ಸಚಿನ್ ತೆಂಡೂಲ್ಕರ್, ಮುಂಗುಸಿ 
ಕ್ರಿಕೆಟ್

1993ರ ಹೀರೋ ಕಪ್ ಗೆಲುವಿಗೆ ಮುಂಗುಸಿ ಕಾರಣ: ಸಚಿನ್ ತೆಂಡೂಲ್ಕರ್

1993ರ ಹೀರೋ ಕಪ್ ಗೆಲ್ಲಲ್ಲು ಪರೋಕ್ಷವಾಗಿ ಮುಂಗುಸಿ ಕಾರಣ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ...

ಕೋಲ್ಕತ್ತ: 1993ರ ಹೀರೋ ಕಪ್ ಗೆಲ್ಲಲ್ಲು ಪರೋಕ್ಷವಾಗಿ ಮುಂಗುಸಿ ಕಾರಣ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ. 
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹೀರೋ ಕಪ್ ನ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿತ್ತು. ಪಂದ್ಯದ ಕೊನೇ ಓವರ್ ನಲ್ಲಿ ಆಫ್ರಿಕಾಗೆ ಗೆಲ್ಲಲು 6 ರನ್ ಗಳಿಸಬೇಕಿತ್ತು. ಈ ವೇಳೆ ಬೌಲಿಂಗ್ ಮಾಡಿದ ಸಚಿನ್ ಯಾವುದೇ ರನ್ ನೀಡದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 
ದಕ್ಷಿಣ ಆಫ್ರಿಕಾದ ಆ ಪಂದ್ಯ ನನ್ನ ಪಾಲಿಗೆ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು. ಪಂದ್ಯದ 2ನೇ ಅವಧಿಯಾಟದಲ್ಲಿ ಪದೇ ಪದೇ ಮುಂಗುಸಿ ಮೈದಾನಕ್ಕೆ ಬರುತ್ತಿತ್ತು. ಇದರಿಂದ ನಮ್ಮ ಅದೃಷ್ಟ ಬದಲಾಯಿತು. ಮುಂಗುಸಿ ಬಂದಾಗಲೆಲ್ಲಾ ವಿಕೆಟ್ ಉರುಳುತ್ತಿತ್ತು. ಕೊನೇ ಓವರ್ ಎಸೆಯುವುದಕ್ಕು ಮೊದಲು ಮುಂಗುಸಿ ಬರಲೆಂದು ಕಾಯುತ್ತಿದ್ದೆ ಎಂದು ಹಳೇ ನೆನಪನ್ನು ಮೆಲುಕು ಹಾಕಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT