ಅಲೆಕ್ಸ್ ಹೆಲ್ಸ್ 
ಕ್ರಿಕೆಟ್

ನಿಷೇಧಿತ ಡ್ರಗ್ಸ್ ಸೇವನೆ: ಇಂಗ್ಲೆಂಡ್ ವಿಶ್ವಕಪ್ ತಂಡದಿಂದ ಅಲೆಕ್ಸ್ ಹೆಲ್ಸ್ ಹೊರಕ್ಕೆ

ನಿಷೇಧಿತ ಡ್ರಗ್ಸ್ ಸವೇನೆ ಹಿನ್ನೆಲೆಯಲ್ಲಿ ಅಲೆಕ್ಸ್ ಹೆಲ್ಸ್ ಅವರಿಗೆ 21 ದಿನ ನಿರ್ಬಂಧ ವಿಧಿಸಿರುವುದರಿಂದ ಅವರನ್ನು ಮುಂದಿನ ವಿಶ್ವಕಪ್ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ.

ಲಂಡನ್ : ನಿಷೇಧಿತ ಡ್ರಗ್ಸ್  ಸವೇನೆ ಹಿನ್ನೆಲೆಯಲ್ಲಿ ಅಲೆಕ್ಸ್  ಹೆಲ್ಸ್ ಅವರಿಗೆ 21 ದಿನ  ನಿರ್ಬಂಧ  ವಿಧಿಸಿರುವುದರಿಂದ ಅವರನ್ನು ಮುಂದಿನ  ವಿಶ್ವಕಪ್ ಇಂಗ್ಲೆಂಡ್ ತಂಡದಿಂದ  ಕೈಬಿಡಲಾಗಿದೆ.

ಇಂಗ್ಲೆಂಡ್ ಪುರುಷರ ಕ್ರಿಕೆಟ್ ಮಂಡಳಿ  ವ್ಯವಸ್ಥಾಪಕ ನಿರ್ದೇಶಕ ಅಶ್ಲೆ ಗಿಲ್ಸ್  ಹಾಗೂ ಇಡಿ ಸ್ಮಿತ್ ನೇತೃತ್ವದ ಇಂಗ್ಲೆಂಡ್ ಆಯ್ಕೆದಾರರು ತಂಡದ ಹಿತಾಸಕ್ತಿಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ  ಇಸಿಬಿ ಹೇಳಿದೆ.

ತಂಡದೊಳಗೆ  ಉತ್ತಮ ವಾತಾವರಣ ಸೃಷ್ಟಿಸಿ  ಅನಗತ್ಯ ಗೊಂದಲ ಮೂಡದಂತೆ  ಗಮನ ಹರಿಸಲಾಗಿದೆ.  ಈ ನಿರ್ಣಾಯಕ ಹಂತದಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದ್ದು ಯಶಸ್ಸಿನತ್ತ ಸಾಗಿಸುವುದರತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮೈಲಹೈಡ್ ನಲ್ಲಿ ಶುಕ್ರವಾರ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲೂ ಹೆಲ್ಸ್ ಭಾಗವಹಿಸುತ್ತಿಲ್ಲ. ಅಲ್ಲದೇ  ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಹಾಗೂ  ಇಂಗ್ಲೆಂಡ್ ಟಿ-20  ತಂಡದಿಂದಲೂ ಅವರನ್ನು ಕೈ ಬಿಡಲಾಗಿದೆ.

ತುಂಬಾ ಯೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಅಲೆಕ್ಸ್ ಅವರ ಬದುಕಿನ ಕೊನೆ  ಇಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರೆಸಲಿವೆ. ದೇಶಿಯ ನಾಟ್ಟಿಗ್ಯಾಮ್ ಶೈರ್ ನಲ್ಲಿ ಆಡಲು ಅಗತ್ಯ ಸಹಾಕರ ನೀಡಲಾಗುವುದು, ವೃತ್ತಿಪರ ಕ್ರಿಕೆಟ್ ಆಟಗಾರರು ಏನನ್ನು ಬೇಕಾಗುತ್ತದೆಯೋ ಅದೆಲ್ಲಾ  ಸಹಾಯ ಮಾಡುವುದಾಗಿ ಗಿಲ್ಸ್ ಹೇಳಿದ್ದಾರೆ.

ಕಳೆದ ವಾರ  ಡ್ರಗ್ಸ್  ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಅಲೆಕ್ಸ್ ಹೆಲ್ಸ್   ಅವಪನ್ನು ತಪಾಸಣೆ ನಡೆಸಿದಾಗ ಸಕಾರಾತ್ಮಕವಾಗಿ ಕಂಡಬಂದಿದೆ. ಪ್ರಸ್ತುತ ಅಲೆಕ್ಸ್ ಹೆಲ್ಸ್ ಅವರನ್ನು 21 ದಿನಗಳ ಕಾಲ ನಿರ್ಬಂಧಿಲಾಗಿದೆ .
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಈ ಕ್ರಮದಿಂದಾಗಿ ಅಲೆಕ್ಸ್ ಹೆಲ್ಸ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ವರ್ಷ ಕೂಡಾ ಅಲೆಕ್ಸ್ ಹೆಲ್ಸ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ದಂಡ ವಿಧಿಸಿ ಆರು ಪಂದ್ಯಗಳಿಂದ ನಿರ್ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನರವಾಣೆ ಪುಸ್ತಕಕ್ಕೆ ಹೆದರಿ ಮೋದಿ ಲೋಕಸಭೆಗೆ ಗೈರು, ಭದ್ರತಾ ಕಾರಣದಿಂದ ಅಲ್ಲ: ರಾಹುಲ್ ಗಾಂಧಿ

'ಮತದಾರರ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡಲ್ಲ': ಮಮತಾ ಸರ್ಕಾರಕ್ಕೆ 'ಸುಪ್ರೀಂ' ಶಾಕ್

ಮೆಟ್ರೋ ಪ್ರಯಾಣ ದರ ಏರಿಕೆ ತಡೆದಿದ್ದು ನಾವೇ, ಕೇಂದ್ರ ಸರ್ಕಾರದ ಪಾತ್ರ ಇಲ್ಲ: DCM DK Shivakumar

ಸಂಸತ್ತಿನಲ್ಲಿ ಕೋಲಾಹಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ; ಲೋಕಸಭೆ ನಾಳೆಗೆ ಮುಂದೂಡಿಕೆ

ಹುಬ್ಬಳ್ಳಿ: ಕನ್ನಡ, ಕನ್ನಡ ವಿವಾದದ ಬಳಿಕ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಬಾಲಿವುಡ್ ಗಾಯಕ ಸೋನು ನಿಗಮ್

SCROLL FOR NEXT