ಪ್ರಭೀರ್ ಮುಖರ್ಜಿ 
ಕ್ರಿಕೆಟ್

ಈಡನ್ ಗಾರ್ಡನ್ಸ್‌ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ ನಿಧನ

ಈಡನ್‌ ಗಾರ್ಡನ್ಸ್‌ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ (86) ಜೂ.1 ರಂದು ಕೋಲ್ಕತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕೋಲ್ಕತಾ: ಈಡನ್‌ ಗಾರ್ಡನ್ಸ್‌ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ (86) ಜೂ.1 ರಂದು ಕೋಲ್ಕತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೂಲತಃ ವೇಗದ ಬೌಲರ್ ಹಾಗೂ ಫುಟ್ ಬಾಲ್ ಗೋಲ್ ಕೀಪರ್ ಆಗಿದ್ದ ಪ್ರಭೀರ್ ಮುಖರ್ಜಿ ಅಪಘಾತಕ್ಕೀಡಾದ ಪರಿಣಾಮ ಸಕ್ರಿಯ ಕ್ರಿಕೆಟ್ ನಿಂದ ದೂರವಾಗಬೇಕಾಯಿತು. ಅಪಘಾತವಾದ ನಾಲ್ಕು ವರ್ಷಗಳ ನಂತರ ಅಂದರೆ 1951 -52 ರಿಂದ ಕ್ರಿಕೆಟ್ ಆಡಳಿತ ಹಾಗೂ ಪಿಚ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಭೀರ್ ಮುಖರ್ಜಿ 2015 ರ ಅಕ್ಟೋಬರ್ ನ ಲ್ಲಿ ನಡೆದ ಐಪಿಎಲ್ ವಿಶ್ವಕಪ್ ವರೆಗೂ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
1964 ರಲ್ಲಿ ಬಂಗಾಳ ರಾಷ್ಟ್ರೀಯ  ರೈಲ್ವೆ ಕ್ಲಬ್ ನ ಕಾರ್ಯದರ್ಶಿಯಾದ ನಂತರ ಪ್ರಭೀರ್ ಮುಖರ್ಜಿ ಈಡನ್ ಗಾರ್ಡನ್ಸ್ ನಲ್ಲಿ ಪ್ರಥಮ ಬಾರಿಗೆ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ 1979 -80 ರಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಗೆ ಸೇರಿದ ಬಳಿಕ ಬಂಗಾಳ ಹಾಗೂ ಈಸ್ಟ್ ಜೋನ್ ತಂಡಗಳನ್ನು ನಿರ್ವಹಿಸಿದ್ದರು.  
1984 ರಲ್ಲಿ ವಿಶ್ವಕಪ್ ಫೈನಲ್ಸ್ ನಲ್ಲಿಯೂ ಸಹ ಪ್ರಭೀರ್ ಮುಖರ್ಜಿ ಪಿಚ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪ್ರಭೀರ್ ಮುಖರ್ಜಿ ತಮ್ಮ ಸಿದ್ಧಾಂತಗಳಿಂದಲೇ ಗುರುತಿಸಿಕೊಂಡಿದ್ದರು.  2012 ರಲ್ಲಿ ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಪಿಚ್ ತಯಾರಿಕೆ ವೇಳೆ ಸ್ವೇರ್ ಟರ್ನರ್ ಗಾಗಿ ಭಾರತ ತಂಡದ ನಾಯಕ ಧೋನಿ ಮುಂದಿಟ್ಟ ಬೇಡಿಕೆಯನ್ನು ಸ್ಪಟವಾಗಿ ನಿರಾಕರಿಸಿದ್ದರು. 1998 ರಲ್ಲಿ ಢಾಕಾದಲ್ಲಿ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲೂ ಪಿಚ್ ಮೇಲ್ವಿಚಾರಣೆ ನಡೆಸಿದ್ದ ಪ್ರಭೀರ್ ಮುಖರ್ಜಿ, ಕೊನೆಯದಾಗಿ 2015 ರ ಅಕ್ಟೋಬರ್ ನ ಲ್ಲಿ ನಡೆದ ಐಪಿಎಲ್ ವಿಶ್ವಕಪ್ ಪಂದ್ಯದಲ್ಲಿ ಕ್ಯುರೆಟರ್ ಆಗಿ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT