ದಾಖಲೆ ನಿರ್ಮಿಸಿದ ಬಾಲಕ ತನಿಷ್ಕ್ ಗಾವಟೆ 
ಕ್ರಿಕೆಟ್

ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸಿ ದಾಖಲೆ ಬರೆದ ಮುಂಬೈ ಬಾಲಕ ತನಿಷ್ಕ್ ಗಾವಟೆ!

ದೇಶೀ ಕ್ರಿಕೆಟ್ ನಲ್ಲಿ ಮುಂಬೈನ ಬಾಲಕನೋರ್ವ ಅಭೂತಪೂರ್ವ ಸಾಧನೆ ಮಾಡಿದ್ದು, ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾನೆ.

ಮುಂಬೈ: ದೇಶೀ ಕ್ರಿಕೆಟ್ ನಲ್ಲಿ ಮುಂಬೈನ ಬಾಲಕನೋರ್ವ ಅಭೂತಪೂರ್ವ ಸಾಧನೆ ಮಾಡಿದ್ದು, ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾನೆ.
ನವಿ ಮುಂಬೈನ ಶಾಲಾ ಬಾಲಕ ತನಿಷ್ಕ್ ಗಾವಟೆ ಈ ದಾಖಲೆ ನಿರ್ಮಿಸಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ ನ ಆಶ್ರಯದಲ್ಲಿ ನಡೆದ ಅಂಡರ್ -14 ನವಿ ಮುಂಬೈ ಶಿಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್‌ ಪಂದ್ಯದಲ್ಲಿ ಗಾವಟೆ  ಮಂಗಳವಾರ ಔಟಾಗದೆ 1,045 ರನ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಶಾಲಾ ಕ್ರಿಕೆಟ್‌ನಲ್ಲಿ ಇದೊಂದು ವಿಶ್ವದಾಖಲೆಯಾಗಿದ್ದು, ಈ ಹಿಂದೆ 2016ರ ಜನವರಿಯಲ್ಲಿ ಇದೇ ಮುಂಬೈನ ಬಾಲಕ ಪ್ರಣವ್  ಧನವಾಡೆ 1, 009 ರನ್ ಸಿಡಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ.
ಇದೀಗ ತನಿಷ್ಕ್ ಗಾವಟೆ 1, 045 ರನ್ ಸಿಡಿಸುವ ಮೂಲಕ ಈ ದಾಖಲೆಯನ್ನು ಧೂಳಿಪಟ ಮಾಡಿ ತನ್ನ ಹೆಸರಿಗೆ ನೂತನ ದಾಖಲೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರ ಕ್ರಿಕೆಟಿಂಗ್ ಕೋಚ್ ಮನೀಶ್ ಮಾಹಿತಿ  ನೀಡಿದ್ದು, ಕೋಪರ್‌ ಖೈರ್ನೆಯ ಯಶವಂತ್‌ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯಶವಂತ್‌ ರಾವ್ ಚವಾಣ್ ಇಲೆವನ್ ತಂಡದ ಪರ ಆಡಿದ ಗಾವಟೆ ಸೋಮವಾರ ಮತ್ತು  ಮಂಗಳವಾರ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದು ಈ ವೇಳೆ 1, 045 ರನ್ ಸಿಡಿಸಿ ಎಂದು ಹೇಳಿದ್ದಾರೆ.
ಈ ಇನ್ನಿಂಗ್ಸ್ ನಲ್ಲಿ ಗಾವಟೆ ಯಶವಂತ್ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ತಂಡದ ವಿರುದ್ಧ 515 ಎಸೆತಗಳನ್ನು ಎದುರಿಸಿ 149 ಬೌಂಡರಿ ಮತ್ತು 67 ಸಿಕ್ಸರ್ ನೆರವಿನಿಂದ 1,045 ರನ್ ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. 
ಈ ಮೊದಲು 2016ರ ಜನವರಿಯಲ್ಲಿ ಭಂಡಾರಿ ಕಪ್ ಇಂಟರ್-ಸ್ಕೂಲ್ ಟೂರ್ನಮೆಂಟ್‌ನಲ್ಲಿ ಇದೇ ಮುಂಬೈನ ಬಾಲಕ ಪ್ರಣವ್ ಧನವಾಡೆ 1,009 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದ. ಆದರೆ ಇದೀಗ 14ರ ಹರೆಯದ ತನಿಷ್ಕ್  ಗಾವಟೆ ಈ ದಾಖಲೆಯನ್ನು ಧೂಳಿಪಟ ಮಾಡಿದ್ದಾನೆ. ಧನವಾಡೆ1899ರಲ್ಲಿ ಅರ್ಥರ್ ಕಾಲಿನ್ಸ್ ದಾಖಲಿಸಿದ್ದ 628 ರನ್‌ಗಳ ದಾಖಲೆಯನ್ನು ಎರಡು ವರ್ಷಗಳ ಹಿಂದೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT