ಮಾರಕ ಬೌನ್ಸರ್ ಮತ್ತು ಜಾರ್ಜ್ ಬೈಲಿ (ಟ್ವಿಟರ್ ಚಿತ್ರ) 
ಕ್ರಿಕೆಟ್

ಕಾಲ್ಟರ್ ನೈಲ್ ಮಾರಕ ಬೌನ್ಸರ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜಾರ್ಜ್ ಬೈಲಿ

ಬೌಲರ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಎಂಬ ಪ್ರತಿಭಾವಂತ ಆಟಗಾರನ ಪ್ರಾಣಕ್ಕೆ ಎರವಾದ ಘಟನೆ ಇನ್ನೂ ಹಸಿರಾಗಿರುವಂತೆಯೇ ಅಂತಹ ಸಾಕಷ್ಟು ಪ್ರಕರಣಗಳು ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ.

ನವದೆಹಲಿ: ಬೌಲರ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಎಂಬ ಪ್ರತಿಭಾವಂತ ಆಟಗಾರನ ಪ್ರಾಣಕ್ಕೆ ಎರವಾದ ಘಟನೆ ಇನ್ನೂ ಹಸಿರಾಗಿರುವಂತೆಯೇ ಅಂತಹ ಸಾಕಷ್ಟು ಪ್ರಕರಣಗಳು  ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ.

ನಿನ್ನೆ ವಿಶಾಖಪಟ್ಟಣಂನಲ್ಲಿ ದೆಹಲಿ ಡೇರ್ ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ದೆಹಲಿ ತಂಡದ ಕಾಲ್ಟರ್ ನೈಲ್ ಎಸೆದ ಬೌನ್ಸರ್ ಒಂದು ಬ್ಯಾಟಿಂಗ್  ಮಾಡುತ್ತಿದ್ದ ಜಾರ್ಜ್ ಬೈಲಿ ತಲೆಗೆ ಬಲವಾಗಿ ತಾಗಿದೆ. ಅದೃಷ್ಟವಶಾತ್ ಜಾರ್ಜ್ ಬೈಲಿ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ಅವರಿಗೆ ಹೆಚ್ಚೇನು ತೊಂದರೆಯಾಗಲಿಲ್ಲ. ಕಾಲ್ಟರ್ ನೈಲ್ ಎಸೆದ  ಮಾರಕ ಬೌನ್ಸರ್ ಜಾರ್ಜ್ ಬೈಲಿ ಅವರ ಹೆಲ್ಮೆಟ್ ಅನ್ನೇ ತಲೆಯಿಂದ ಹಾರಿಸಿದೆ.

ಕಾಲ್ಟನ್ ನೈಲ್ ಎಸೆದ ಬೌನ್ಸರ್ ಅನ್ನು ಜಾರ್ಜ್ ಬೈಲಿ ಕಟ್ ಮಾಡಲು ಹೋದರು. ಆದರೆ ಬಾಲ್ ಅವರ ಗ್ಲೌಸ್ ಗೆ ತಾಗಿ ಬಳಿಕೆ ಅವರ ಹೆಲ್ಮೆಟ್ ತುದಿಗೆ ಬಲವಾಗಿ ಬಿದ್ದಿದೆ. ಇದರಿಂದ ಬೈಲಿ  ತಲೆಯಲ್ಲಿದ್ದ ಹೆಲ್ಮೆಟ್ ಕೂಡಲೇ ಕೆಳಗೆ ಬಿದ್ದಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿದ್ದ ಎಲ್ಲ ಆಟಗಾರರೂ ಅವಾಕ್ಕಾದರು. ಕೂಡಲೇ ಬೈಲಿ ಹತ್ತಿರಕ್ಕೆ ಬಂದು  ಅವರಿಗೇನಾಯಿತು ಎಂದು ನೋಡಿದರು.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಒಂದು ವೇಲೆ ಹೆಲ್ಮೆಟ್ ಇಲ್ಲದೇ ಹೋಗಿದ್ದರೆ ಜಾರ್ಜ್ ಬೈಲಿ ಅವರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಕೂಡ  ಕಷ್ಟವಾಗುತ್ತಿತ್ತೇನೋ. ಪಂದ್ಯದ ಬಳಿಕ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಜಾರ್ಜ್ ಬೈಲಿ ಅದೃಷ್ಟವಶಾತ್ ನಾನು ಹೊಸ ಹೆಲ್ಮೆಟ್ ಧರಿಸಿದ್ದೆ ಎಂದು ಚಟಾಕಿ  ಹಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!