ಭಾರತ, ಬಾಂಗ್ಲಾದೇಶ 
ಕ್ರಿಕೆಟ್

ಭಾರತ-ಬಾಂಗ್ಲಾ ಪಂದ್ಯ ಫಿಕ್ಸಿಂಗ್: ತನಿಖೆಗೆ ಪಾಕ್ ಮಾಜಿ ಸ್ಪಿನ್ನರ್ ಒತ್ತಾಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ 1 ರನ್ ಗಳಿಂದ ರೋಚಕ ಗೆಲುವು..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ 1 ರನ್ ಗಳಿಂದ ರೋಚಕ ಗೆಲುವು ದಾಖಲಿಸಿದ ಬೆನ್ನಲ್ಲಿಯೇ ಇದೀಗ ಪಾಕಿಸ್ತಾನ ಮಾಜಿ ಸ್ಪಿನ್ನರ್ ತೌಸಿಫ್ ಅಹ್ಮದ್ ಪಂದ್ಯ ಫಿಕ್ಸಿಂಗ್‌ ಆಗಿರುವ ಸಾಧ್ಯತೆ ದಟ್ಟವಾಗಿದ್ದು, ಪಂದ್ಯದ ತನಿಖೆ ನಡೆಸುವಂತೆ ಐಸಿಸಿಗೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶ ಗೆಲ್ಲಲು ಕೊನೆಯ ಓವರ್ ನ 3 ಎಸೆತಗಳಿಗೆ 2 ರನ್ ಮಾತ್ರ ಬೇಕಿತ್ತು. ಆ ವೇಳೆ ಕ್ರೀಸ್ ನಲ್ಲಿದ್ದದ್ದು. ಅನುಭವಿ ಆಟಗಾರರು ಹೀಗಿದ್ದರೂ ಪಂದ್ಯದಲ್ಲಿ ಟೈ ಮಾಡಿಕೊಳ್ಳುವುದನ್ನು ಬಿಟ್ಟು ದೊಡ್ಡ ಹೊಡೆತಗಳಿಗೆ ಮುಂದಾಗಿದ್ದೇಕೆ? ಇದನ್ನು ಗಮನಿಸಿದರೆ ಪಂದ್ಯ ಫಿಕ್ಸಿಂಗ್ ಆಗಿರುವಂತ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ.

ಭಾರತ ಬಾಂಗ್ಲಾ ನಡುವಣ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವುದು ಖಚಿತ ಎಂದಿರುವ ತೌಸಿಫ್‌ ಅಹ್ಮದ್‌, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ಎಂಎಸ್ ಧೋನಿ ಅವರು ಕೊನೆಯ ಎಸೆತದಲ್ಲಿ ಬಾಂಗ್ಲಾ ತಂಡಕ್ಕೆ ಗೆಲ್ಲಲು 2 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯಾನಿಗೆ ಯಾವುದೇ ಕಾರಣಕ್ಕೂ ಯಾರ್ಕರ್ ಹಾಕಬೇಡ, ಬದಲಿಗೆ ಬೌನ್ಸ್ ಬಾಲ್ ಮಾಡು ಎಂದು ಹೇಳಿ ಬ್ಯಾಟ್ಸ್ ಮನ್ ಎಸೆತವನ್ನು ಮುಟ್ಟಲು ಸಾಧ್ಯವಾಗದೆ, ಕೀಪರ್ ನಾಯಕ ಧೋನಿ ಕೈಸೇರಿದಾಗ ರನ್ ಪಡೆಯಲು ಮುಂದಾದಾಗ ಧೋನಿ ವೇಗವಾಗಿ ಬಂದು ವಿಕೆಟ್ ಗೆ ಮುಟ್ಟಿ ಔಟ್ ಮಾಡಿದರು. ಇದರಿಂದಾಗಿ ಭಾರತ ತಂಡ 1 ರನ್ ಗಳಿಂದ ಅಮೋಘ ಜಯ ಸಾಧಿಸುವಂತಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT