ನವದೀಪ್‌ ಸೈನಿ 
ಕ್ರಿಕೆಟ್

ಐಸಿಸಿ ನಿಯಮ ಉಲ್ಲಂಘನೆ: ನವದೀಪ್‌ ಸೈನಿಗೆ ಒಂದು ಡಿಮೆರಿಟ್‌ ಅಂಕ

ಶನಿವಾರ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತದ ತಂಡದ ಯುವ ವೇಗಿ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ.

ಫ್ಲೋರಿಡಾ: ಶನಿವಾರ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತದ ತಂಡದ ಯುವ ವೇಗಿ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ. 
ಈ ವಿಷಯ ಐಸಿಸಿ ಹೇಳಿಕೆಯಿಂದ ತಿಳಿದುಬಂದಿದ್ದು, ಬೌಲಿಂಗ್‌ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ ಗಳ ವಿಕೆಟ್‌ ಉರುಳಿಸಿದಾಗ ಅನುಚಿತ ವರ್ತನೆ ತೋರಿದ್ದರಿಂದ ಸೈನಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಐಸಿಸಿ 2.5 ಅರ್ಟಿಕಲ್‌ ಪ್ರಕಾರ ಆಟಗಾರರು ಹಾಗೂ ಪಂದ್ಯದ ಸಹಾಯಕ ಸಿಬ್ಬಂದಿ ಮೇಲೆ ಯಾವುದೇ ಆಟಗಾರ ನಿಯಮ ಮೀರಿ ವರ್ತಿಸುವಾಗಿಲ್ಲ.
ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ. ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಗೆಲ್‌ ಡುಗ್ವೈಡ್‌ ಮತ್ತು ಗ್ರೆಗೋರಿ ಬ್ರಾಥ್‌ವೇಟ್‌ ಜತೆಗೆ ಮೂರನೇ ಅಂಪೈರ್‌ ಲೆಸ್ಲಿ ರೇಫರ್‌ ಮತ್ತು ನಾಲ್ಕನೇ ಅಧಿಕಾರಿ ಪ್ಯಾಟ್ರಿಕ್‌ ಗಸ್ಟರ್ಡ್‌ ಅವರು ಈ ಪ್ರಕರಣದ ಬಗ್ಗೆ ಚರ್ಚಿಸಿ ಈ ನಿರ್ಧಾರ ಘೋಷಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲೇ ನವದೀಪ್‌ ಸೈನಿ ಅವರು ಅಮೋಘ ಬೌಲಿಂಗ್‌ ಮಾಡಿದ್ದರು. ನಾಲ್ಕು ಓವರ್‌ಗಳಲ್ಲಿ ಒಂದು ಮೆಡಿನ್‌ನೊಂದಿಗೆ 17 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 
ಒಬ್ಬ ಆಟಗಾರರ 24 ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಡಿಮೆರಿಟ್‌ ಅಂಕಗಳನ್ನು ಪಡೆದರೆ ಅವರ ಮೇಲೆ ನಿಷೇಧ ಹೇರಬಹುದು. ಎರಡು ಅಮಾನತು ಅಂಕಗಳು ಪಡೆದರೆ, ಆ ಆಟಗಾರ ಒಂದು ಟೆಸ್ಟ್, ಎರಡು ಏಕದಿನ ಪಂದ್ಯ ಅಥವಾ ಎರಡು ಟಿ-20 ಪಂದ್ಯಗಳಿಂದ ನಿಷೇದ ಹೇರಲಾಗುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT