ಇಂದ್ರಾ ನೂಯಿ 
ಕ್ರಿಕೆಟ್

ಐಸಿಸಿ ಮೊದಲ ಮಹಿಳಾ ಸ್ವತಂತ್ರ ನಿರ್ದೇಶಕಿಯಾಗಿ ಇಂದ್ರಾ ನೂಯಿ ನೇಮಕ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸ್ವತಂತ್ರ ನಿರ್ದೇಶಕಿಯಾಗಿ ನೇಮಕ ಮಾಡಿದೆ.

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸ್ವತಂತ್ರ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಪೆಪ್ಸಿ ಕೊ ಸಂಸ್ಥೆಯ  ಅಧ್ಯಕ್ಷೆ ಹಾಗೂ ಸಿಇಓ ಆಗಿರುವ ಇಂದ್ರಾ ನೂಯಿ ಐಸಿಸಿಯ ಪ್ರಥಮ ಸ್ವತಂತ್ರ ಮಹಿಳಾ ನಿರ್ದೇಶಕಿ ಎನಿಸಿದ್ದಾರೆ.
ನೂಯಿ 2018ರ ಜೂನ್ ನಲ್ಲಿ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಗೆ ಸೇರುವವರಿದ್ದಾರೆ. ಇವರು ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸುವವರಿದ್ದು  ಈಬಾರಿ ನಿರ್ದೇಶಕಿಯಾಗಿ ನೇಮಕವಾಗುವವರು ಮಹಿಳೆಯೇ ಆಗಿರಬೇಕೆಂದು 2017ರ ಐಸಿಸಿ ಫುಲ್ ಕೌನ್ಸಿಲ್ಸಭೆಯಲ್ಲಿ ತೀರ್ಮಾನವಾಗಿತ್ತು.  ಕ್ರಿಕೆಟ್ ನ ಜಾಗತಿಕ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಂವಿಧಾನ ಮಾರ್ಪಾಡಿನ ಒಂದು ಭಾಗವಾಗಿ ಈ ನೇಮಕ ಪ್ರಕ್ರಿಯೆ ನಡೆದಿದೆ.
"ಇಂದ್ರಾ ನೂಯಿಯನ್ನು ಐಸಿಸಿಗೆ ಸ್ವಾಗತಿಸಲು ನಾವು ಸಂತಸಪಡುತ್ತೇವೆ. ವಿಶೇಷವಾಗಿ ಮಹಿಳೆಯೊಬ್ಬಳ ನೇಮಕದಿಂಡ ನಮ್ಮ ಆಡಳಿತವನ್ನು ಸುಧಾರಿಸುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. ವಿಶ್ವದ ಅತಿ ದೊಡ್ಡ ಉದ್ಯಮವೊಂದನ್ನು ನಡೆಸುತ್ತಿರುವ ಇಂದ್ರಾ ನೂಯಿ ಕ್ರಿಕೆಟ್ ಮಂಡಳಿಗೆ ಸೇರುವುದರಿಂದ ಕ್ರಿಕೆಟ್ ಆಡಳಿತಕ್ಕೆಹೊಸ ಬಲ ಬರಲಿದೆ." ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದ್ದಾರೆ.
"ನಾನು ಕ್ರಿಕೆಟ್ ಆಟವನ್ನು ಪ್ರೀತಿಸುತ್ತೇನೆ ನಾನು ಚಿಕ್ಕವಳಿದ್ದಾಗ ಕಾಲೇಜಿನಲ್ಲಿ ಆಡಿದ್ದೇನೆ ಮತ್ತು ಇದರಿಂದ ನಾನು ತಂಡವೊಂದರ ಭಾಗವಾಗಿ ಹೇಗೆ ಕೆಲಸ ಮಾಡಬಹುದೆಂದು ಕಲಿತಿದ್ದೇನೆ. ಇದೀಗ ನನಗೆ ಮಂಡಳಿಯ ನಿರ್ದೇಶಕಿಯಾಗಲು ಅವಕಾಶ ನಿಡಿದ್ದು ಮಂಡಳಿಯ ಸಹೋದ್ಯೋಗಿಗಳೊಡನೆ ಕೆಲಸ ಮಿರ್ವಹಣೆಗಾಗಿ ಎದುರು ನೋಡುತ್ತಿದ್ದೇನೆ. " ಪೆಪ್ಸಿ ಕೊ ಅಧ್ಯಕ್ಷೆ ಇಂದ್ರಾ ನೂಯಿ ಹೇಳಿದ್ದಾರೆ.
ಸ್ವತಂತ್ರ ನಿರ್ದೇಶಕವನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದರೂ, ಆರು ವರ್ಷಗಳ ಸತತ ಅವಧಿ ವಿಸ್ತರಣೆಗೆ ಅವಕಾಶಗಳಿದ್ದು ನೂಯಿ ಅಲ್ಲಿಯವರೆಗೂ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT