ಸಂಗ್ರಹ ಚಿತ್ರ 
ಕ್ರಿಕೆಟ್

'ವಿರಾಟ್ ಕೊಹ್ಲಿ ಅಲ್ಲ': ಪಾಕ್ ವೇಗಿ ಆಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಪಾಕಿಸ್ತಾನದ ವೇಗಿ ಮಹಮದ್ ಆಮೀರ್ ಪ್ರಕಾರ ವಿಶ್ವ ಕ್ರಿಕೆಟ್ ನಲ್ಲಿ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಬ್ಯಾಟ್ಸಮನ್ ಅಲ್ಲ.. ಹಾಗಾದರೇ ಅವರ ಪ್ರಕಾರ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?

ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಪಾಕಿಸ್ತಾನದ ವೇಗಿ ಮಹಮದ್ ಆಮೀರ್ ಪ್ರಕಾರ ವಿಶ್ವ ಕ್ರಿಕೆಟ್ ನಲ್ಲಿ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಬ್ಯಾಟ್ಸಮನ್ ಅಲ್ಲ.. ಹಾಗಾದರೇ ಅವರ ಪ್ರಕಾರ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?
ಈ ಹಿಂದೆ ಪಾಕಿಸ್ತಾನ ವಿರುದ್ದದ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ ಮಹಮದ್ ಆಮಿರ್ ರನ್ನು ತಾನು ಕಂಡ ವಿಶ್ವದ ಕಠಿಣ ಬೌಲರ್ ಗಳಲ್ಲಿ ಒಬ್ಬ ಎಂದು ಶ್ಲಾಘಿಸಿದ್ದರು. ಅಲ್ಲದೆ ತರಬೇತಿ ವೇಳೆ ಆಮಿರ್ ಗೆ ತಮ್ಮ ಬ್ಯಾಟ್ ನೀಡಿ ಪ್ರೋತ್ಸಾಹ ನೀಡಿದ್ದರು. ಆ ಬಳಿಕ ಮಹಮದ್ ಆಮಿರ್ ಕೂಡ ಕೊಹ್ಲಿ ಅವರನ್ನು ಶ್ಲಾಘಿಸಿ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಕ್ರಿಕೆಟಿಗ ಎಂದು ಹೇಳಿದ್ದರು.
ಇದೀಗ ಇದೇ ಆಮಿರ್ ವಿಶ್ವದ ಕಠಿಣ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಹಾಗಾದರೆ ಅಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಎಂಬ ಪ್ರಶ್ನೆಗೆ ಉತ್ತರ. ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವನೆ ಸ್ಮಿತ್. ಹೌದು ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಪ್ರಸ್ತುತ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸ್ಟೀವನ್ ಸ್ಮಿತ್ ವಿಶ್ವದ ಅತ್ಯಂತ ಕಠಿಣ ಬ್ಯಾಟ್ಸಮನ್ ಎಂದು ಮಹಮದ್ ಆಮಿರ್ ಹೇಳಿಕೊಂಡಿದ್ದಾರೆ.
ಖ್ಯಾತ ಕ್ರೀಡಾ ವಾಹಿನಿ ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಹಮದ್ ಆಮಿರ್, ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸಮನ್ ಗಳಲ್ಲಿ ಸ್ಟೀವನ್ ಸ್ಮಿತ್ ಒಬ್ಬರು. ಅವರ ವಿಶೇಷ ಬ್ಯಾಟಿಂಗ್ ಶೈಲಿ ಯಾವುದೇ ಬೌಲರ್ ಕೂಡ ಅವರ ವಿಕೆಟ್ ಪಡೆಯಲು ಪರದಾಡುವಂತೆ ಮಾಡುತ್ತಾರೆ. ವಿಶ್ವದ ಕಠಿಣ ಬ್ಯಾಟ್ಸಮನ್ ಗಳಲ್ಲಿ ಸ್ಮಿತ್ ಒಬ್ಬರು ಎಂದು ಆಮಿರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT