ಮೆಲ್ಬೋರ್ನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಜನರಿಂದ ನಕರಾತ್ಮಕ ಪ್ರತಿಕ್ರಿಯೆಗಲು ಬಂದಿದ್ದು ಈ ಸಂಬಂಧ ಮಾತನಾಡಿರುವ ಕೊಹ್ಲಿ ನಾನು ಏನಂತ ಜನರಿಗೆ ತೋರಿಸಲು ಬ್ಯಾನರ್ ಇಡ್ಕೊಂಡು ತಿರುಗುವ ದರ್ದು ನನಗಿಲ್ಲ ಎಂದು ಹೇಳಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ವಿರಾಟ್ ಕೊಹ್ಲಿ ಅವರು ಸಾರ್ವಜನಿಕವಾಗಿ ನನ್ನ ಬಗ್ಗೆ ಮಾತನಾಡುವವರ ವಿರುದ್ಧ ಹೋರಾಡುವ ಯಾವುದೇ ಇರಾದೆ ನನಗಿಲ್ಲ. ಬಹಳಷ್ಟು ಜನ ಬೇರೆ ಬೇರೆ ವೇದಿಕೆಗಳಲ್ಲಿ ನನ್ನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೆ ಇರಲ್ಲ ಎಂದು ಹೇಳಿದ್ದಾರೆ.
ನಾನು ಏನು ಮಾಡುತ್ತೇನೆ ಅಥವಾ ನಾನು ಏನು ಯೋಚಿಸುತ್ತೇನೆ ಎಂದು ಹೊರಗೆ ಬ್ಯಾನರ್ ಕಟ್ಟಿ ಹೇಳಲು ಇಷ್ಟಪಡಲ್ಲ. ಸಾರ್ವಜನಿಕ ಬದುಕಿನಲ್ಲಿ ಇಂತಹ ಚರ್ಚೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು.
ಭಾರತ ತಂಡದ ಬೌಲಿಂಗ್ ಪ್ರದರ್ಶನ ಉತ್ತಮವಾಗಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಭರವಸೆ ಬೆಳೆಸಿಕೊಳ್ಳಬೇಕಾಗಿದೆ. ಸ್ಕೂರ್ ಬೋರ್ಡ್ ಮೇಲೆ ರನ್ ಗಳ ಮೇಲೆ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಬೌಲರ್ ಏನೂ ಮಾಡಲು ಸಾಧ್ಯವಾಗದೆ ಪರದಾಡುವಂತಾಗುತ್ತದೆ ಎಂದಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ದ್ವಿತೀಯ ಭಾಗವಾಗಿ ಬ್ಯಾಟಿಂಗ್ ಮಾಡಿದ್ದರೆ ಲೀಡ್ ಪಡೆಯಲು ಪ್ರಯ್ನತಿಸಬಹುದು ಅಥವಾ ಎದುರಾಳಿ ಸನ್ನಿಹದಲ್ಲಿರಲು ಸಾಧ್ಯವಿರುತ್ತದೆ. ಸಮ ಪ್ರಮಾಣದಲ್ಲಿ ಬೃಹತ್ ಮೊತ್ತ ಗಳಿಸಿದ್ದರೆ ಇದು ಸೆಕೆಂಡ್ ಇನ್ನಿಂಗ್ಸ್ ಪಂದ್ಯದಲ್ಲೂ ಮುಂದುವರೆಬಹುದು, ಒಂದು ವೇಳೆ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಲೀಡ್ ಹೊಂದಿದ್ದರೆ ಅದನ್ನೇ ಲಾಭ ಮಾಡಿಕೊಳ್ಳಬಹುದು ಆದ್ದರಿಂದ ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನದತ್ತ ಒತ್ತು ನೀಡಬೇಕು, ಉತ್ತಮ ಪ್ರದರ್ಶನ ತೋರಬೇಕು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos