ಸಂಗ್ರಹ ಚಿತ್ರ 
ಕ್ರಿಕೆಟ್

ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.
ಜಹೀರ್ ಖಾನ್ ಅವರ ಈ ಕಾರ್ಯಕ್ಕೆ ಒಂದು ಪ್ರಮುಖ ಕಾರಣವಿದ್ದು, ಆ ಕಾರಣವೇ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂಎಸ್ ಧೋನಿ.. ಹೌದು ಧೋನಿಗಾಗಿ ಜಹೀರ್ ಖಾನ್ ನಂಬರ್ 7 ಜೆರ್ಸಿ ಬೇಡ ಎಂದು ತಿರಸ್ಕರಿಸಿದ್ದಾರಂತೆ. 
ಹೌದು, ಎರಡನೇ ಆವೃತ್ತಿಯ ಟಿ10 ಆವೃತ್ತಿಯಲ್ಲಿ ಬೆಂಗಾಲಿ ಟೈಗರ್ಸ್​ ಪರ ಜಹೀರ್​ ಖಾನ್ ಆಡುತ್ತಿದ್ದು, ಅವರು ತಂಡದ ಜರ್ಸಿ ಬಿಡುಗಡೆ ಸಂದರ್ಭದಲ್ಲಿ 34 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಆ ಸಂಖ್ಯೆಯ ಆಯ್ಕೆ ಬಗ್ಗೆ ಕೂತೂಹಲಕಾರಿಯಾದ ವಿಷಯವನ್ನೂ ಅವರು ತಿಳಿಸಿದ್ದಾರೆ. ಜಹೀರ್​ ಹುಟ್ಟಿದ್ದ ದಿನಾಂಕ ಅಕ್ಟೋಬರ್​ 7, ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಅವಕಾಶವಿತ್ತು. ಆದರೆ ಜಹೀರ್​ 7 ಸಂಖ್ಯೆ ಎಂದಿಗೂ ಧೋನಿಗೆ ಸೇರಬೇಕು. ಈಗಾಗಲೇ 15 ವರ್ಷಗಳಿಂದ ಧೋನಿ ಆ ನಂಬರ್​ ಉಪಯೋಗಿಸುತ್ತಿರುವಾಗ ನಾನು ಅದೇ ಸಂಖ್ಯೆಯ ಜರ್ಸಿ ತೊಡಲು ಬಯಸುವುದಿಲ್ಲ. ಆದ್ದರಿಂದ 34 ನಂಬರ್​ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಇಲ್ಲಿ ಜಹೀರ್​ 34 ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬು ಕುತೂಹಲಕಾರಿ ಅಂಶವನ್ನು ಅವರೇ ತಿಳಿಸಿದ್ದಾರೆ. ನನ್ನ ಜನ್ಮದಿನಾಂಕ 7, ಇಲ್ಲಿ 3 ಮತ್ತು 4 ಕೂಡಿಸಿದರೆ 7 ಬರುವುದರಿಂದ 34 ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಮಾರಂಭದಲ್ಲಿ ಅವರು ತಿಳಿಸಿದ್ದಾರೆ. ಆ ಮೂಲಕ ಜಹೀರ್ ​ಖಾನ್​ ತಾವೊಬ್ಬ ಜಂಟಲ್​ಮ್ಯಾನ್​ ಕ್ರಿಕೆಟಿಗ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಇನ್ನು ಇದೇ ನವೆಂಬರ್ 23ರಿಂದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಿ10 ಲೀಗ್ ಆರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT