ಕ್ರಿಕೆಟ್

ಲಂಕಾ ಪ್ರವಾಸ: ಭಾರತದ ಅಂಡರ್ 19 ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಆಯ್ಕೆ

Lingaraj Badiger
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಅವರು ಮುಂದಿನ ತಿಂಗಳು ನಡೆಯುವ ಶ್ರೀಲಂಕಾ ವಿರುದ್ಧದ ಭಾರತದ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭಾರತದ ಅಂಡರ್ 19 ತಂಡ ಜುಲೈನಲ್ಲಿ ಲಂಕಾ ಪ್ರವಾಸ ಕೈಗೊಳ್ಳಲಿದ್ದು, ಶ್ರೀಲಂಕಾ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಲಿದೆ.
ನಾಲ್ಕು ದಿನಗಳ ಪಂದ್ಯಕ್ಕೆ ಅರ್ಜುನ್ ಆಯ್ಕೆಯಾಗಿದ್ದು, ದೆಹಲಿಯ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಅನುಜ್ ರಾವತ್ ತಂಡಕ್ಕೆ ನಾಯರಾಗಿದ್ದಾರೆ.
18 ವರ್ಷದ ಅರ್ಜುನ್ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಬ್ಯಾಟ್ಸ್'ಮನ್ ಜಾನಿ ಬ್ರಿಸ್ಟೋ ಅವರನ್ನು ಯಾರ್ಕರ್ ಹಾಕುವ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಸುದ್ದಿಯಾಗಿದ್ದರು.
SCROLL FOR NEXT