ಹರ್ಭಜನ್ ಸಿಂಗ್, ಆ್ಯಂಡ್ರೂ ಸೈಮಂಡ್ಸ್ 
ಕ್ರಿಕೆಟ್

ಸೈಮಂಡ್ಸ್ ಕತೆ ಕಟ್ಟಿ ಜನರನ್ನು ಮಂಗನನ್ನಾಗಿ ಮಾಡ್ತಿದ್ದಾರೆ: ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನನ್ನನ್ನು ಮಂಗ ಎಂದು ಕರೆದು ಅವಮಾನಿಸಿದ್ದ ತಪ್ಪಿಗೆ ಅತ್ತು ತಮ್ಮ ಕ್ಷಮೆಯಾಚಿಸಿದ್ದರು ಎಂಬ...

ನವದೆಹಲಿ: ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನನ್ನನ್ನು ಮಂಗ ಎಂದು ಕರೆದು ಅವಮಾನಿಸಿದ್ದ ತಪ್ಪಿಗೆ ಅತ್ತು ತಮ್ಮ ಕ್ಷಮೆಯಾಚಿಸಿದ್ದರು ಎಂಬ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮಂಡ್ಸ್ ವಾದಕ್ಕೆ ಭಜ್ಜಿ ತಿರುಗೇಟು ನೀಡಿದ್ದಾರೆ. 
ಸೈಮಂಡ್ಸ್ ಒಳ್ಳೆಯ ಕ್ರಿಕೆಟಿಗ ಎಂದು ಅಂದುಕೊಂಡಿದ್ದೆ, ಆತನಲ್ಲಿ ಒಬ್ಬ ಒಳ್ಳೆಯ ಕತೆಗಾರ ಸಹ ಇದ್ದಾನೆ. 2008ರಲ್ಲಿ ಮಂಕಿ ಗೇಟ್ ಕತೆಯನ್ನು ಮಾರಾಟ ಮಾಡಿದ್ದರು. 2018ರಲ್ಲೂ ಚೆನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ಪ್ರಪಂಚ ಬಹಳಷ್ಟು ಬೆಳೆದಿದೆ. ನೀವೂ ಬೆಳೆದು ದೊಡ್ಡವರಾಗಿ ಎಂದು ಭಜ್ಜಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ತಮ್ಮ ಬಳಿ ಅತ್ತು ಕ್ಷಮೆ ಕೇಳಿದ್ದರು ಎಂಬ ಸೈಮಂಡ್ಸ್ ವಾದವನ್ನು ಭಜ್ಜಿ ಅಲ್ಲಗೆಳೆದಿದ್ದಾರೆ. 
ಇತ್ತೀಚೆಗೆ ಕ್ರೀಡಾ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸೈಮಂಡ್ಸ್ ಅವರು ತಮ್ಮನ್ನು ಮಂಗ ಎಂದು ಕರೆದಿದ್ದಕ್ಕೆ ಹರ್ಭಜನ್ ಸಿಂಗ್ ಅವರು ಅತ್ತು ಗೋಳಾಡಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದರು. 
ಸೈಮಂಡ್ಸ್ ರನ್ನು ಮಂಗ ಎಂದು ಕರೆದ ತಪ್ಪಿಗೆ ಭಜ್ಜಿಯನ್ನು ಮೂರು ಮ್ಯಾಚ್ ಗಳಿಂದ ಸಸ್ಪೆಂಡ್ ಮಾಡಲಾಗಿತ್ತು. ಬಹಳ ಕಾಲ ನಾನು ಆತನನ್ನು ಭೇಟಿಯಾಗಿರಲಿಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿಯಲ್ಲಿ ನಾವು ಮತ್ತೆ ಭೇಟಿಯಾದೆವು. ಅಲ್ಲಿ ನಾನು ಭಾವೋದ್ವೇಗಕ್ಕೆ ಒಳಗಾಗಿ ಸೈಮಂಡ್ಸ್ ರನ್ನು ಕ್ಷಮಿಸಿ ಎಂದು ಅತ್ತು ಗೋಳಾಡಿದ್ದ ಎಂದು ಹೇಳಿದ್ದರು. ನಾನು ಹಾಗೇ ಮಾಡಿಲ್ಲ ಎಂದು ಭಜ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT