ದಾಖಲೆ ನಿರ್ಮಿಸಿದ ಬಾಲಕ ತನಿಷ್ಕ್ ಗಾವಟೆ 
ಕ್ರಿಕೆಟ್

ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸಿ ದಾಖಲೆ ಬರೆದ ಮುಂಬೈ ಬಾಲಕ ತನಿಷ್ಕ್ ಗಾವಟೆ!

ದೇಶೀ ಕ್ರಿಕೆಟ್ ನಲ್ಲಿ ಮುಂಬೈನ ಬಾಲಕನೋರ್ವ ಅಭೂತಪೂರ್ವ ಸಾಧನೆ ಮಾಡಿದ್ದು, ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾನೆ.

ಮುಂಬೈ: ದೇಶೀ ಕ್ರಿಕೆಟ್ ನಲ್ಲಿ ಮುಂಬೈನ ಬಾಲಕನೋರ್ವ ಅಭೂತಪೂರ್ವ ಸಾಧನೆ ಮಾಡಿದ್ದು, ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾನೆ.
ನವಿ ಮುಂಬೈನ ಶಾಲಾ ಬಾಲಕ ತನಿಷ್ಕ್ ಗಾವಟೆ ಈ ದಾಖಲೆ ನಿರ್ಮಿಸಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ ನ ಆಶ್ರಯದಲ್ಲಿ ನಡೆದ ಅಂಡರ್ -14 ನವಿ ಮುಂಬೈ ಶಿಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್‌ ಪಂದ್ಯದಲ್ಲಿ ಗಾವಟೆ  ಮಂಗಳವಾರ ಔಟಾಗದೆ 1,045 ರನ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಶಾಲಾ ಕ್ರಿಕೆಟ್‌ನಲ್ಲಿ ಇದೊಂದು ವಿಶ್ವದಾಖಲೆಯಾಗಿದ್ದು, ಈ ಹಿಂದೆ 2016ರ ಜನವರಿಯಲ್ಲಿ ಇದೇ ಮುಂಬೈನ ಬಾಲಕ ಪ್ರಣವ್  ಧನವಾಡೆ 1, 009 ರನ್ ಸಿಡಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ.
ಇದೀಗ ತನಿಷ್ಕ್ ಗಾವಟೆ 1, 045 ರನ್ ಸಿಡಿಸುವ ಮೂಲಕ ಈ ದಾಖಲೆಯನ್ನು ಧೂಳಿಪಟ ಮಾಡಿ ತನ್ನ ಹೆಸರಿಗೆ ನೂತನ ದಾಖಲೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರ ಕ್ರಿಕೆಟಿಂಗ್ ಕೋಚ್ ಮನೀಶ್ ಮಾಹಿತಿ  ನೀಡಿದ್ದು, ಕೋಪರ್‌ ಖೈರ್ನೆಯ ಯಶವಂತ್‌ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯಶವಂತ್‌ ರಾವ್ ಚವಾಣ್ ಇಲೆವನ್ ತಂಡದ ಪರ ಆಡಿದ ಗಾವಟೆ ಸೋಮವಾರ ಮತ್ತು  ಮಂಗಳವಾರ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದು ಈ ವೇಳೆ 1, 045 ರನ್ ಸಿಡಿಸಿ ಎಂದು ಹೇಳಿದ್ದಾರೆ.
ಈ ಇನ್ನಿಂಗ್ಸ್ ನಲ್ಲಿ ಗಾವಟೆ ಯಶವಂತ್ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ತಂಡದ ವಿರುದ್ಧ 515 ಎಸೆತಗಳನ್ನು ಎದುರಿಸಿ 149 ಬೌಂಡರಿ ಮತ್ತು 67 ಸಿಕ್ಸರ್ ನೆರವಿನಿಂದ 1,045 ರನ್ ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. 
ಈ ಮೊದಲು 2016ರ ಜನವರಿಯಲ್ಲಿ ಭಂಡಾರಿ ಕಪ್ ಇಂಟರ್-ಸ್ಕೂಲ್ ಟೂರ್ನಮೆಂಟ್‌ನಲ್ಲಿ ಇದೇ ಮುಂಬೈನ ಬಾಲಕ ಪ್ರಣವ್ ಧನವಾಡೆ 1,009 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದ. ಆದರೆ ಇದೀಗ 14ರ ಹರೆಯದ ತನಿಷ್ಕ್  ಗಾವಟೆ ಈ ದಾಖಲೆಯನ್ನು ಧೂಳಿಪಟ ಮಾಡಿದ್ದಾನೆ. ಧನವಾಡೆ1899ರಲ್ಲಿ ಅರ್ಥರ್ ಕಾಲಿನ್ಸ್ ದಾಖಲಿಸಿದ್ದ 628 ರನ್‌ಗಳ ದಾಖಲೆಯನ್ನು ಎರಡು ವರ್ಷಗಳ ಹಿಂದೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT