ವಾರಣಾಸಿ: ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಗಂಗಾ ನದಿಯಲ್ಲಿ ತನ್ನ ಆಪ್ತ ಸ್ನೇಹಿತ ಸ್ಟೀಫನ್ ರ ಅಸ್ಥಿಯನ್ನು ವಿಸರ್ಜನೆ ಮಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಕಾಶಿಯ ಮಣಿಕರ್ಣಿಕಾ ಘಾಟ್ ಗೆ ಆಗಮಿಸಿದ ಸ್ಟೀವ್ ವಾ, ಗಂಗಾ ನದಿಯಲ್ಲಿ ದೋಣಿಯ ಮೂಲಕ ತೆರಳಿ ಅಸ್ತಿಯನ್ನು ವಿಸರ್ಜಿಸಿದರು.
ಸ್ಟೀಫನ್ ಹಿಂದು ಧರ್ಮದ ಕುರಿತಾಗಿ ಅಪಾರ ನಂಬಿಕೆ ಹೊಂದಿದ್ದರು. ಇಸ್ಕಾನ್ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಸ್ಟೀಫನ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿಧನದ ಬಳಿಕ ತನ್ನ ಅಸ್ಥಿಯನ್ನು ಗಂಗಾ ನದಿಯಲ್ಲಿ ವಿಸರ್ಜಿಸಬೇಕು. ಅದೇ ಅವನ ಕೊನೆಯ ಆಸೆ ಆಗಿತ್ತು. ಆತನ ಆಸೆ ಪೂರೈಸಲು ಇಲ್ಲಿಗೆ ಬಂದಿದ್ದೇನೆ ಎಂದು ಸ್ಟೀವ್ ವಾ ಹೇಳಿದ್ದಾರೆ.