ರಣಜಿ ಕ್ರಿಕೆಟ್:: ಮಹಾರಾಷ್ಟ್ರದ ಎದುರು ಕರ್ನಾಟಕಕ್ಕೆ ಜಯ 
ಕ್ರಿಕೆಟ್

ರಣಜಿ ಟ್ರೋಫಿ ಕ್ರಿಕೆಟ್: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ

ಪುಣೆಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎ ಗುಂಪಿನ ಮೂರನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 136 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ.

ಪುಣೆ: ಪುಣೆಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎ ಗುಂಪಿನ ಮೂರನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 136 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್‍ರ ಬೌಲಿಂಗ್ ದಾಳಿಗೆ ನಲುಗಿದ ಮಹಾರಾಷ್ಟ್ರ ತಂಡ ಸೋಲೊಪ್ಪಿಕೊಂಡಿದೆ. ಇದೇ ವೇಳೆ ಆಡಿರುವ ಮೂರು ಪಂದ್ಯಗಳಲ್ಲಿಯೂ ವಿಜಯ ದಾಖಲಿಸಿರುವ ಕರ್ನಾಟಕಗ್ರಸ್ಥಾನ ತನ್ನದಾಗಿಸಿಕೊಂಡಿದೆ.
ಪಂದ್ಯದ ಅಂತಿಮ ದಿನವಾದ ಇಂದು ಆಟ ಮುಂದುವರಿಸಿದ ಮಹಾರಾಷ್ಟ್ರ 247 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಕರ್ನಾಟಕದ ಅಭಿಮನ್ಯು ಮಿಥುನ್ 5 ವಿಕೆಟ್ ಪಡೆದು ಮಿಂಚಿದರು. 
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ನಲ್ಲಿ ಸಹ 245 ರನ್ ಗಳಿಗೆ ಸರ್ವಪತನವಾಗಿದ್ದ ಮಹಾರಾಷ್ಟ್ರದವರ ಆಟಕ್ಕೆ ಉತ್ತರವಾಗಿ ಕರ್ನಾಟಕ ಐದು ವಿಕೆಟ್ ನಷ್ಟಕ್ಕೆ 628  ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಡನೆ ಇನ್ನಿಂಗ್ಸ್ ನಲ್ಲಿ 383 ರನ್ ಮುನ್ನಡೆ ಸಾಧಿಸಿತ್ತು.
ಸ್ಕೋರ್ ವಿವರ:
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್: 245 ರನ್, ದ್ವಿತೀಯ ಇನ್ನಿಂಗ್ಸ್ 247 ರನ್, ಕರ್ನಾಟಕ ಮೊದಲ ಇನ್ನಿಂಗ್ಸ್:628/5 ಡಿಕ್ಲೇರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ: INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವು ಸುಲಭ!

ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಮಳೆಗೆ 111 ಸಾವು: ಸಿಎಂ ಸಿದ್ದರಾಮಯ್ಯ

Bihar SIR: Aadhaar ಅನ್ನು '12ನೇ ದಾಖಲೆ'ಯಾಗಿ ಪರಿಗಣಿಸಿ: EC ಗೆ ಸುಪ್ರೀಂ ಕೋರ್ಟ್ ಸೂಚನೆ

ಜಮ್ಮು-ಕಾಶ್ಮೀರ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ದೋಡಾದಲ್ಲಿ ಎಎಪಿ ಶಾಸಕ ಮೆಹರಾಜ್ ಮಲಿಕ್ ಬಂಧನ

SCROLL FOR NEXT