ರಹಕೀಮ್ ಕಾರ್ನ್ ವಾಲ್ 
ಕ್ರಿಕೆಟ್

ಅದ್ಭುತ ಬ್ಯಾಟಿಂಗ್ ನಡುವೆ ತನಗೆ ತಾನೇ ಔಟ್ ಘೋಷಿಸಿಕೊಂಡ ಕ್ರಿಕೆಟ್ ದೈತ್ಯ, ಕಾರಣ ಸಿಲ್ಲಿ!

ಕ್ರಿಕೆಟ್ ಜಗತ್ತಿನಲ್ಲಿ ದೈತ್ಯ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಹಕೀಮ್ ಕಾರ್ನ್ ವಾಲ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭರ್ಜರಿ ಹೊಡೆತೆಗಳಿಗೆ...

ಕ್ರಿಕೆಟ್ ಜಗತ್ತಿನಲ್ಲಿ ದೈತ್ಯ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಹಕೀಮ್ ಕಾರ್ನ್ ವಾಲ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭರ್ಜರಿ ಹೊಡೆತೆಗಳಿಗೆ ಹೆಸರುವಾಸಿಯಾಗಿರುವ ಕಾರ್ನ್ ವಾಲ್ ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಭರ್ಜರಿ ಬ್ಯಾಟಿಂಗ್ ನಡುವೆ ತನಗೆ ತಾನೇ ಔಟ್ ಘೋಷಿಸಿಕೊಂಡು ಸುದ್ದಿಯಾಗಿದ್ದಾರೆ. 
ಬಾರ್ಬಡೋಸ್ ಟ್ರಿಡೆನ್ಟಸ್ ಮತ್ತು ಸೇಂಟ್ ಲೂಸಿಯಾ ಸ್ಟಾರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟ್ ಮಾಡಿದ್ದ ಟ್ರಿಡೆನ್ಟಸ್ 195 ರನ್ ಗಳನ್ನು ಪೇರಿಸಿತ್ತು. 196 ರನ್ ಗಳ ಗುರಿ ಬೆನ್ನಟ್ಟಿದ ಸ್ಟಾರ್ಸ್ ಪರ ಆಡುತ್ತಿದ್ದ ರಹಕೀಮ್ ಕಾರ್ನ್ ವಾಲ್ ಅದ್ಭುತವಾಗಿ ಆಡುತ್ತಿದ್ದರು. 44 ಎಸೆತಗಳಲ್ಲಿ 78 ರನ್ ಗಳಿಸಿದ್ದ ರಹಕೀಮ್ ಇನ್ನೇನು ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಸಿಂಗಲ್ ರನ್ ಓಡಲು ಸಾಧ್ಯವಾಗದ ಕಾರಣ ತನ್ನಷ್ಟಕ್ಕೆ ತಾನೇ ರಹಕೀಮ್ ಔಟ್ ಘೋಷಿಸಿಕೊಂಡು ಪೆವಿಲಿಯನ್ ಸೇರಿದರು. ಇದರಿಂದಾಗಿ ಸ್ಟಾರ್ಸ್ ತಂಡ 29 ರನ್ ಗಳಿಂದ ಸೋಲು ಕಾಣಬೇಕಾಯಿತು. 
ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಹಕೀಮ್ ಭರ್ಜರಿ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದ್ದರು. ತಂಡಕ್ಕೆ ಆಸರೆಯಾಗಿದ್ದ ರಹಕೀಮ್ ಪಂದ್ಯದ ನಡುವೆ ರೀಟೈಡ್ ಹೇಳಿದ್ದರು. ಆಗ ತಂಡಕ್ಕೆ ಗೆಲ್ಲಲು 17 ಎಸೆತಗಳಲ್ಲಿ 49 ರನ್ ಗಳ ಅವಶ್ಯಕತೆ ಇತ್ತು. ಇಂತಹ ಸಂದರ್ಭದಲ್ಲಿ ದೃಢವಾಗಿ ಆಡುತ್ತಿದ್ದ ಕಾರ್ನ್ ವಾಲ್ ರೀಟೈಡ್ ಘೋಷಿಸಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ರಹಕೀಮ್ ನಡೆಯನ್ನು ಟ್ವೀಟರಿಗರು ಟೀಕಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT