ರಾಂಚಿಯಲ್ಲಿರುವ ಧೋನಿ ಮನೆ ಬಳಿ ಅಭಿಮಾನಿಗಳು ಪಟಾಕಿ  ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇನ್ನು ಧೋನಿ ಮನೆ ಒಳಗೆ ಮಲಗಿದ್ದ ಧೋನಿ ಪುತ್ರಿ ಝೀವಾ ಎಲ್ಲಿ ಗಾಬರಿಯಾಗುತ್ತಾಳೋ ಎಂಬ ಭಯದಿಂದ ಸಾಕ್ಷಿ ಅಭಿಮಾನಿಗಳಲ್ಲಿ ಪಟಾಕಿ  ಸಿಡಿಸದಂತೆ ಮನವಿ ಮಾಡಿದ್ದರಂತೆ. ಆದರೆ ಸಾಕ್ಷಿ ಮಾತನ್ನು ಅಲಕ್ಷಿಸಿದ ಅಭಿಮಾನಿಗಳು ತಮ್ಮ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದರಂತೆ.

ಒಟ್ಟಾರೆ ಟೀಂ ಇಂಡಿಯಾ ಗೆಲುವು ಇಡೀ ದೇಶಕ್ಕೆ ಖುಷಿ ನೀಡಿದ್ದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿಗೆ ಗಾಬರಿ ತರಿಸಿದ್ದಂತೂ ಸತ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT