ಎಂಎಸ್‌ಕೆ ಪ್ರಸಾದ್-ಕರುಣ್ ನಾಯರ್ 
ಕ್ರಿಕೆಟ್

ಹೈದರಾಬಾದ್‌ನ ಹನುಮನಿಗಾಗಿ 'ತ್ರಿಶತಕ ವೀರ' ಕನ್ನಡಿಗ ಕರುಣ್‌ರನ್ನು ಕಡೆಗಣಿಸಿದ್ರಾ ಎಂಎಸ್‌ಕೆ ಪ್ರಸಾದ್?

ಕಳೆದ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದರೂ ಒಂದು ಟೆಸ್ಟ್ ಪಂದ್ಯವಾಡಲು ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದ ಕರುಣ್ ನಾಯರ್ ರನ್ನು ಹೈದರಾಬಾದ್ ನ ಹನುಮ...

ನವದೆಹಲಿ: ಕಳೆದ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದರೂ ಒಂದು ಟೆಸ್ಟ್ ಪಂದ್ಯವಾಡಲು ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದ ತ್ರಿಶತಕ ವೀರ ಕರುಣ್ ನಾಯರ್ ರನ್ನು ಹೈದರಾಬಾದ್ ನ ಹನುಮ ವಿಹಾರಿಗಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಕಡೆಗಣಿಸಿದ್ದಾರೆ ಎಂಬ ಅನುಮಾನಗಳು ಮೂಡತೊಡಗಿವೆ. 
ಮುಂಬರುವ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು ಇದರಲ್ಲಿ ಕರುಣ್ ನಾಯರ್ ಗೆ ಸ್ಥಾನ ನೀಡಿದೆ ಹನುಮ ವಿಹಾರಿಗೆ ಅವಕಾಶ ನೀಡಿರುವ ಎಂಎಸ್‌ಕೆ ಪ್ರಸಾದ್ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 
ಎಂಎಸ್‌ಕೆ ಪ್ರಸಾದ್ ಅವರು ಹೈದರಾಬಾದ್ ನವರಾಗಿದ್ದು ವಿಹಾರಿ ಸಹ ಹೈದರಾಬಾದ್ ನವರಾಗಿರುವುದರಿಂದ ಈ ಪ್ರೀತಿಯೇ ವಿಹಾರಿ ಆಯ್ಕೆ ಕಾರಣ ಎಂದು ಹಲವು ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದಾರೆ. ಒಟ್ಟಾರೆ ಎಂಎಸ್‌ಕೆ ಪ್ರಸಾದ್ ಅವರು ಕನ್ನಡಿಗ ಕರುಣ್ ನಾಯರ್ ವಿಷಯದಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. 
ಇನ್ನು ಈ ಸಂಬಂಧ ಎಂಎಸ್‌ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದು ತನ್ನನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು ಎಂಬ ಕೊರಗಿನಿಂದ ಕರುಣ್ ಹೊರಬರಬೇಕು. ರಣಜಿ, ಭಾರತ ಎ ಸರಣಿಗಳಲ್ಲಿ ಆಡಿ ರನ್ ಹೊಳೆ ಹರಿಸುವತ್ತಾ ಗಮನ ಹರಿಸಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT