ಅಲೆಕ್ಸ್ ಹೆಲ್ಸ್ 
ಕ್ರಿಕೆಟ್

ನಿಷೇಧಿತ ಡ್ರಗ್ಸ್ ಸೇವನೆ: ಇಂಗ್ಲೆಂಡ್ ವಿಶ್ವಕಪ್ ತಂಡದಿಂದ ಅಲೆಕ್ಸ್ ಹೆಲ್ಸ್ ಹೊರಕ್ಕೆ

ನಿಷೇಧಿತ ಡ್ರಗ್ಸ್ ಸವೇನೆ ಹಿನ್ನೆಲೆಯಲ್ಲಿ ಅಲೆಕ್ಸ್ ಹೆಲ್ಸ್ ಅವರಿಗೆ 21 ದಿನ ನಿರ್ಬಂಧ ವಿಧಿಸಿರುವುದರಿಂದ ಅವರನ್ನು ಮುಂದಿನ ವಿಶ್ವಕಪ್ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ.

ಲಂಡನ್ : ನಿಷೇಧಿತ ಡ್ರಗ್ಸ್  ಸವೇನೆ ಹಿನ್ನೆಲೆಯಲ್ಲಿ ಅಲೆಕ್ಸ್  ಹೆಲ್ಸ್ ಅವರಿಗೆ 21 ದಿನ  ನಿರ್ಬಂಧ  ವಿಧಿಸಿರುವುದರಿಂದ ಅವರನ್ನು ಮುಂದಿನ  ವಿಶ್ವಕಪ್ ಇಂಗ್ಲೆಂಡ್ ತಂಡದಿಂದ  ಕೈಬಿಡಲಾಗಿದೆ.

ಇಂಗ್ಲೆಂಡ್ ಪುರುಷರ ಕ್ರಿಕೆಟ್ ಮಂಡಳಿ  ವ್ಯವಸ್ಥಾಪಕ ನಿರ್ದೇಶಕ ಅಶ್ಲೆ ಗಿಲ್ಸ್  ಹಾಗೂ ಇಡಿ ಸ್ಮಿತ್ ನೇತೃತ್ವದ ಇಂಗ್ಲೆಂಡ್ ಆಯ್ಕೆದಾರರು ತಂಡದ ಹಿತಾಸಕ್ತಿಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ  ಇಸಿಬಿ ಹೇಳಿದೆ.

ತಂಡದೊಳಗೆ  ಉತ್ತಮ ವಾತಾವರಣ ಸೃಷ್ಟಿಸಿ  ಅನಗತ್ಯ ಗೊಂದಲ ಮೂಡದಂತೆ  ಗಮನ ಹರಿಸಲಾಗಿದೆ.  ಈ ನಿರ್ಣಾಯಕ ಹಂತದಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದ್ದು ಯಶಸ್ಸಿನತ್ತ ಸಾಗಿಸುವುದರತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮೈಲಹೈಡ್ ನಲ್ಲಿ ಶುಕ್ರವಾರ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲೂ ಹೆಲ್ಸ್ ಭಾಗವಹಿಸುತ್ತಿಲ್ಲ. ಅಲ್ಲದೇ  ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಹಾಗೂ  ಇಂಗ್ಲೆಂಡ್ ಟಿ-20  ತಂಡದಿಂದಲೂ ಅವರನ್ನು ಕೈ ಬಿಡಲಾಗಿದೆ.

ತುಂಬಾ ಯೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಅಲೆಕ್ಸ್ ಅವರ ಬದುಕಿನ ಕೊನೆ  ಇಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರೆಸಲಿವೆ. ದೇಶಿಯ ನಾಟ್ಟಿಗ್ಯಾಮ್ ಶೈರ್ ನಲ್ಲಿ ಆಡಲು ಅಗತ್ಯ ಸಹಾಕರ ನೀಡಲಾಗುವುದು, ವೃತ್ತಿಪರ ಕ್ರಿಕೆಟ್ ಆಟಗಾರರು ಏನನ್ನು ಬೇಕಾಗುತ್ತದೆಯೋ ಅದೆಲ್ಲಾ  ಸಹಾಯ ಮಾಡುವುದಾಗಿ ಗಿಲ್ಸ್ ಹೇಳಿದ್ದಾರೆ.

ಕಳೆದ ವಾರ  ಡ್ರಗ್ಸ್  ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಅಲೆಕ್ಸ್ ಹೆಲ್ಸ್   ಅವಪನ್ನು ತಪಾಸಣೆ ನಡೆಸಿದಾಗ ಸಕಾರಾತ್ಮಕವಾಗಿ ಕಂಡಬಂದಿದೆ. ಪ್ರಸ್ತುತ ಅಲೆಕ್ಸ್ ಹೆಲ್ಸ್ ಅವರನ್ನು 21 ದಿನಗಳ ಕಾಲ ನಿರ್ಬಂಧಿಲಾಗಿದೆ .
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಈ ಕ್ರಮದಿಂದಾಗಿ ಅಲೆಕ್ಸ್ ಹೆಲ್ಸ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ವರ್ಷ ಕೂಡಾ ಅಲೆಕ್ಸ್ ಹೆಲ್ಸ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ದಂಡ ವಿಧಿಸಿ ಆರು ಪಂದ್ಯಗಳಿಂದ ನಿರ್ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಮರೀಚಿಕೆ: ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದ್ದೇನು?

ಇದೇ ಮೊದಲು: UP YouTuber ಮನೆ ಮೇಲೆ ED ದಾಳಿ: ಲಂಬೋರ್ಗಿನಿ, BMW Z4 ಐಷಾರಾಮಿ ಕಾರುಗಳನ್ನು ನೋಡಿ ಅಧಿಕಾರಿಗಳು ದಂಗು!

ನಾವು ಭಿಕ್ಷುಕರಲ್ಲ; ಕೇಂದ್ರ ಹಣ ನಿಲ್ಲಿಸಿದರೂ ಉದ್ಯೋಗ ಸೃಷ್ಟಿಸುತ್ತೇವೆ: ಉದ್ಯೋಗ ಖಾತ್ರಿ ಯೋಜನೆಗೆ ಗಾಂಧಿ ಹೆಸರು ಘೋಷಿಸಿದ ದೀದಿ!

Hijab ವಿವಾದ ಬೆನ್ನಲ್ಲೇ ಸಿಎಂ ವಿರುದ್ಧ ದೂರು ದಾಖಲು: ಬೆದರಿಕೆ ಹಿನ್ನಲೆ ನಿತೀಶ್ ಕುಮಾರ್‌ ಭದ್ರತೆ ಹೆಚ್ಚಳ!

SHANTI Bill: ಅಣು ಶಕ್ತಿಯ ಖಾಸಗೀಕರಣ, ಸುರಕ್ಷತೆ, ಹೊಣೆಗಾರಿಕೆ ಬಗ್ಗೆ ವಿಪಕ್ಷಗಳು ಕಳವಳ; 'ಬಡತನ ಕಡಿಮೆ' ಮಾಡುತ್ತದೆ ಎಂದ ಸುಧಾ ಮೂರ್ತಿ!

SCROLL FOR NEXT