ಸಂಗ್ರಹ ಚಿತ್ರ 
ಕ್ರಿಕೆಟ್

ಎಸ್ ಜಿ ಬಾಲ್ ಬಗ್ಗೆ ದೂರು ನೀಡಿದ ಭಾರತೀಯ ಬೌಲರ್ ಗಳನ್ನೇ ತರಾಟೆಗೆ ತೆಗೆದುಕೊಂಡ ಅಜರುದ್ದೀನ್!

ಸ್ವದೇಶಿ ನಿರ್ಮಿತ ಎಸ್ ಜಿ ಬಾಲ್ ಕುರಿತು ದೂರು ನೀಡಿದ್ದ ಭಾರತೀಯ ಬೌಲರ್ ಗಳನ್ನು ಟೀಂ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ: ಸ್ವದೇಶಿ ನಿರ್ಮಿತ ಎಸ್ ಜಿ ಬಾಲ್ ಕುರಿತು ದೂರು ನೀಡಿದ್ದ ಭಾರತೀಯ ಬೌಲರ್ ಗಳನ್ನು ಟೀಂ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಬೌಲರ್ ಗಳಾದ ಉಮೇಶ್ ಯಾದವ್, ಕುಲದೀಪ್ ಯಾದವ್ ಮತ್ತು ಆರ್ ಅಶ್ವಿನ್ ಎಸ್ ಜಿ ಬಾಲ್ ಗಳ ಬಳಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಎಸ್ ಜಿ ಬಾಲ್ ಗಳಲ್ಲಿನ ಗ್ರಿಪ್ (ಹಿಡಿತ) ಕುರಿತು ಬೌಲರ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಇದಕ್ಕೆ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬೆಂಬಲ ನೀಡಿ ಚೆಂಡಿನ ಬಳಕೆ ಕುರಿತು ಆಕ್ಷೇಪವೆತ್ತಿ, ಲಂಡನ್ ನಿರ್ಮಿತ ಡ್ಯೂಕ್ ಬಾಲ್ ಗಳ ಬಳಕೆಗೆ ಸಲಹೆ ನೀಡಿದ್ದರು.
ಆದರೆ ಇದೀಗ ಟೀಂ ಇಂಡಿಯಾ ಆಟಗಾರರ ದೂರು ಮತ್ತು ವರ್ತನೆಗೆ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎಸ್ ಜಿ ಬಾಲ್ ಗಳಲ್ಲಿನ ಗ್ರಿಪ್ ನಿಂದಾಗಿಯೇ ಭಾರತೀಯ ಸ್ಪಿನ್ನರ್ ಗಳು ಸ್ವದೇಶದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅಜರುದ್ದೀನ್, '1993ರಿಂದಲೂ ಭಾರತದಲ್ಲಿ ಎಸ್ ಜಿ ಬಾಲ್ ಗಳನ್ನು ಬಳಸುತ್ತಿದ್ದೇವೆ. ಬಾಲ್ ನಲ್ಲಿರುವ ಸೀಮ್ ಸ್ಪಿನ್ನರ್ ಗಳು ಬಾಲ್ ಅನ್ನು ಗ್ರಿಪ್ ಆಗಿ ಹಿಡಿಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಸ್ವದೇಶದಲ್ಲಿ ಸ್ಪಿನ್ನರ್ ಗಳು ಹೆಚ್ಚು ಯಶಸ್ಸು ಸಾಧಿಸುತ್ತಿದ್ದಾರೆ ಮತ್ತು ಸ್ವದೇಶದಲ್ಲಿ ಭಾರತದ ಟ್ರ್ಯಾಕ್ ರೆಕಾರ್ಡ್ ಕೂಡ ಉತ್ತಮವಾಗಿದೆ. 1984-85ರಲ್ಲಿ ಭಾರತದಲ್ಲಿ ಡ್ಯೂಕ್ ಬಾಲ್ ಗಳನ್ನು ಬಳಸಲಾಗಿತ್ತು. ಅಂದಿನ ಸರಣಿ ಫಲಿತಾಂಶವೇ ಆ ಬಾಲ್ ಭಾರತೀಯ ಬೌಲರ್ ಗಳಿಗೆ ಎಷ್ಟು ನೆರವಾಗುತ್ತದೆ ಎಂಬುದನ್ನು ತೋರಿಸುತ್ತದೆ. ವಿದೇಶಗಳಲ್ಲಿ ಡ್ಯೂಕ್ ಬಾಲ್ ಗಳನ್ನು ಬಳಕೆ ಮಾಡುತ್ತಿದ್ದು, ಅಲ್ಲಿನ ಸರಣಿ ಫಲಿತಾಂಶವನ್ನೂ ಕೂಡ ನಾವು ನೋಡಬಹುದು. ಹೀಗಿದ್ದೂ ಭಾರತೀಯ ಬೌಲರ್ ಗಳೇಕೆ ಡ್ಯೂಕ್ ಬಾಲ್ ನ ಹಿಂದೆ ಬಿದ್ದಿದ್ದಾರೆ ಎಂದು ತಿಳಿಯುತ್ತಿಲ್ಲ. ನನ್ನ ಪ್ರಕಾರ ಭಾರತೀಯ ಪರಿಸ್ಥಿತಿಯಲ್ಲಿ ಎಸ್ ಜಿ ಬಾಲ್ ಗಳು ಅತ್ಯುತ್ತಮ ಆಯ್ಕೆಯಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆಯ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಸ್ವದೇಶ ಮತ್ತು ವಿದೇಶಗಳಲ್ಲಿ ನಡೆದ ಸರಣಿ ಫಲಿತಾಂಶಗಳೇ ನಿಮಗೆ ಯಾವ ಬಾಲ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರ ನೀಡುತ್ತವೆ. ಇತ್ತೀಚೆಗಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸ ಇದಕ್ಕೆ ಸ್ಪಷ್ಟ ನಿದರ್ಶನ ಕೂಡ. ಆಸಿಸ್ ನೆಲದಲ್ಲಿ ಕೂಕಬುರಾ ಚೆಂಡುಗಳಲ್ಲೇ ಹಿಡಿತ ಸಾಧಿಸಲು ಭಾರತೀಯ ಬೌಲರ್ ಗಳು ಪರದಾಡುತ್ತಾರೆ ಎಂದು ಹೇಳಿದ್ದಾರೆ. ಅಂತೆಯೇ ರಾಜ್ ಕೋಟ್ ನಲ್ಲಿ  ವಿಕೆಟ್ ಪಡೆದ ಕುಲದೀಪ್ ಯಾದವ್ ಉದ್ದೇಶಿಸಿ ಮಾತನಾಡಿದ ಅಜರುದ್ದೀನ್, ಐದು ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡ ಮೇಲೂ ಚೆಂಡಿನ ಕುರಿತು ದೂರು ನೀಡುತ್ತಿರುವುದು ನನಗೆ ಅಚ್ಚರಿ ತಂದಿದೆ. ಸ್ವದೇಶದಲ್ಲಿ ಟೀಂ ಇಂಡಿಯಾ ಯಶಸ್ಸಿಗೆ ಎಸ್ ಜಿ ಬಾಲ್ ನ ಪಾತ್ರವೂ ಇದೆ ಎಂಬುದನ್ನು ಮರೆಯಬಾರದು ಎಂದು ಅಜರುದ್ದೀನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT