ಶಿಖರ್ ಧವನ್ 
ಕ್ರಿಕೆಟ್

ನನ್ನ ವೈಫಲ್ಯಗಳು ನನಗೆ ಪಾಠವಾಗಿದೆ: ಶಿಖರ್ ಧವನ್

ಶಿಖರ್ ಧವನ್ ತಮ್ಮಿಂದಾದ ಸಾಧನೆಗಳಿಂದ ಸಂತಸಗೊಂಡಿದ್ದಾರೆ. ಆದರೆ ಆರಂಭಿಕ ಆಟಗಾರನಾಗಿರುವ ಇವರು ತಂಡದಿಂದ ಹೊರಗುಳಿದ ಸಮಯವನ್ನು ಮರೆಯಲಿಲ್ಲ,

ಡಂಬುಲಾ: ಶಿಖರ್ ಧವನ್ ತಮ್ಮಿಂದಾದ ಸಾಧನೆಗಳಿಂದ ಸಂತಸಗೊಂಡಿದ್ದಾರೆ. ಆದರೆ ಆರಂಭಿಕ ಆಟಗಾರನಾಗಿರುವ ಇವರು ತಂಡದಿಂದ ಹೊರಗುಳಿದ ಸಮಯವನ್ನು ಮರೆಯಲಿಲ್ಲ, ವಿಫಲತೆಗಳು ಅವರಿಗೆ ಪಾಠಗಳನ್ನು ಕಲಿಸಿವೆ..
ಕಳೆದ ವರ್ಷದ ನ್ಯೂಜಿಲೆಂಡ್‌ ಪ್ರವಾಸದ ಬಳಿಕ ಧವನ್‌ ತಂಡದಿಂದ ಹೊರ ಉಳಿದಿದ್ದರು. ನಂತರ ಈ ವರ್ಷ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ವೇಳೆ ತಂಡಕ್ಕೆ ಮರಳಿದರು. ಅಲ್ಲಿಂದೀಚಿನ ಎಲ್ಲಾ ಪಂದ್ಯಗಳಲ್ಲಿಯೂ ಾವರು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
‘ನಮ್ಮ ವೈಫಲ್ಯಗಳು ನಮಗೆ ಪಾಠ ಕಲಿಸುತ್ತವೆ. ಇದರಿಂದ ನಾನು ಹೆಚ್ಚು ಕಲಿತಿದ್ದೇನೆ’ ಎನ್ನುವ ಶಿಖರ್ ಧವನ್  2019ರ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಬೇಕಾದರೆ ಇದೇ ಫಾರ್ಮ್ ಕಾಯ್ದುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ನನ್ನ ಸ್ಥಾನವನ್ನು ಯಾವುದೇ ಉತ್ತಮ ಆತಗಾರರು ತುಂಬುತ್ತಾರೆ. ವಿಶ್ವಕಪ್‌ ಗುರಿಯೊಂದಿಗೆ ಆಟದಲ್ಲಿ ಮತ್ತಷ್ಟು ಸುಧಾರಣೆ ಕಂಡುಕೊಳಳಬೇಕಿದೆ" ಎಂದು ಅವರು ತಿಳಿಸಿದರು.
ತಾನು ಅನುಭವಿಸಿದ ಕುಸಿತದ ಬಗ್ಗೆ ಮಾತನಾಡಿದ ಧವನ್, "ನಾನು ಈಗಾಗಲೇ ಕುಸಿತವನ್ನು ಕಂಡಿದ್ದೇನೆ ಹಾಗಾಗಿ ನಾನು ಅದರ ಬಗ್ಗೆ ಯೋಚಿಸುವುದಿಲ್ಲ ಅದು ಬಂದಾಗ ಬರಲಿ" ಎನ್ನುತ್ತಾರೆ.
ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಮತ್ತು ಕೊಹ್ಲಿ ಅವರ ಜತೆಯಾಟದ(197 ರನ್‌) ಬಲದಿಂದ ಭಾರತ ತಂಡ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಜಯ ದಾಖಲಿಸಿತ್ತು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT