ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ! 
ಕ್ರಿಕೆಟ್

ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ!

ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ ಸಂಭವಿಸಿದೆ.

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ ಸಂಭವಿಸಿದೆ. 
ಪಾಲಂ ಏರ್ ಫೋರ್ಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವಾಗಲೇ ವ್ಯಕ್ತಿಯೋರ್ವ ಪಿಚ್ ಗೆ ಕಾರು ನುಗ್ಗಿಸಿರುವುದು ಭದ್ರತಾ ಲೋಪಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ 2 ನೇ ಇನ್ನಿಂಗ್ಸ್ ಆಡುತ್ತಿರಬೇಕಾದರೆ ಈ ಘಟನೆ ನಡೆದಿದ್ದು, ಭದ್ರತಾ ಲೋಪ ಸಂಭವಿಸಿರುವುದರಿಂದ 20 ನಿಮಿಷ ಮೊದಲೇ ದಿನದ ಆಟವನ್ನು ಮುಕ್ತಾಯಗೊಳಿಸಲಾಗಿದೆ. 
ಗಿರೀಶ್ ಶರ್ಮ ಎಂಬ ವ್ಯಕ್ತಿ ವಾಗನಾರ್ ಕಾರನ್ನು ಕ್ರೀಡಾಂಗಣದ ಒಳಗೆ ನುಗ್ಗಿಸಿದ್ದು, ಪ್ರಧಾನ ಗೇಟ್ ಬಳಿ ಭದ್ರತಾ ಸಿಬ್ಬಂದಿ ಹಾಜರಿಲ್ಲದೇ ಇದ್ದದ್ದೇ ಈ ಅವಾಂತರ ನಡೆಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಗಿರೀಶ್ ಶರ್ಮಾನನ್ನು ವಶಕ್ಕೆ ಪಡೆದ ಏರ್ಫೋರ್ಸ್ ಪೊಲೀಸರು ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರಾದ ಇಶಾಂತ್ ಶರ್ಮ, ಗೌತಮ್ ಗಂಭೀರ್, ರಿಷಭ್ ಪಂತ್ ಇದ್ದರು.  
ಬೆಂಗಳೂರಿಗೆ ತೆರಳುತ್ತಿದ್ದ ನನ್ನ ಸಹೋದರಿಯನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಹೋಗಿ ವಾಪಸ್ಸಾಗುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಕ್ರಿಕೆಟ್ ನಡೆಯುತ್ತಿರುವುದನ್ನು ಗಮನಿಸಿದೆ, ಎಂಟ್ರಿ ಗೇಟ್ ನಲ್ಲಿ ಯಾರೂ ಇರಲಿಲ್ಲ, ಅಷ್ಟೇ ಅಲ್ಲದೇ ಕಾರನ್ನು ಎಲ್ಲಿ ಪಾರ್ಕ್ ಮಾಡಬೇಕು ಎಂಬುದನ್ನು ಹೇಳಲೂ ಯಾರೂ ಇರಲಿಲ್ಲ, ಜೊತೆಗೆ ನೆಚ್ಚಿನ ಆಟಗಾರರನ್ನು ಭೇಟಿಯಾಗಬೇಕೆಂದೆನಿಸಿ ಕಾರನ್ನು ಸೀದಾ ಮೈದಾನದೊಳಗೆ ಕೊಂಡೊಯ್ದೆ ಎಂದು ಬಂಧಿತ ಗಿರೀಶ್ ಶರ್ಮಾ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT