ಸಂಗ್ರಹ ಚಿತ್ರ 
ಕ್ರಿಕೆಟ್

ಚೆಂಡು ವಿರೂಪಗೊಳಿಸಿದ ಪ್ರಕರಣ: ಆಸಿಸ್ ಕೋಚ್ ಲೆಹ್ಮನ್ ಹುದ್ದೆ ಉಳಿಸಿದ ಆ 6 ಶಬ್ದಗಳು!

ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಆಟಗಾರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದ್ದು, ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.
ಹೌದು...ಕೋಚ್ ಸ್ಖಾನಕ್ಕೆ ಲೆಹ್ಮನ್ ರಾಜಿನಾಮೆ ನೀಡಿದ್ದಾಗ ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಕ್ಲೀನ್​ಚಿಟ್ ನೀಡಿದ್ದು ಎಲ್ಲರ ಹುಬ್ಬೇರಿಸಿತ್ತು. ಆದರೆ, ತನಿಖೆಯ ವೇಳೆ ಲೆಹ್ಮನ್​ರ ವಾದವನ್ನು ಇಂಟಿಗ್ರಿಟಿ ಯೂನಿಟ್ (ತನಿಖಾ ತಂಡ) ಒಪ್ಪಿಕೊಂಡಿದ್ದರಿಂದ ಅವರಿಗೆ ಕೋಚ್ ಆಗಿ ಮುಂದುವರಿಯಲು ಅವಕಾಶ ನೀಡಲಾಗಿದೆ. 
ಟಿವಿ ನೇರಪ್ರಸಾರದಲ್ಲಿ ಲೆಹ್ಮನ್, 12ನೇ ಆಟಗಾರ ಹ್ಯಾಂಡ್ಸ್​ಕಾಂಬ್​ಗೆ ವಾಕಿಟಾಕಿಯಲ್ಲಿ ಸೂಚನೆ ನೀಡಿದ್ದು ಸ್ಪಷ್ಟವಾಗಿತ್ತು. ಬಳಿಕ ಹ್ಯಾಂಡ್ಸ್​ಕಾಂಬ್, ಬ್ಯಾಂಕ್ರಾಫ್ಟ್​ರ ಜತೆ ಮೈದಾನದಲ್ಲಿ ಮಾತನಾಡಿದ್ದು ಪ್ರಸಾರಗೊಂಡಿತ್ತು. ಬ್ಯಾಂಕ್ರಾಫ್ಟ್ ಕೈಯಲ್ಲಿ ಏನೋ ಹಿಡಿದುಕೊಂಡಿದ್ದು, ಅದನ್ನು ಪ್ರಶ್ನಿಸುವಂತೆ ‘ವಾಟ್ ಈಸ್ ದ ಹೆಲ್ ಗೋಯಿಂಗ್ ಆನ್’ ಎಂದು ಲೆಹ್ಮನ್ ವಾಕಿಟಾಕಿ ಮೂಲಕ ಹ್ಯಾಂಡ್ಸ್​ಕಾಂಬ್​ಗೆ ಹೇಳಿದ್ದಾರೆ. ಬಳಿಕ ಹ್ಯಾಂಡ್ಸ್​ಕೊಂಬ್, ಬ್ಯಾಂಕ್ರಾಫ್ಟ್ ರಲ್ಲಿ ಈ ವಿಷಯವನ್ನು ಕೇಳಿದ್ದರು ಎಂದು ಸಿಇಒ ಜೇಮ್ಸ್ ಸುದರ್​ಲ್ಯಾಂಡ್ ತಿಳಿಸಿದ್ದಾರೆ. 
ಇಂಟಿಗ್ರಿಟಿ ಯೂನಿಟ್​ನ ಮುಖ್ಯಸ್ಥ ಇಯಾನ್ ರಾಯರ್ ತನಿಖೆಯ ವೇಳೆಯೂ ಲೆಹ್ಮನ್ ಇದನ್ನು ಹೇಳಿರುವ ಕಾರಣ ಅವರಿಗೆ ಕ್ಲೀನ್​ಚಿಟ್ ನೀಡಲಾಗಿದೆ. ಲೆಹ್ಮನ್ ‘ಹೆಲ್’ ಬದಲಾಗಿ ಬೇರೆ ಶಬ್ದವನ್ನು ಬಳಸಿದ್ದರಷ್ಟೇ ಎಂದು ಸುದರ್​ ಲ್ಯಾಂಡ್ ಸ್ಪಷ್ಟಪಡಿಸಿದ್ದಾರೆ. ಈ ಆರು ಶಬ್ದಗಳೇ ಲೆಹ್ಮನ್​ರನ್ನು ವಜಾ ಶಿಕ್ಷೆಯಿಂದ ಬಚಾವ್ ಮಾಡಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel