ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಇಂದು ಮುಂಬೈನ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಬರೋಡಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ 19 ವರ್ಷದ ಒಳಗಿನ ಭಾರತೀಯ ತಂಡದಲ್ಲಿ ಅರ್ಜುನ್ ಆಡಲಿದ್ದಾರೆ.
17 ವರ್ಷದ ಅರ್ಜುನ್ ಈ ಹಿಂದೆ ಮುಂಬೈನ ಅಂಡರ್ 14 ಮತ್ತು ಅಂಡರ್ 16 ತಂಡಗಳಲ್ಲಿ ಆಡಿದ್ದರು. ಅರ್ಜುನ್, ಆಲ್ ರೌಂಡರ್ ಮತ್ತು ಎಡಗೈ ಬೌಲರ್ ಆಗಿ ಪ್ರಸಿದ್ಧರಾಗಿದ್ದಾರೆ.
ಅಂಡರ್ 19 ಕ್ರಿಕೆಟ್ ಸರಣಿ ಇದೇ ಸೆ.16ರಿಂದ 23ರವರೆಗೆ ಬರೋಡಾದಲ್ಲಿ ನಡೆಯಲಿದೆ.