ಸಂಗ್ರಹ ಚಿತ್ರ 
ಕ್ರಿಕೆಟ್

ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ

ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕಂದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.

ಕೇಪ್ ಟೌನ್: ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು  ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.
ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಹೀನಾಯವಾಗಿ ಸೋತ ಬಳಿಕ ಎಚ್ಚೆತ್ತುಕೊಂಡಿರುವ ದಕ್ಷಿಣ ಆಫ್ರಿಕಾ ಭಾರತ ಪ್ರಬಲ ಸ್ಪಿನ್ ದಾಳಿಯನ್ನು ಎದುರಿಸಲು ಹೊಸ ದಾರಿಯ ಶೋಧದಲ್ಲಿದೆ. ಈ ಹಿಂದೆ ಕೇಪ್ ಟೌನ್ ನಲ್ಲಿ  ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದರೂ ಭಾರತ ನೀಡಿದ 304 ರನ್ ಗಳ ಗುರಿಯನ್ನು ಬೆನ್ನ ಹತ್ತಲಾಗದೇ ಆಫ್ರಿಕಾ ತಂಡ ಹೀನಾಯವಾಗಿ ಸೋತಿತ್ತು, ಕೇವಲ 174 ರನ್ ಗಳಿಗೆ  ಆಲೌಟ್ ಆಗುವ ಮೂಲಕ 124 ರನ್ ಗಳ ಅಂತರದಲ್ಲಿ ಸೋಲಿಗೆ ಶರಣಾಗಿತ್ತು.
ಪ್ರಮುಖವಾದಿ ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು ಆಫ್ರಿಕನ್ ಬ್ಯಾಟ್ಸಮನ್ ಗಳ ಮೇಲೆ ಸವಾರಿಯನ್ನೇ ಮಾಡಿದ್ದರು. ಭಾರತದ ಸ್ಪಿನ್ ಅಸ್ತ್ರಕ್ಕೆ ನಿರುತ್ತರರಾಗಿದ್ದ ಆಪ್ರಿಕನ್ನರು ಪೆವಿಲಿಯನ್ ಪರೇಡ್ ನಡೆಸಿದ್ದರು. ಇದೀಗ  ಭಾರತದ ಸ್ಪಿನ್ ಅಸ್ತ್ರವನ್ನು ಎದುರಿಸಲು ದಕ್ಷಿಣ ಆಫ್ರಿಕಾ ತಂಡ ಹೊಸ ದಾರಿಯ ಶೋಧದಲ್ಲಿ ತೊಡಗಿದ್ದು, ಈ ಬಗ್ಗೆ ಸ್ವತಃ ಆಫ್ರಿಕಾ ತಂಡದ ಆಟಗಾರ ಡುಮಿನಿ ಹೇಳಿಕೆ ನೀಡಿದ್ದಾರೆ.
ಭಾರತೀಯ ಸ್ಪಿನ್ನರ್ ಗಳು ಅತ್ಯುತ್ತಮ ಲಯದಲ್ಲಿದ್ದು, ಅವರನ್ನು ಎದುರಿಸುವ ಸಲುವಾಗಿ ಹೊಸ ಮಾರ್ಗಗಳ ಶೋಧದಲ್ಲಿ ತಮ್ಮ ತಂಡ ತೊಡಗಿದೆ. ಪ್ರಮುಖವಾಗಿ ಭಾರತದ ಯಜುವೇಂದ್ರ ಚಾಹಲ್ ಮತ್ತು ಕಲುದೀಪ್ ಯಾದವ್  ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಇಬ್ಬರು ಸ್ಪಿನ್ನರ್ ಗಳನ್ನು ಎದುರಿಸುವುದೇ ತಂಡದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಇಬ್ಬರ ಬೌಲಿಂಗ್ ನಲ್ಲಿ ಸಿಂಗಲ್ ರನ್ ಕದಿಯುವುದು ಸವಾಲಾಗುತ್ತಿದ್ದು, ಇವರ ಗೂಗ್ಲಿ ಎಸೆತಗಳನ್ನು  ಎದುರಿಸಲು ನಮ್ಮ ತಂಡದಿಂದ ಸಾಧ್ಯವಾಗುತ್ತಿಲ್ಲ. ಈ ಇಬ್ಬರೂ ಬೌಲಿಂಗ್ ಗೆ ಇಳಿಯುತ್ತಿದ್ದಂತೆಯೇ ನಮ್ಮ ಯೋಜನೆಗಳೆಲ್ಲಾ ತಲೆಕೆಳಗಾಗುತ್ತಿದೆ ಎಂದು ಡುಮಿನಿ ಹೇಳಿದ್ದಾರೆ.
ಒಟ್ಟಾರೆ ಆಫ್ರಿಕಾ ನೆಲದಲ್ಲಿ ಭಾರತೀಯ ಸ್ಪಿನ್ನರ್ ಗಳು ಮಿಂಚುತ್ತಿದ್ದು, 6 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 3 ಪಂದ್ಯಗಳನ್ನು ಜಯಿಸಿದ್ದು, ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಭಾರತ ಸರಣಿ  ಕೈವಶ ಮಾಡಿಕೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT